ಕುಷ್ಟಗಿ:ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಿಡಿಲಿಗೆ ಬಲಿ
Team Udayavani, Sep 5, 2022, 8:47 PM IST
ಕುಷ್ಟಗಿ: ತಾಲೂಕಿನ ರೈತ ಸಿಡಿಲಿಗೆ ಬಲಿಯಾದ ದುರಂತ ಇಲಕಲ್ ದಮ್ಮೂರ ಸೀಮಾದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಕಾಟಾಪೂರ ಗ್ರಾಮದ ಸಣ್ಣ ನೀಲಪ್ಪ ಮಳಿಯಪ್ಪ ಹಾದಿಮನಿ (57) ಸಿಡಿಲಿಗೆ ಮೃತ ದುರ್ದೈವಿ. ಇವರು ಕುಟುಂಬದವರು ಹಾಗೂ ಕೂಲಿಯಾಳು ಮಹಿಳೆಯರೊಂದಿಗೆ ಸೂರ್ಯಕಾಂತಿ ಕಟಾವು ಕೆಲಸದಲ್ಲಿ ನಿರತರಾಗಿದ್ದರು. ಆ ಮಳೆ ಧಾರಾಕಾರವಾಗಿ ಬಂದ ಹಿನ್ನೆಲೆಯಲ್ಲಿಸೂರ್ಯಕಾಂತಿ ಕಟಾವು ಕೆಲಸ ಬಿಟ್ಟು ಊರಿನತ್ತ ಹೆಜ್ಜೆ ಹಾಕಿದ್ದ ವೇಳೆ ಸಿಡಿಲು ಎರಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಳೆ ಹಿನ್ನೆಲೆಯಲ್ಲಿ ಗಿಡದ ಆಶ್ರಯ ಪಡೆದಿದ್ದ ಸೂರ್ಯಕಾಂತಿ ಕಟಾವು ಮಾಡುವ 6ರಿಂದ 7 ಮಂದಿ ಕುಟುಂಬದವರು ಹಾಗೂ ಕೂಲಿಯಾಳು ಮಹಿಳೆಯರು, ಸಿಡಿಲಿಗೆ ಸಣ್ಣ ನೀಲಪ್ಪ ಕುಸಿದು ಬೀಳುವ ದೃಶ್ಯ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದಾರೆ.
ಮೃತ ಸಣ್ಣ ನೀಲಪ್ಪ ಹಾದಿಮನಿ ಅವರು ಪತ್ನಿ ದ್ಯಾಮವ್ವ ಇಬ್ಬರು ಪುತ್ರರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಅಮೀನಗಡ ಪಿಎಸೈ ಮಲ್ಲಿಕಾರ್ಜುನ ಕುಲಕರ್ಣಿ ಆಗಮಿಸಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ