Karnataka Assembly Election 2023: ಸಾವಿರ ಮತ ಪಡೆಯಲು ಸಾಹಸ ಪಡುವವರಿದ್ದಾರೆ !

ಕುಂದಾಪುರ ದಿಂದ 6 ಮಂದಿ ಸ್ಪರ್ಧಿಸಿದ್ದರು, ಇಬ್ಬರಿಗೆ ತಲಾ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ.

Team Udayavani, Apr 15, 2023, 12:52 PM IST

Karnataka Assembly Election 2023: ಸಾವಿರ ಮತ ಪಡೆಯಲು ಸಾಹಸ ಪಡುವವರಿದ್ದಾರೆ !

ಉಡುಪಿ: “ಚುನಾವಣೆಯಲ್ಲಿ ನಿಂತರೆ ನಿನ್ನ ಮತವೇ ಬೀಳದು, ಕುಟುಂಬದವರ ಮತವೂ ಬಾರದು’ ಎಂಬ ಮಾತೊಂದಿದೆ. ಇದು ತಮಾಷೆಯಾದರೂ ಅನೇಕರಿಗೆ ಸ್ಪರ್ಧೆಯ ಅನಂತರದಲ್ಲಿ ಸತ್ಯ ಎನಿಸುತ್ತದೆ. ಸ್ಪರ್ಧಾ ಕಣಕ್ಕೆ ಇಳಿಯುವ ಮೊದಲು ಎಲ್ಲರೂ ನಮ್ಮವರೇ ನಮಗೆ ಮತ ಹಾಕುತ್ತಾರೆ ಎಂಬ ಭಾವನೆ ಬರುವಷ್ಟರ ಮಟ್ಟಿಗೆ ಹತ್ತಿರವಾಗಿರುತ್ತಾರೆ. ಚುನಾವಣೆ ಫ‌ಲಿತಾಂಶದ ಅನಂತರವೇ ತಿಳಿಯವುದು “ಅದು ಬರಿ ಮಾತು, ಕೃತಿಯಲ್ಲಿ ಇರಲಿಲ್ಲ’ ಎಂಬುದು.

ಚುನಾವಣೆ ಕಣದಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಜತೆಗೆ ಪಕ್ಷೇತರ ಅಭ್ಯರ್ಥಿಗಳು ಹಲವರಿರುತ್ತಾರೆ. ಕರಾವಳಿ ಮಟ್ಟಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಬಿಟ್ಟು ಪಕ್ಷೇತರರು ಠೇವಣಿ ಉಳಿಸಿಕೊಳ್ಳುವುದು ತೀರಾ ಕಡಿಮೆ. ಅಂತಹ ವರ್ಚಸ್ಸು ಇರುವವರು ಮಾತ್ರ ಗೆಲ್ಲುತ್ತಾರೆ ಅಥವಾ ಠೇವಣಿ ಉಳಿಸಿಕೊಳ್ಳುತ್ತಾರೆ.

ಚುನಾವಣೆ ಫ‌ಲಿತಾಂಶದಲ್ಲಿ ಅನೇಕ ಸ್ವಾರಸ್ಯವೂ ಇರುತ್ತದೆ. ಪಕ್ಷೇತರರಾಗಿ ನಿಂತು ಪಡೆಯುವ ಮತಗಳು ಕೆಲವೊಮ್ಮೆ ಅಭ್ಯರ್ಥಿಯನ್ನೇ ನಿಬ್ಬೆರಗುಗೊಳಿಸಿದರೆ, ಇನ್ನು ಕೆಲವೊಮ್ಮೆ ಹತಾಶೆಯನ್ನು ಮೂಡಿಸುತ್ತದೆ.

2008ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳಲ್ಲಿ 4 ಮಂದಿಗೆ ತಲಾ 3 ಸಾವಿರಕ್ಕಿಂತ ಅಧಿಕ ಮತ ಪಡೆದಿರಲಿಲ್ಲ. ಅದರಲ್ಲೂ ಒಬ್ಬರಿಗೆ ಸಾವಿರ ಮತವೂ ಬಂದಿರಲಿಲ್ಲ. ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 5 ಅಭ್ಯರ್ಥಿಗಳಲ್ಲಿ ಮೂವರಿಗೆ ತಲಾ 2500ಕ್ಕಿಂತ ಅಧಿಕ ಮತ ಸಿಕ್ಕಿರಲಿಲ್ಲ. ಉಡುಪಿಯ ಕಣದಲ್ಲಿದ್ದ ಮೂವರಲ್ಲಿ ಒಬ್ಬರಿಗೆ ಬಂದಿದ್ದು ಕೇವಲ 2443 ಮತ. ಉಳಿದ ಇಬ್ಬರು ತಲಾ 55 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಕಾಪುವಿನಲ್ಲಿ ಸ್ಪರ್ಧ ಕಣದಲ್ಲಿದ್ದ 7 ಮಂದಿಯಲ್ಲಿ ಇಬ್ಬರಿಗೆ ತಲಾ ಸಾವಿರ ಮತವೂ ಬಂದಿರಲಿಲ್ಲ. ಇನ್ನೊಬ್ಬರು ಕೇವಲ 1,109 ಮತ ಪಡೆದಿದ್ದರು. ಕಾರ್ಕಳದಲ್ಲೂ ಸಾವಿರ ಮತ ಪಡೆದ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಿತ್ತು.

2013ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ದಿಂದ 13 ಮಂದಿ ಕಣದಲ್ಲಿದ್ದರು. 6 ಮಂದಿಗೆ ತಲಾ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಲ್ಲಿ ಕೇವಲ 334 ಮತ ಪಡೆದವರು ಇದ್ದಾರೆ. ಕುಂದಾಪುರ ದಿಂದ 6 ಮಂದಿ ಸ್ಪರ್ಧಿಸಿದ್ದರು, ಇಬ್ಬರಿಗೆ ತಲಾ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ.

ಉಡುಪಿಯಲ್ಲಿ 7 ಮಂದಿ ಕಣದಲ್ಲಿದ್ದರು. ಅದರಲ್ಲಿ ಮೂವರಿಗೆ ತಲಾ ಒಂದು ಸಾವಿರ ಮತ ಸಿಕ್ಕಿಲ್ಲ. ಕಾಪುವಿನಲ್ಲಿ 11 ಮಂದಿ ಸ್ಪರ್ಧೆ ಮಾಡಿದ್ದರು. ಅದರಲ್ಲೊಬ್ಬರು 162, ಇನ್ನೊಬ್ಬರು 2078, ಮತ್ತೂಬ್ಬರು 249 ಹಾಗೂ ಮಗದೊಬ್ಬರು 269 ಮತ ಪಡೆದಿದ್ದರು. ಇನ್ನೊಬ್ಬರು 467 ಮತ ಪಡೆದಿದ್ದರು. ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಿದ್ದ 9 ಮಂದಿಯಲ್ಲಿ ಆರು ಮಂದಿಗೆ ತಲಾ 1 ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಲ್ಲಿ 232, 334, 478, 553 ಮತ ಪಡೆದವರು ಇದ್ದಾರೆ.

2018ರಲ್ಲಿ ಬೈಂದೂರಿನಿಂದ 10 ಮಂದಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷದ ಇಬ್ಬರು ಹೊರತುಪಡಿಸಿ ಉಳಿದವರ್ಯಾರಿಗೂ ತಲಾ 2500ಕ್ಕಿಂತ ಹೆಚ್ಚು ಮತಸಿಕ್ಕಿರಲಿಲ್ಲ. 297, 401,666, 783 ಮತ ಪಡೆದವರು ಇದ್ದರು. ಕುಂದಾಪುರದಿಂದ ಕಣಕ್ಕೆ ಇಳಿದಿದ್ದ 6 ಮಂದಿಯಲ್ಲಿ ನಾಲ್ವರಿಗೆ ತಲಾ 3000 ಸಾವಿರ ಮತವೂ ಬಂದಿರಲಿಲ್ಲ. ಉಡುಪಿ ಕ್ಷೇತ್ರದಿಂದ 9 ಮಂದಿ ಸ್ಪರ್ಧಿಸಿದ್ದು, 7 ಮಂದಿಗೆ ತಲಾ 1400 ಮತವೂ ಸಿಕ್ಕಿರಲಿಲ್ಲ. 321, 386, 394, 401, 605 ಮತಕ್ಕೆ ತೃಪ್ತಿ ಪಟ್ಟವರು ಇದ್ದಾರೆ. ಕಾಪುವಿನಿಂದ 6 ಮಂದಿ ಸ್ಪರ್ಧಿಸಿದ್ದು, 4 ಮಂದಿಗೆ ತಲಾ 1700ಕ್ಕಿಂತ ಧಿಕ ಮತ ಸಿಕ್ಕಿರಲಿಲ್ಲ. ಇನ್ನು ಕಾರ್ಕಳದಲ್ಲಿ ಸ್ಪರ್ಧೆಯಲ್ಲಿದ್ದ 8 ಮಂದಿಯಲ್ಲಿ 6 ಮಂದಿಗೆ ತಲಾ 1900ಕ್ಕಿಂತ ಅಧಿಕ ಮತ ಬಂದಿರಲಿಲ್ಲ.

ಒಂದೇ ಹೆಸರಿನವರೂ ಇರುತ್ತಾರೆ
ಕೆಲವು ಮತ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಹೆಸರಿನವರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವುದು ಉಂಟು. ಇದರಿಂದ ಕೆಲವು ಮತದಾರರು ತಪ್ಪಿ ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸುವುದು ಸಾಮಾನ್ಯ. ಕೆಲವರು ಮತ ಪಡೆಯಲು ಈ ತಂತ್ರವನ್ನು ಬಳಸುವುದು ಹೊಸತೇನಲ್ಲ. ಆದರೆ ಕರಾವಳಿ ಯಲ್ಲಿ ಈ ತಂತ್ರ ಫ‌ಲಿಸುವುದು ತೀರ ಕಡಿಮೆ.

*ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.