ಸೀಸನ್‌ನಲೂ ಕೈಗೆಟುಕದ ಅವರೇಕಾಯಿ! ಮಾರುಕಟ್ಟೆಗೆ ಅವರೆ ಸರಬರಾಜು ಇಳಿಮುಖ, ದರ ಹೆಚ್ಚಳ


Team Udayavani, Jan 13, 2022, 2:55 PM IST

ಸೀಸನ್‌ನಲೂ ಕೈಗೆಟುಕದ ಅವರೇಕಾಯಿ! ಮಾರುಕಟ್ಟೆಗೆ ಅವರೆ ಸರಬರಾಜು ಇಳಿಮುಖ, ದರ ಹೆಚ್ಚಳ

ದೊಡ್ಡಬಳ್ಳಾಪುರ: ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಈ ಬಾರಿ ಅವರೇಕಾಯಿ ಇಳುವರಿ ಕಡಿಮೆಯಾಗಿದ್ದು, ಅವರೇಕಾಯಿ ಸೀಸನ್‌ನಲ್ಲಿಯೂ ದರ ಕೈಗೆಟುಕದಂತಾಗಿದೆ. ನವೆಂಬರ್‌, ಡಿಸೆಂಬರ್‌ ಮಾಸ ಬಂತೆಂದರೆ ಅವರೇಕಾಯಿ ಸೀಸನ್‌ ಶುರು. ಮಾರುಕಟ್ಟೆ ಪ್ರದೇಶದಲ್ಲಷ್ಟೇ ಅಲ್ಲದೇ ಜನಸಂಚಾರ ಪ್ರದೇಶಗಳಲ್ಲಿ ಹಾಗೂ ಮನೆಗಳ ಮುಂದೆ ಅವರೇಕಾಯಿ ಹೊತ್ತು ತಂದು ವ್ಯಾಪಾರ ಮಾಡುವ ದೃಶ್ಯ ಈ ಸೀಸನ್‌ನಲ್ಲಿ ಸಾಮಾನ್ಯ. ಆದರೆ, ಮಾರುಕಟ್ಟೆಯಲ್ಲಿ ಅವರೇಕಾಯಿ ಸರಬರಾಜು ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗಿದೆ. ತಾಲೂಕಾದ್ಯಂತ ರಾಗಿ ಕೊಯ್ಲು ಆಗಿರುವ ಹೊಲಗಳಲ್ಲಿ ಅವರೇಕಾಯಿ ಗಿಡಗಳ ತುಂಬಾ ಅವರೆ ಹೂವುಗಳ ಗೊನೆಗಳು ಕಾಣುತ್ತಿದ್ದವು. ಆದರೆ, ಈಗ ರಾಗಿ ಕೊಯ್ಲು ಮಾಡಲು ಯಂತ್ರ ಬಳಸುವುದರಿಂದ ರಾಗಿ ಪೈರುಗಳ ಮಧ್ಯೆ ಅವರೆ ಬೆಳೆಸುವುದು ಕ್ರಮೇಣ ಕಡಿಮೆಯಾಗುತ್ತಿದೆ.

ಸೊಗಡು ಇರುವ ಒಂದು ಕೆ.ಜಿ. ಅವರೇಕಾಯಿ ಬೆಲೆ 50 ರೂ.ಗಳಿಂದ 70 ರೂ. ಗಳವರೆಗೆ ಇದೆ. ಇನ್ನು ಇದುಕಿದ ಅವರೇ ಬೇಳೆಯಂತೂ ಲೀಟರ್‌ಗೆ 200 ರೂ.ಗಳವರೆಗೆ ಇದೆ. ಈ ಬಾರಿ ಹೊಲಗಳಲ್ಲಿ ಅವರೇಕಾಯಿ ಇಳುವರಿ ಕಡಿಮೆ. ದೂರದ ಚಿತ್ರದುರ್ಗ ಮೊದಲಾದ ಕಡೆಗಳಿಂದ ಅವರೇಕಾಯಿ ಮೊದಲಿನಂತೆ ಹೆಚ್ಚಾಗಿ ಬರುತ್ತಿಲ್ಲದಿರುವುದು ಸಹ ಬೆಲೆ ದುಬಾರಿಯಾಗಲು ಕಾರಣವಾಗಿದೆ. ನವಂಬರ್‌ ಮಳೆಯಿಂದ ಅವರೆ ಗಿಡದ ಹೂವುಗಳು ಉದುರಿ ಹೋಗಿದ್ದು, ಇಳುವರಿ ಕಡಿಮೆಯಾಗಿದೆ ಎಂದು ವಡ್ಡರಹಳ್ಳಿಯ ರೈತ ಶ್ರೀನಿವಾಸರೆಡ್ಡಿ ಹೇಳುತ್ತಾರೆ.

ಹುಳುಕು ಹೆಚ್ಚಾಗಿ ಬಂದರೆ ನಷ್ಟ: ಹೆಚ್ಚು ಮಂಜು ಮುಸುಕಿದ ವಾತಾವರಣ ಅವರೇಕಾಯಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ, ಈಗ ಹವಾಮಾನ ಅವರೆಗೆ ಪೂರಕವಾಗಿದೆ. ಈ ನಮ್ಮ ಪ್ರದೇಶದ ಹೊಲಗಳಲ್ಲಿ ಅವರೇಕಾಯಿ ಇಳುವರಿ ಹೆಚ್ಚಾಗಲಿದೆ ಎನ್ನುತ್ತಾರೆ ರೈತರು. ವ್ಯಾಪಾರ ಇನ್ನು ಚುರುಕಾಗಬೇಕು. ಕಾಯಿಯಲ್ಲಿ ಹುಳುಕು ಹೆಚ್ಚಾಗಿ ಬಂದರೆ ನಷ್ಟವಾಗುವ ಸಂಭವವೂ ಇರುತ್ತದೆ ಎಂದು ಅವರೇಕಾಯಿ ವ್ಯಾಪಾರಿಗಳು ಹೇಳುತ್ತಾರೆ. ದೊಡ್ಡಬಳ್ಳಾಪುರದಲ್ಲಿ ಅವರೇಕಾಯಿ ಹಾಕಿದ ಅಡುಗೆಗಳು ತಮ್ಮದೇ ಆದ ವೈಶಿಷ್ಟéತೆ ಹೊಂದಿವೆ. ವಿಶೇಷ ಸಂದರ್ಭ, ಔತಣಕೂಟಗಳಲ್ಲಿ ಅವರೇಕಾಯಿಯ ಇದುಕು ಬೇಳೆ ಸಾರು ಸಾಮಾನ್ಯವಾಗಿದೆ. ದೇವಾಂಗ ಸಮುದಾಯ ಮಾಡುವ ಈ ಸಾರಿನ ರುಚಿ ಪ್ರಸಿದ್ಧವೂ ಹೌದು. ಬೆಲೆ ಹೆಚ್ಚಾದರೂ ಸಹ ಕೊಳ್ಳುವವರಿದ್ದಾರೆ.

ಅವರೆ ಕೃಷಿ : ಅವರೆ ಬೆಳೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಜನಪ್ರಿಯವಾಗಿದೆ. ಇದು ನಮ್ಮ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮಖ್ಯವಾದ ದ್ವಿದಳ ಧಾನ್ಯದ ಬೆಳೆಗಳಲ್ಲೊಂದು. ಈ ಬೆಳೆಯನ್ನು ಸಾಮಾನ್ಯವಾಗಿ ರಾಗಿ ಬೆಳೆಯೊಂದಿಗೆ ಅಂತರ, ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಹಾಗೂ ವರ್ಷವಿಡೀ ಬೆಳೆಯಬಹುದಾದ ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಅವರೆ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವುದು ಹೆಚ್ಚಾಗಿ ಕಂಡು ಬಂದಿದೆ. ಈ ಬೆಳೆಯಿಂದ ಬೇಳೆ ಅಲ್ಲದೆ ಹಸಿರು ತರಕಾರಿ ಸಹ ಪಡೆಯಬಹುದಾಗಿದೆ.

ಒಣ ಬೀಜದ ಇಳುವರಿ: ಅವರೆ ಬೆಳೆಯು ದ್ವಿದಳ ಧಾನ್ಯಗಳಲ್ಲಿ ಒಂದು ಮುಖ್ಯ. ತರಕಾರಿ ಹಾಗೂ ಮೇವಿನ ಬೆಳೆಯಾಗಿ ಬೆಳೆಯುತ್ತಾರೆ. ಅವರೆ ಸ್ವಕೀಯ ಪರಾಗ‌ ಸ್ಪರ್ಶದಿಂದ ಬೀಜ ಕಟ್ಟತ್ತದೆ. ವರ್ಷದ ಎಲ್ಲ ಕಾಲಗಳಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದಾಗಿದ್ದು, ಸರಾಸರಿ ಪ್ರತಿ ಹೆಕ್ಟೇರಿಗೆ ನೀರಾವರಿಯಲ್ಲಿ 6 ರಿಂದ 8 ಕ್ವಿಂಟಲ್‌ನಷ್ಟು ಒಣ ಬೀಜದ ಇಳುವರಿ ಪಡೆಯಬಹುದು.

ಅವರೇಕಾಯಿ ಸೊಗಡು

ಸ್ಥಳೀಯವಾಗಿ ಬೆಳೆಯುವ ಅವರೇಕಾಯಿ ಹೆಚ್ಚು ಸೊಗಡಿದ್ದು, ಅವರೇ ಬೇಳೆ ತನ್ನದೇಯಾದ ವಿಶಿಷ್ಟತೆ ಹೊಂದಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಗೆ ತಾಲೂಕಿನಿಂದ ಟನ್‌ಗಟ್ಟಲೇ ಅವರೆ ಸರಬರಾಜಾಗುತ್ತದೆ. ಅಂತೆಯೇ ದೊಡ್ಡಬಳ್ಳಾಪುರದ ಮಾರುಕಟ್ಟೆಗೆ ಬೇರೆ ಕಡೆಗಳಿಂದ ಅಂದರೆ ಗೌರಿಬಿದನೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಕಡೆಯಿಂದ ಮಣಿ, ಡಬ್ಬೆ ಹಾಗೂ ಬುಡ್ಡ ತಳಿಗಳು ಬರುತ್ತಿವೆ. ಪ್ರತಿದಿನ 4 ರಿಂದ 5 ಟನ್‌ ಅವರೇಕಾಯಿ ವಹಿವಾಟು ನಡೆಯುತ್ತಿದ್ದುದು ಈಗ 2 ಟನ್‌ಗೆ ಇಳಿದಿದೆ.

– ಡಿ. ಶ್ರೀಕಾಂತ

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.