ಕುಸಿದು ಹೋದ ನಾಲೆ ಏರಿ : ಶೀಘ್ರ ದುರಸ್ತಿಗೆ ಸತ್ಯಪ್ಪ ಒತ್ತಾಯ
Team Udayavani, Apr 7, 2022, 6:39 PM IST
ಹುಣಸೂರು : ಹುಣಸೂರು ತಾಲೂಕಿನ ಶಿರಿಯೂರು ಅಣೆಕಟ್ಟೆ ವ್ಯಾಪ್ತಿಯ ಹುಸೇನ್ಪುರ ನಾಲೆಯ ನೀರು ಹಾಯಿಸುವ ಹುದ್ದಿ(ಏರಿ) ಕುಸಿದು ಹೋಗಿದ್ದು, ದುರಸ್ತಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಹಾಗೂ ರೈತರು ಮನವಿ ಮಾಡಿದ್ದಾರೆ.
ಹುಸೇನ್ಪುರ ನಾಲೆಯ 10ನೇ ಕಿ.ಮೀ.ಬಳಿ ಏರಿ ಹಾನಿಯಾಗಿದ್ದು, ಈ ನಾಲೆಯಿಂದ ಸುಮಾರು ನೂರು ಎಕರೆಗೆ ನೀರು ಪೂರೈಸುತ್ತಿದ್ದು, ಈ ನಾಲೆಯು ಕೈಗಾಲುವೆಯಾಗಿದ್ದು, ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದು, ದುಸ್ಥಿತಿಗೆ ತಲುಪಿರುವ ನಾಲೆಯನ್ನು ದುರಸ್ಥಿಗೊಳಿಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಕೋರಿದ್ದಾರೆ.
ತಾವು ಸಹ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ಗಳ ಗಮನಕ್ಕೆ ತರಲಾಗಿದ್ದು, ಸಂಬಂಧಿಸಿದ ಇಂಜಿನಿಯರ್ ಭೇಟಿ ನೀಡಿ, ಶೀಘ್ರ ದುರಸ್ತಿ ಮಾಡಿಸುವ ಭರವಸೆ ನೀಡಿದ್ದಾರೆ, ವಿಳಂಬವಿಲ್ಲದೆ ಮಳೆಗಾಲ ಆರಂಭವಾಗುವುದರೊಳಗೆ ದುರಸ್ತಿ ಮಾಡುವಂತೆ ಸತ್ಯಪ್ಪ ಒತ್ತಾಯಿಸಿದ್ದೇನೆಂದರು.
ಹಾನಿ ಪ್ರದೇಶಕ್ಕೆ ತೆರಳಿದ್ದ ವೇಳೆ ಮರದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜು, ಗ್ರಾ.ಪಂ. ಸದಸ್ಯ ಕುಮಾರ್, ರೈತರಾದ ರಾಮೇಗೌಡ, ನಿಂಗೇಗೌಡ, ಶಂಕರೇಗೌಡ, ಶಿವಲಿಂಗೇಗೌಡ, ಶ್ರೀನಿವಾಸೇಗೌಡ, ಕೇಶವೇಗೌಡ, ಕುಮಾರೇಗೌಡ, ಸಣ್ಣ ನೀರಾವರಿ ಇಲಾಖೆಯ ಸಿಬ್ಬಂದಿಗಳಾದ ರಾಜಪ್ಪ, ಮಂಚನಾಯಕ ಮತ್ತಿತರರಿದ್ದರು.
ಇದನ್ನೂ ಓದಿ : ಎರಡು ತಿಂಗಳಿಂದ ವಿದ್ಯುತ್ ಸಮಸ್ಯೆ : ಬೆಸ್ಕಾಂ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ
ಸರಕಾರಕ್ಕೆ ಪ್ರಸ್ತಾವನೆ:
ಈ ನಾಲೆಯ ಏರಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. ಇದೇ ರೀತಿ ಇನ್ನೂ ಎರಡು ಕಡೆಗಳಲ್ಲಿ ಹಾನಿಯಾಗಿದ್ದು, ಕಳೆದ ಡಿಸೆಂಬರ್ನಲ್ಲೇ ಮಳೆ ಹಾನಿ ಯೋಜನೆಯಡಿ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆನಂತರ ಕಾಮಗಾರಿ ನಡೆಸಲಾಗುವುದೆಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಸುರೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ