ಗಂಗಾವತಿ:ನಿಧಿಗಳ್ಳರಿಂದ ಐತಿಹಾಸಿಕ ದೇವಘಾಟ್ ಅಮೃತೇಶ್ವರ ಗುಡಿ ಧ್ವಂಸ
Team Udayavani, Jan 1, 2022, 10:34 AM IST
ಗಂಗಾವತಿ : ಇತಿಹಾಸ ಪ್ರಸಿದ್ಧ ದೇವಘಾಟದಲ್ಲಿರುವ ಅಮೃತೇಶ್ವರ ದೇಗುಲದ ಗರ್ಭಗುಡಿಯ ಮುಂದಿನ ಭಾಗದಲ್ಲಿ ನಿಧಿಗಳ್ಳರು ಗುಂಡಿ ತೋಡಿದ ಪ್ರಕರಣ ಗುರುವಾರ ರಾತ್ರಿ ಜರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ದೇಗುಲ ಕಮೀಟಿಯವರು ಕೇಸ್ ದಾಖಲಿಸಿದ್ದಾರೆ.
ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿರುವ ಅಮೃತೇಶ್ವರ ದೇಗುಲದಲ್ಲಿ ಶಿವಲಿಂಗ ಹಾಗೂ ನಂದಿ ವಿಗ್ರಹಗಳಿದ್ದು ನಿಧಿ ಆಸೆಗಾಗಿ ಈಗಾಗಲೇ ಹಲವು ಭಾರಿ ನಿಧಿಗಳ್ಳರು ಇಲ್ಲಿಯ ಗರ್ಭಗುಡಿಯ ಮುಂದಿನ ಭಾಗದಲ್ಲಿ ಆಳವಾಗಿ ನೆಲವನ್ನು ತೋಡಿದ್ದರು. ಗುರುವಾರ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಗರ್ಭಗುಡಿ ಹಾಗೂ ಮುಂದಿನ ಭಾಗದ ಪಡಸಾಲಿಯನ್ನು ತೋಡಿ ನಿಧಿಗಾಗಿ ಶೋಧ ನಡೆಸಿರುವ ಶಂಕೆ ಇದೆ. ಕಳೆದ ವರ್ಷಗಳ ಹಿಂದೆ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿರುವ ವ್ಯಾಸರಾಯ(ರಾಜ)ರ ವೃಂದಾವನ ಧ್ವಂಸ ಮಾಡಿ ನಿಧಿಗಾಗಿ ಶೋಧ ನಡೆಸಲಾಗಿತ್ತು. ಇದೇ ತರ ಹೇಮಗುಡ್ಡ, ವಾಣಿಭದ್ರೇಶ್ವರ ಸೇರಿ ಈ ಭಾಗದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯಗಳನ್ನು ತೋಡಿ ನಿಧಿಗಾಗಿ ನಿಧಿಗಳ್ಳರು ಸ್ಮಾರಕಗಳನ್ನು ನಾಶ ಮಾಡುತ್ತಿದ್ದಾರೆ.
ಅಮೃತೇಶ್ವರ ದೇಗುಲದ ಗರ್ಭಗುಡಿ ಮುಂದಿನ ಭಾಗವನ್ನು ನಿಧಿಗಳ್ಳರು ಗುರುವಾರ ತೋಡಿ ನಿಧಿ ಶೋಧ ಮಾಡಲಾಗಿದೆ. ಈ ಕುರಿತು ದೇಗುಲ ಕಮೀಟಿಯ ನಿರ್ಣಯದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕಮೀಟಿಯ ವಿರೇಶ ಕೊಳ್ಳಿ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ