ಹಳೆಯಂಗಡಿ: ರೈಲ್ವೇ ಕ್ರಾಸಿಂಗ್‌ ಗೇಟ್‌ ಲಾಕ್‌! ಮೂವತ್ತು ನಿಮಿಷ ಸಂಚಾರಕ್ಕೆ ತಡೆ


Team Udayavani, Feb 27, 2022, 1:23 PM IST

ಹಳೆಯಂಗಡಿ: ರೈಲ್ವೇ ಕ್ರಾಸಿಂಗ್‌ ಗೇಟ್‌ ಲಾಕ್‌! ಮೂವತ್ತು ನಿಮಿಷ ಸಂಚಾರಕ್ಕೆ ತಡೆ

ಹಳೆಯಂಗಡಿ : ಹಳೆ ಯಂಗಡಿಯ ರೈಲ್ವೇ ಕ್ರಾಸಿಂಗ್‌ನಲ್ಲಿ ತಾಂತ್ರಿಕ ತೊಂದರೆಯಿಂದ ಗೇಟ್‌ ಲಾಕ್‌ ಆಗಿ ಸುಮಾರು ಮೂವತ್ತು ನಿಮಿಷ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಶನಿವಾರ ಸಂಭವಿಸಿದೆ. ಹಳೆಯಂಗಡಿ-ಪಕ್ಷಿಕೆರೆ ರಸ್ತೆಯಲ್ಲಿ ರೈಲ್ವೇ ಗೇಟ್‌ನ ಕ್ರಾಸಿಂಗ್‌ನಲ್ಲಿ ರೈಲಿನ ಎಂಜಿನ್‌ ಸಂಚರಿಸಲು ಗೇಟ್‌ ಅನ್ನು ಬಂದ್‌ ಮಾಡಲಾಗಿತ್ತು. ಈ ನಡುವೆ ಕ್ರಾಸಿಂಗ್‌ನಿಂದ ಸುಮಾರು 100 ಮೀ. ದೂರ ಸಂಚರಿಸಿದಾಗ ವಿದ್ಯುತ್‌ ಕೈ ಕೊಟ್ಟಿತು. ಇದರಿಂದ ಎಂಜಿನ್‌ ಏಕಾಏಕಿ ರೈಲು ಹಳಿಯಲ್ಲಿಯೇ ನಿಂತಿತು ಇದರಿಂದ ಗೇಟ್‌ ಸಹ ಲಾಕ್‌ ಆಗಿ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ನಿಂತಿದ್ದ ವಾಹನಗಳು ಸಂಚರಿಸಲಾಗದೇ ಸುಮಾರು 30 ನಿಮಿಷಗಳ ಬಳಿಕ ತಾಂತ್ರಿಕ ತೊಂ ದರೆಯನ್ನು ಸರಿಪಡಿಸಲಾಯಿತು. ಆಗ ಗೇಟ್‌ ತೆರೆಯಿತು. ಗೇಟ್‌ನ ಹತ್ತಿರದಲ್ಲಿ ಸಿಲುಕಿಕೊಂಡ ವಾಹನಗಳ ಮಾಲಕರ ಹಾಗೂ ಗೇಟ್‌ ಅನ್ನು ನಿರ್ವಹಣೆ ನಡೆ ಸುತ್ತಿರುವವರ ನಡುವೆ ಮಾತುಕತೆ ನಡೆಯಿತು. ತಾಂತ್ರಿಕ ತೊಂದರೆಯ ಬಗ್ಗೆ ಮಾಹಿತಿ ನೀಡಿದರೂ ಕೆಲವರು ಸಮಾಧಾನವಾಗದೇ ಗೇಟ್‌ ತೆರೆಯಲು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಗೇಟ್‌ ನಿರ್ವಹಣೆ ನಡೆಸುತ್ತಿರುವ ವಿಶ್ವನಾಥ್‌ ಅವರು ಉದಯವಾಣಿ ಸುದಿನಕ್ಕೆ ಪ್ರತಿ ಕ್ರಿಯಿಸಿ, ಹಳೆಯಂಗಡಿಯ ಗೇಟ್‌ ವಿಶೇಷತೆ ಎಂದರೆ ಗೇಟ್‌ನಿಂದ ಕೇವಲ 100 ಮೀ. ದೂರದಲ್ಲಿ ರೈಲು ಅಥವ ಎಂಜಿನ್‌ ಸಾಗಿದಲ್ಲಿ ಗೇಟ್‌ ತೆರೆಯುತ್ತದೆ. ಇಲ್ಲಿನ ಸಂಚಾರದ ಒತ್ತಡ ಇದಕ್ಕೆ ಮೂಲ ಕಾರಣವಾಗಿದೆ. ಉಳಿದ ಎಲ್ಲ ಗೇಟ್‌ಗಳಲ್ಲಿ ಸುಮಾರು ಒಂದು ಕಿ.ಮೀ. ಅಂತರದಲ್ಲಿ ಗೇಟ್‌ ಲಾಕ್‌ ಆಗುತ್ತದೆ. ಶನಿವಾರ ಎಂಜಿನ್‌ 100 ಮೀ. ಅಂತರದಲ್ಲಿಯೇ ಸಂಚ ರಿಸುವಾಗಲೇ ವಿದ್ಯುತ್‌ ಕೈ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಸಂಪರ್ಕದಿಂದಲೇ ರೈಲುಗಳು ಹಳಿ ಯಲ್ಲಿ ಸಂಚರಿಸುತ್ತಿದ್ದು, ಮೊದಲ ಬಾರಿ ಇಂತಹ ಸಮಸ್ಯೆ ಕಂಡು ಬಂದಿದೆ. ವಾಹನಗಳ ಸವಾರರಿಗೆ ಮನವರಿಕೆ ಮಾಡಲಾಗಿತ್ತು. ತಾಂತ್ರಿಕ ವ್ಯವಸ್ಥೆಯಲ್ಲಿ ವ್ಯತ್ಯಯ ಆದಲ್ಲಿ ಜನರೂ ಸಹಕರಿಸಬೇಕು ಎಂದರು.

ಮರಳಿ ನೆನಪಾದ ಮೇಲ್ಸೇತುವೆ
ಹಳೆಯಂಗಡಿಯ ರೈಲ್ವೇ ಗೇಟ್‌ನಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇಲ್ಲಿ ಅತೀ ಅಗತ್ಯವಿರುವ ಮೇಲ್ಸೇತುವೆ ನಿರ್ಮಾಣ ಮಾಡಲು ಜನಪ್ರತಿನಿಧಿ ಗಳು ಮುಂದಾಗಬೇಕು ಇಲ್ಲದಿದ್ದಲ್ಲಿ ಮುಂದೊಂದು ದಿನ ಇಂತಹ ಘಟನೆಗಳೇ ಜನರ ಪ್ರತಿರೋಧಕ್ಕೆ ಕಾರಣವಾಗಿ ಪ್ರತಿಭಟನೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾಮಾ ಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ತಿಳಿಸಿದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.