ಅಕ್ರಮ ವಲಸಿಗರಿಗೆ ವರದಾನವಾದ ಕೋವಿಡ್‌


Team Udayavani, May 26, 2020, 5:31 PM IST

ಅಕ್ರಮ ವಲಸಿಗರಿಗೆ ವರದಾನವಾದ ಕೋವಿಡ್‌

ಲಂಡನ್‌: ಕೋವಿಡ್‌-19 ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿದ್ದರೂ ಇಂಗೆಂಡ್‌ನ‌ಲ್ಲಿ ಆಶ್ರಯ ಕೋರುತ್ತಿರುವವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಏಕೆಂದರೆ, ಅವರು ಬಂಧನ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಸಂಭವನೀಯ ಗಡೀಪಾರಿನಿಂದ ಪಾರಾಗಿದ್ದಾರೆ. ಗೃಹ ಕಚೇರಿ ಮುಂದೆ ನಿಯಮಿತವಾಗಿ ಹಾಜರಾಗಬೇಕಿಲ್ಲ. ಲಾಕ್‌ಡೌನ್‌ನ ಈ ಅವಧಿ ಅವರಿಗೆ ಒಂದು ಬಗೆಯ ನೆಮ್ಮದಿಯನ್ನು ತಂದಿದೆ. ನಾಗರಿಕ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸಿದಾಗ ಬದುಕುವುದು ಎಷ್ಟು ಕಷ್ಟವೆಂದು ಸಾಮಾನ್ಯ ಜನರಿಗೆ ಮನವರಿಕೆಯಾಗತೊಡಗಿದ ಸಂದರ್ಭದಲ್ಲಿ ಇದು ಸಂಭವಿಸಿದೆ.

ಜಾಂಬಿಯಾದಿಂದ ಆಶ್ರಯ ಕೋರಿ ಇಂಗ್ಲೆಂಡ್‌ಗೆ ಬಂದಿರುವ ಮೈಮುನಾ ಜಾವೊ ಕೋವಿಡ್‌ ವೈರಸ್‌ ತೊಲಗಬಾರದೆಂದು ತಾನು ಬಯಸುವುದಾಗಿ ಹೇಳುತ್ತಾಳೆ. ಆಕೆ ಮಾರ್ಚ್‌ಗೆ ಮುನ್ನ ತಿಂಗಳಿಗೊಮ್ಮೆ ಗೃಹ ಕಚೇರಿಯ ಮುಂದೆ ಹಾಜರಾಗಬೇಕಾಗಿತ್ತು. ನಾಳೆ ಏನಾಗಬಹುದೆಂದು ತನಗೆ ಗೊತ್ತಿಲ್ಲ. ತನ್ನನ್ನು ಗಡೀಪಾರು ಮಾಡಲೂಬಹುದು ಎಂದಳು.

ಕೋವಿಡ್‌ ಪರಿಣಾಮ ಗೃಹ ಕಚೇರಿ ಮುಂದೆ ಹಾಜರಾಗುವ ಆವಶ್ಯಕತೆಯನ್ನು ರದ್ದುಗೊಳಿಸಲಾಗಿದೆಯೆಂದು ಮಾ. 17ರಂದು ಆಕೆಗೆ ತಿಳಿಸಲಾಗಿತ್ತು. ಗಡೀಪಾರು ಕ್ರಮ ಬಾಕಿಯಿರುತ್ತ ಬಂಧನ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿರುವ ನೂರಾರು ಮಂದಿ ಸದ್ಯಕ್ಕೆ ಪಾರಾಗಿದ್ದಾರೆ.

ಆಶ್ರಯ ಕೋರಿ ಇಂಗ್ಲೆಂಡ್‌ಗೆ  ಬಂದು ಬಂಧನಕ್ಕೊಳಗಾಗಿದ್ದ ಜನರ ಸಂಖ್ಯೆ ಜನವರಿಯಲ್ಲಿ 1,225 ಇದ್ದುದು ಎಪ್ರಿಲ್‌ 29ರ ಹೊತ್ತಿಗೆ ಕೇವಲ 368ಕ್ಕೆ ಇಳಿದಿತ್ತು.

ಅಕ್ರಮ ವಲಸಿಗರ ವಿರುದ್ಧ ಶೂನ್ಯ ಸಹನೆಯ ಇಂಗ್ಲೆಂಡ್‌ನ‌ ನೀತಿಯನ್ನು ಈಗ ಮರುಪರಿಶೀಲಿಸಲಾದೀತೆಂದು ಅವರು ಹಾರೈಸುತ್ತಿದ್ದಾರೆ. ಕೋವಿಡ್‌-19ರಿಂದಾಗಿ ಸದ್ಯದ ಮಟ್ಟಿಗೆ ಅವರನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಮತ್ತು ಬಂಧನ ಕೇಂದ್ರಗಳಲ್ಲಿ ಒತ್ತೂತ್ತಾಗಿ ಇರಿಸಲು ಸಾಧ್ಯವಿಲ್ಲ.

ಬಂಧನದಲ್ಲಿರಿಸುವುದಕ್ಕೆ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ವಲಸೆ ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ಸೂಕ್ತ ಆಯ್ಕೆಯೆನಿಸುತ್ತದೆ ಎಂದು ಗೃಹ ಕಚೇರಿಯ ವಕ್ತಾರರೋರ್ವರು ಹೇಳಿದ್ದಾರೆ.

ದಶಕಗಳಿಂದ ನಡೆಸಿದ ಹೋರಾಟಕ್ಕೆ ಯಶಸ್ಸು ಸಿಗದಿರುವಾಗ ಕೋವಿಡ್‌ ಪ್ರತ್ಯಕ್ಷವಾಗಿ ಅಲ್ಪಾವಧಿಯಲ್ಲಿ ಉಂಟಾಗಿರುವ ಬದಲಾವಣೆ ಆಶ್ರಯ ಕೋರುವವರ ಪಾಲಿಗೆ ಆಶಾದಾಯಕವಾಗಿ ಕಾಣಿಸಿದೆ. ಇಲ್ಲದಿದ್ದರೆ ಗೃಹ ಕಚೇರಿ ಮುಂದೆ ಹಾಜರಾಗುವುದನ್ನು ರದ್ದುಗೊಳಿಸಿರುವುದು, ನೂರಾರು ಮಂದಿಯ ಬಿಡುಗಡೆ ಮತ್ತು ವೀಸಾಗಳ ವಿಸ್ತರಣೆ, ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ಅಕ್ರಮ ವಲಸಿಗರ ಪರ ಹೋರಾಡುತ್ತಿರುವ ಕೆಲವರು ಹೇಳಿದ್ದಾರೆ.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.