ದೇಸಿ ಅಕ್ಕಿ ಮೌಲ್ಯವರ್ಧನೆಗೆ “ಜಿಐ ಟ್ಯಾಗ್‌’


Team Udayavani, Jun 9, 2019, 3:10 AM IST

desi-aki

ಹಾವೇರಿ: ರಾಜ್ಯದಲ್ಲಿರುವ ದೇಸಿ ಅಕ್ಕಿ ತಳಿಗಳಿಗೆ ಜಿಐ ಟ್ಯಾಗ್‌ (ಭೌಗೋಳಿಕ ಸನ್ನದು) ಮೂಲಕ ಮಾರುಕಟ್ಟೆ ಮೌಲ್ಯ ಹೆಚ್ಚಿಸಲು ಹಾಗೂ ರೈತರಿಗೆ ಆರ್ಥಿಕ ಸುಸ್ಥಿರತೆ ತಂದು ಕೊಡಲು ರಾಜ್ಯ ಕೃಷಿ ಬೆಲೆ ಆಯೋಗ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಎಂಬ ಖ್ಯಾತಿಗೂ ಪಾತ್ರವಾಗಿದೆ.

ದೇಶದಲ್ಲಿ ಬಾಸುಮತಿ ಅಕ್ಕಿ, ಡಾರ್ಜಿಲಿಂಗ್‌ ಚಹ, ನಾಗಪುರ ಕಿತ್ತಳೆ, ಕೊಲ್ಲಾಪುರ ಚಪ್ಪಲಿ, ಕಾಂಚೀಪುರದ ರೇಷ್ಮೆ ಸೀರೆ, ಮಹಾರಾಷ್ಟ್ರದ ಅಲ್ಫಾ ನ್ಸೊ ಮಾವು ಇತ್ಯಾದಿ ಉತ್ಪನ್ನಗಳು ಜಿಐ ಟ್ಯಾಗ್‌ ಪಡೆದಿವೆ. ಕರ್ನಾಟಕದಲ್ಲಿ ನಂಜನಗೂಡು ರಸಬಾಳೆ, ಕೊಡಗಿನ ಕಿತ್ತಳೆ, ಧಾರವಾಡ ಪೇಡಾ, ಚನ್ನಪಟ್ಟಣದ ಬೊಂಬೆ, ಮೈಸೂರು ವೀಳ್ಯದೆಲೆ, ಮೈಸೂರು ರೇಷ್ಮೆ ಸೀರೆ, ಬೀದರ್‌ನ ಬಿದರಿ ಕಲೆ ಮೊದಲಾದ 40 ಉತ್ಪನ್ನಗಳಿಗೆ “ಜಿಐ ಟ್ಯಾಗ್‌’ ಸಿಕ್ಕಿದೆ. ಆದರೆ, ಈವರೆಗೆ ಯಾವುದೇ ಕೃಷಿ ಬೆಳೆಗೆ ಜಿಐ ಟ್ಯಾಗ್‌ ಸಿಕ್ಕಿರಲಿಲ್ಲ. ಕೃಷಿ ಬೆಲೆ ಆಯೋಗ ಇದೇ ಮೊದಲ ಬಾರಿಗೆ ಕೃಷಿ ಬೆಳೆಯಾದ ದೇಸಿ ಅಕ್ಕಿಗೆ “ಜಿಐ ಟ್ಯಾಗ್‌’ ಮಾಡಲು ಮುಂದಾಗಿದೆ.

ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಬೆಳೆಯುವ “ರಾಜಮುಡಿ’; ಹಾವೇರಿ, ಧಾರವಾಡ, ಸಿಂಧನೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಸಿಗುವ “ಗಂಧಸಾಲೆ ಅಕ್ಕಿ’; ಬೆಂಗಳೂರು, ಕೋಲಾರಗಳಲ್ಲಿ ಹೆಚ್ಚು ಬೆಳೆಯುವ “ದೊಡ್ಡ ಭೈರನೆಲ್ಲು’; ಧಾರವಾಡ, ಬೆಳಗಾವಿ, ಉತ್ತರ ಕನ್ನಡಗಳಲ್ಲಿ ಬೆಳೆಯುವ “ಕರಿಗಜಿವಿಲಿ’; ಮಲೆನಾಡು ಪ್ರದೇಶದಲ್ಲಿ ಬೆಳೆಯುವ “ಸಣ್ಣವಾಳ್ಯ’, ವರದಾ ನದಿ ಪಾತ್ರದಲ್ಲಿ ಬೆಳೆಯುವ “ಕರಿಜೆಡ್ಡು’;

ಮೈಸೂರು ಸುತ್ತಮುತ್ತ ಬೆಳೆಯುವ “ರತ್ನಚೂಡಿ’… ಹೀಗೆ ವಿವಿಧ 10 ದೇಸಿ ಅಕ್ಕಿತಳಿಗಳಿಗೆ “ಜಿಐ ಟ್ಯಾಗ್‌’ ಮಾಡಲು ಆಯೋಗ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ “ರಾಜಮುಡಿ’ ಅಕ್ಕಿತಳಿಗೆ “ಜಿಐ ಟ್ಯಾಗ್‌’ ಮಾಡುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಸ್ವಯಂಸೇವಾ ಸಂಸ್ಥೆ ಮೂಲಕ ಬೆಳೆಗಾರರ ಗುಂಪು ಮಾಡಿ ಅಕ್ಕಿ ತಳಿಯ ಪ್ರಾದೇಶಿಕತೆ, ಗುಣಮಟ್ಟ, ಮಾರುಕಟ್ಟೆ, ಬೇಡಿಕೆ ಹೀಗೆ ಎಲ್ಲ ಕೋನಗಳಲ್ಲಿ ಅಧ್ಯಯನ ನಡೆಸುತ್ತಿದೆ.

ಏನಿದು ಜಿಐ ಟ್ಯಾಗ್‌?…: “ಜಿಐ ಟ್ಯಾಗ್‌’ ಬಗ್ಗೆ ಸರಳವಾಗಿ ಹೇಳುವುದಾದರೆ ಇದೊಂದು ಸೂಚಕ. ಒಂದು ಉತ್ಪನ್ನವನ್ನು ಅದು ತಯಾರಾಗುವ ಅಥವಾ ಉತ್ಪಾದನೆಯಾಗುವ ಸ್ಥಳದಿಂದ ಗುರುತಿಸಿದರೆ ಅದರ ಆಧಾರದ ಮೇಲೆ ಗುಣಮಟ್ಟ ನಿರ್ಧರಿತವಾಗುತ್ತದೆ. ಆ ಗುಣಮಟ್ಟ ನಿರ್ಧರಿಸುವುದಕ್ಕೆ “ಭೌಗೋಳಿಕ ಸನ್ನದು ಗುರುತು’ (ಜಿಐ ಟ್ಯಾಗ್‌) ಎಂದು ಕರೆಯಲಾಗುತ್ತದೆ. ಕೃಷಿ, ನೈಸರ್ಗಿಕ ಅಥವಾ ಉತ್ಪನ್ನಗಳನ್ನು ಗುರುತಿಸಲು “ಜಿಐ ಟ್ಯಾಗ್‌’ ಬಳಸಲಾಗುತ್ತದೆ.

“ಜಿಐ ಟ್ಯಾಗ್‌’ ಪಡೆದ ಸಾಮಗ್ರಿ ಆ ನಿರ್ದಿಷ್ಟ ವಲಯದೊಳಗೆ ಉತ್ಪಾದನೆಯಾಗಿರಬೇಕು ಹಾಗೂ ಕೆಲವು ವಿಶೇಷ ಗುಣಲಕ್ಷಣಗಳನ್ನು ಪಡೆದಿರಬೇಕು. ವಹಿವಾಟಿನಲ್ಲಿ ಬಳಕೆಯಾಗುವ “ಟ್ರೇಡ್‌ ಮಾರ್ಕ್‌’ ಉದ್ಯಮಕ್ಕೆ ಸಂಬಂಧಿಸಿದ್ದಾದರೆ “ಜಿಐ ಟ್ಯಾಗ್‌’ ವಿಶೇಷ ಪ್ರದೇಶದಲ್ಲಿ ಉತ್ಪಾದನೆಯಾಗುವ ಬೆಳೆ, ವಸ್ತು ಅಥವಾ ಉತ್ಪನ್ನವನ್ನು ಗುರುತಿಸಲು ಬಳಕೆಯಾಗುತ್ತದೆ.

ಭೌಗೋಳಿಕವಾಗಿ ವಿಶಿಷ್ಟ ಗುಣಲಕ್ಷಣ ಹೊಂದಿರುವ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ “ಜಿಐ ಟ್ಯಾಗ್‌’ (ಜಿಯಾಗ್ರಫಿಕಲ್‌ ಇಂಡಿಕೇಶನ್ಸ್‌ ಟ್ಯಾಗ್‌) ನೀಡುತ್ತದೆ. ಅಂಥ ಉತ್ಪನ್ನಗಳನ್ನು ಸಂಬಂ ಧಿಸಿದ ಗುಂಪು ಅಥವಾ ವ್ಯಕ್ತಿಗಳಲ್ಲದೆ ಬೇರೆಯವರು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬುದು ಪ್ರಮುಖ ಷರತ್ತಾಗಿದೆ. ಒಮ್ಮೆ ನೋಂದಾಯಿಸಿದ ‘ಜಿಐ ಟ್ಯಾಗ್‌’, ಹತ್ತು ವರ್ಷಗಳ ಅವಧಿ ಗೆ ಚಾಲ್ತಿಯಲ್ಲಿ ಇರುತ್ತದೆ. ಆ ಬಳಿಕ ಮತ್ತೆ ಹತ್ತು ವರ್ಷಗಳ ಅವ ಧಿಗೆ ನವೀಕರಣ ಮಾಡಿಸಿಕೊಳ್ಳಬಹುದು.

“ಜಿಐ ಟ್ಯಾಗ್‌’ನಿಂದ ಏನು ಪ್ರಯೋಜನ?: “ಜಿಐ ಟ್ಯಾಗ್‌’ನಿಂದ ಭಾರತದ ಭೌಗೋಳಿಕ ವಲಯಗಳಿಗೆ ಕಾನೂನಾತ್ಮಕ ರಕ್ಷಣೆ ದೊರಕುತ್ತದೆ. ನೋಂದಾಯಿತ ಭೌಗೋಳಿಕ ಸನ್ನದಿನ ಅನಧಿ ಕೃತ ಬಳಕೆಗೆ ತಡೆ ಹಾಕುತ್ತದೆ. ಭೌಗೋಳಿಕ ಸನ್ನದಿಗೆ ಕಾನೂನು ಸಮ್ಮತ ರಕ್ಷಣೆ ಒದಗಿಸಿ, ಆ ವಲಯದ ಉತ್ಪನ್ನಗಳ ರಫ್ತಿಗೆ ಅವಕಾಶ ನೀಡುತ್ತದೆ. ನಿರ್ದಿಷ್ಟ ವಲಯದಲ್ಲಿ ಉತ್ಪಾದನೆಯಾದ ಸಾಮಗ್ರಿಗಳಿಗೆ ಮಾರುಕಟ್ಟೆ ಸಿಕ್ಕು, ಆ ಪ್ರದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗುತ್ತದೆ.

ರಾಜ್ಯದ ದೇಸಿ ಅಕ್ಕಿ ತಳಿಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ, ಈ ಅವಕಾಶದ ಲಾಭ ಬೆಳೆಗಾರರಿಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಕನ್ನಡ ನಾಡಿನ ದೇಸಿ ಅಕ್ಕಿ ತಳಿಗಳಿಗೆ “ಜಿಐ ಟ್ಯಾಗ್‌’ ಪಡೆದರೆ, ರೈತರು ಮಾರುಕಟ್ಟೆಯಲ್ಲಿ ಅತ್ಯ ಧಿಕ ಲಾಭ ಗಳಿಸಬಹುದು. ದೇಸಿ ಅಕ್ಕಿಯ ಹೆಸರಲ್ಲಿ ವ್ಯಾಪಾರಸ್ಥರು ಮಾಡುವ ಅಕ್ರಮವನ್ನೂ ನಿಲ್ಲಿಸಬಹುದೆಂಬ ಚಿಂತನೆ ಕೃಷಿ ಬೆಲೆ ಆಯೋಗದ್ದಾಗಿದೆ.

ಕರ್ನಾಟಕದ ದೇಸಿ ತಳಿಗಳಿಗೆ ಈಗ “ಜಿಐ ಟ್ಯಾಗ್‌’ ಕೊಡುವ ಮೂಲಕ ಆ ತಳಿ ಬೆಳೆಯುವ ರೈತರಿಗೆ ಆರ್ಥಿಕ ಸುಸ್ಥಿರತೆ ತಂದು ಕೊಡಲು ಸರ್ಕಾರ, ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಬೆಲೆ ಆಯೋಗ ಪ್ರಯತ್ನ ನಡೆಸುತ್ತಿದೆ. ಇದರ ಮೊದಲ ಹಂತವಾಗಿ “ರಾಜಮುಡಿ’ ಅಕ್ಕಿ ತಳಿಗೆ “ಜಿಐ ಟ್ಯಾಗ್‌’ ಮಾಡುವ ಕಾರ್ಯ ನಡೆದಿದೆ.
-ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ

* ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.