ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ

ಗಾಯನ ನಿಲ್ಲಿಸಿದ ಜಾನಪದ `ಗುರು' ಕೆಂಧೂಳಿ

Team Udayavani, Feb 27, 2023, 5:33 PM IST

ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ

ರಬಕವಿ-ಬನಹಟ್ಟಿ : ಯಾಕ ತಂಗಿ ಇಷ್ಟ್ಯಾಕ ಸೊರಗಿದಿ…, ಹೆಂಡತಿ ಅಂದರ ನಗುತಾನ… ಹೀಗೆ ಸಾವಿರಾರು ಜಾನಪದ ಗೀತೆಗಳನ್ನು ಹಾಡಿ ಲಕ್ಷಾಂತರ ಜನರ ಮನಗೆದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಖ್ಯಾತ ಗಾಯಕ ಗುರುರಾಜ ಕೆಂಧೂಳಿ(72) ಸೋಮವಾರದಂದು ನಿಧನರಾದರು. ಮೃತರು ಪತ್ನಿ ಸುಪುತ್ರ ಹಾಗೂ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1951 ರಲ್ಲಿ ಬಡಕುಟುಂಬದಲ್ಲಿ ಜನಿಸಿದ ಗುರುರಾಜ ಕೆಂಧೂಳಿ ಹುಟ್ಟಿನಿಂದಲೇ ಜನಪದ ಕಲೆ ಮೈಗೂಡಿಸಿಕೊಂಡು ಬೆಳೆದವರು. ಕ್ಯಾಸೆಟ್‌ಗಳ ಕಾಲವಾಗಿದ್ದ 1985 ರಲ್ಲಿ `ಯಾಕ ತಂಗಿ ಇಷ್ಟ್ಯಾಕ ಸೊರಗಿದಿ’ ಎಂಬ ಜಾನಪದ ಗೀತೆ ರಾಜ್ಯದೆಲ್ಲೆಡೆ ಪಸರಿಸಿಕೊಂಡು ಮನೆಮಾತಾದರು. ಮರು ವರ್ಷವೇ ಹೆಂಡತಿ ಅಂದರ ನಗುತಾನ.. ಎಂಬ ಗೀತೆಯೆಂದಿಗೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸಿಕೊಂಡು ಸಾವಿರಾರು ಹಾಡುಗಳಿಗೆ ಸಾಕ್ಷಿಯಾಗಿದ್ದರು.

ಸುಮಾರು 150 ಕ್ಕೂ ಹೆಚ್ಚು ಜನಪದ ಹಾಗೂ ಭಕ್ತಿ ಗೀತೆಗಳನ್ನು ರಚಿಸಿ ಅವುಗಳನ್ನು ಧ್ವನಿ ಸುರಳಿಗೆ ಅಳವಡಿಸಿ ಹಾಡಿರುವ ಕೆಂಧೂಳಿ ಸುಮಾರು ಮೂರುನೂರುಕ್ಕೂ ಹೆಚ್ಚು ಧ್ವನಿ ಸುರಳಿಗಳಿಗೆ ಹಾಡಿದ್ದಾರೆ. ನಾಡಿನ ಶ್ರೇಷ್ಠ ಗಾಯಕರಾದ ಮಂಜುಳಾ ಗುರುರಾಜ, ಚಂದ್ರಿಕಾ ಗುರುರಾಜ, ಬಿ.ಆರ್.ಛಾಯಾ ಮತ್ತು ಕಸ್ತೂರಿ ಶಂಕರ ಅವರು ಗುರುರಾಜ ಕೆಂಧೂಳಿಯವರ ಕ್ಯಾಸೆಟ್‌ಗಳಿಗೆ ಹಾಡಿರುವುದು ಅಪರೂಪದ ಸಂಗತಿ.

ಗುರುರಾಜ ಕೆಂಧೂಳಿಯವರು ಹಾಡಿರುವ ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಭಕ್ತಿ ಗೀತೆಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿವೆ. ನೆರೆಯ ಆಂಧ್ರದ ಶ್ರೀಶೈಲಕ್ಕೆ ಹೋಗಿ ಭಕ್ತಿ ಗೀತೆಗಳ ಕ್ಯಾಸೆಟ್‌ಗಳನ್ನು ಕೊಡಿ ಎಂದರೆ ಸಾಕು ಅವರು ಮೊದಲು ತಮ್ಮ ಮುಂದಿಡುವುದೇ ಕೆಂಧೂಳಿಯವರ ಕ್ಯಾಸೆಟ್‌ಗಳನ್ನು “ಮಾಡಿರೋ ಮಲ್ಲಯ್ಯನ ಧ್ಯಾನ”, “ಕಂಬಿ ಹಾಡುಗಳು”, “ಶ್ರೀಶೈಲ ಯಾತ್ರಾ ಮಾಡೋಣ ನಡಿ”, “ಮಲ್ಲಯ್ಯ ಬಂದಾನ ನಡಿ”, “ಉಘೇ ಮಲ್ಲಯ್ಯ”, “ಶ್ರೀಗಿರಿ ಮಲ್ಲಯ್ಯ” ಇಂತಹ ಹತ್ತಾರು ಅವರು ಧ್ವನಿ ಸುರಳಿಗಳು ಪ್ರಸಿದ್ಧವಾಗಿವೆ.

ಕ್ಯಾಸೆಟ್ ಯುಗದಲ್ಲಿ ಅವರ ಕ್ಯಾಸೆಟ್‌ಗಳು ಉತ್ತರಕರ್ನಾಟಕದ ಪ್ರತಿಯೊಂದು ಅಂಗಡಿಯಲ್ಲಿಯೂ ರಾರಾಜಿಸುತ್ತಿದ್ದವು. ಈಗಲೂ ಕೂಡಾ ಅವು ಸಿಡಿಗಳ ಮೂಖಾಂತರ ಮಾರಾಟವಾಗುತ್ತಿದ್ದು, ಹಳ್ಳಿಯ ಜನ ಇವರ ಕ್ಯಾಸೆಟ್ ಮತ್ತು ಸಿಡಿಗಳಿಗೋಸ್ಕರ ಮುಗಿಬೀಳುವುದು ಸರ್ವೆ ಸಾಮಾನ್ಯವಾಗಿತ್ತು. ಇಂತಹ ಕೆಂಧೂಳಿ ಇದೀಗ ಇಹಲೋಕ ತ್ಯಜಿಸಿದ್ದು, ಅಪಾರ ಸಂಖ್ಯೆ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್ ಅವರನ್ನು ಸಂಪುಟದಿಂದ ವಜಾಗೊಳಿಸಿ; ರಕ್ಷಾ ರಾಮಯ್ಯ ಒತ್ತಾಯ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.