ಗುಂಡ್ಲುಪೇಟೆ : ಉಕ್ರೇನ್ ನಿಂದ ಸ್ವಗ್ರಾಮಕ್ಕೆ ಅಗಮಿಸಿ ಕಾವ್ಯ
ಮನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ: ಆರೋಗ್ಯ ವಿಚಾರಣೆ
Team Udayavani, Mar 6, 2022, 7:23 PM IST
ಗುಂಡ್ಲುಪೇಟೆ(ಚಾಮರಾಜನಗರ): ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬೇಗೂರು ಹೋಬಳಿಯ ಕಮರಹಳ್ಳಿ ಗ್ರಾಮದ ಕಾವ್ಯ ಭಾನುವಾರ ಮನೆಗೆ ಆಗಮಿಸಿದ್ದಾರೆ.
ಈ ಕುರಿತು ಉದಯವಾಣಿ ಜೊತೆಗೆ ಅನಿಸಿಕೆ ಹಂಚಿಕೊಂಡ ಕಾವ್ಯ, 9ರಿಂದ 10 ದಿನಗಳ ಕಾಲ ಖಾರ್ಕಿವ್ ನಗರದ ಬಂಕರ್ ವೊಂದರಲ್ಲಿದ್ದೆವು. ಆ ವೇಳೆ ಬಾಂಬ್ ಬ್ಲಾಸ್ಟಿಂಗ್ ಶಬ್ದ ಕೇಳಿಸುತ್ತಿತ್ತು. ಈ ಕಾರಣದಿಂದ ನಾವು ಹೊರಗೆ ಬರಲಿಲ್ಲ. ನಾವು ಇದ್ದ ಬಂಕರ್ ನಲ್ಲಿ ಆಹಾರ, ನೀರು ಸಿಗುತ್ತಿತ್ತು. ಮಾ.1ರಂದು ಇಂಡಿಯಾಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದೆ. ಆದರೆ ಫೆ.24ರಿಂದಲೇ ಯುದ್ಧ ಆರಂಭವಾಯಿತು. ಕಾಲೇಜಿನವರು ಯಾವುದೇ ರೀತಿಯ ಯುದ್ಧ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ನಾವು ಕಾಲೇಜಿಗೆ ಹೋಗುತ್ತಿದ್ದೆವು. ಅಲ್ಲಿನ ಸ್ಥಳೀಯರನ್ನು ವಿಚಾರಿಸಿದ್ದರೂ ಸಹ ಅವರೂ ಯುದ್ಧ ನಡೆಯುವುದಿಲ್ಲ 2014ರಿಂದ ಇದೇ ತರಹದ ಮಾತುಕತೆ ನಡೆಯುತ್ತಿದೆ ಎನ್ನುತ್ತಿದ್ದರು ಎಂದು ತಿಳಿಸಿದರು.
ಮೊದಲು ಖಾರ್ಕಿವ್ ನಲ್ಲಿ ಟ್ರೈನ್ ಹತ್ತಿ ನಾವು ಪೊಲ್ಯಾಂಡ್ಗೆ ಬಂದಿಳಿದೆವು. ನಂತರ ವಿಮಾನ ಮೂಲಕ ಬೆಂಗಳೂರಿಗೆ ಶನಿವಾರ ಮಧ್ಯರಾತ್ರಿ ಆಗಮಿಸಿ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಗೆ ಬಂದೆವು ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕುಂದಾಪುರ: ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಸಾವು
ಕಾವ್ಯ ಮನೆಗೆ ಜಿಲ್ಲಾಧಿಕಾರಿ ಭೇಟಿ: ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬೇಗೂರು ಹೋಬಳಿಯ ಕಮರಹಳ್ಳಿ ಗ್ರಾಮದ ಕಾವ್ಯ ಭಾನುವಾರ ಬೆಳಗ್ಗೆ ಸ್ವಗ್ರಾಮಕ್ಕೆ ಮರಳಿದ ಸುದ್ದಿ ತಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ವಿದ್ಯಾರ್ಥಿನಿ ಕಾವ್ಯ ತಮ್ಮ ಅನುಭವ ಹಂಚಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಎಎಸ್ಪಿ ಸುಂದರ್ ರಾಜ್, ಉಪ ವಿಭಾಗ ಅಧಿಕಾರಿ ಗಿರೀಶ್, ಡಿವೈಎಸ್ಪಿ ಪ್ರಿಯದರ್ಶಿಣಿ ಸಾಣೆಕೊಪ್ಪ, ತಹಸೀಲ್ದಾರ್ ರವಿಶಂಕರ್, ಕುಟುಂಬದ ಸದಸ್ಯರಾದ ರವಿ, ಪ್ರಮೋದ, ತಾತ ವಿಜಯಕುಮಾರ ಮಾವ ರಾಜೇಶ್, ಸಂತೋಷ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ
Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ
Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ
MUST WATCH
ಹೊಸ ಸೇರ್ಪಡೆ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣಸ್ವಾಮಿ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ