ಹನುಮ ಜನ್ಮಸ್ಥಾನ ಸಭೆ: ಗಲಾಟೆಯಲ್ಲಿ ಅಂತ್ಯ
Team Udayavani, Jun 1, 2022, 12:58 AM IST
ನಾಸಿಕ್: ಹನುಮಂತನ ಜನ್ಮಸ್ಥಳ ಮಹಾರಾಷ್ಟ್ರದ ನಾಸಿಕ್ ಎಂದು ಸಾಬೀತು ಪಡಿಸಲು ಮಂಗಳವಾರ ನಡೆದಿದ್ದ ಸಾಧುಗಳು ಮತ್ತು ಸಂತರ “ಧರ್ಮ ಸಂಸತ್’ ಹೊಡೆದಾಟ ನಡೆ ಯುವವರೆಗೆ ತಲುಪಿದೆ.
ಸಾಧುಗಳ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲು ಪಿತ್ತು. ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ, ಸಭೆಯನ್ನು ಮುಂದೂಡಬೇಕಾ ಯಿತು. ವಿಚಿತ್ರ ವೆಂದರೆ ಹನುಮಂತ ಜನ್ಮಸ್ಥಳದ ವಿಚಾರದ ಜತೆಗೆ ಧಾರ್ಮಿಕ ಮುಖಂಡರು ಕುಳಿತುಕೊಳ್ಳಲು ಮಾಡಿರುವ ವ್ಯವಸ್ಥೆಯ ಬಗ್ಗೆಯೇ ವಿವಾದ ತಾರಕಕ್ಕೆ ಏರಿ, ವಿಷಯಾಂತರ ವಾಯಿತು. ಜತೆಗೆ ಪೊಲೀಸರೂ ಮಧ್ಯ ಪ್ರವೇಶಿಸಿದರು. ವಿವಾದಕ್ಕೆ ಸಂಬಂಧಿಸಿ ದಂತೆ ಸಾಧುಗಳು ಮತ್ತು ಸಂತರ ಬಗ್ಗೆ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆಯೇ ಆದ್ಯತೆಯಲ್ಲಿ ಚರ್ಚೆ ಶುರು ವಾಯಿತು.
ನಾಸಿಕ್ನ ಕಲಾರಾಮ್ ದೇಗುಲದ ಧಾರ್ಮಿಕ ಮಹಾಂತ ಸುಧೀರ್ ದಾಸ್, “ನನ್ನನ್ನು ಕೆಲವರು ಕಾಂಗ್ರೆಸಿ’ ಎಂದು ಛೇಡಿಸುತ್ತಿದ್ದಾರೆ ಎಂದು ಮಾತು ಆರಂಭಿಸಿದರು. ಅವರ ಈ ಮಾತು ಸಾಧುಗಳ ಇನ್ನೊಂದು ಗುಂಪಿಗೆ ಕೋಪ ತರಿಸಿತು. ವಾಗ್ವಾದದ ಒಂದು ಹಂತದಲ್ಲಿ ಮಹಾಂತ ಸುಧೀರ್ದಾಸ್ ಮೈಕ್ನ ಸ್ಟಾಂಡ್ನಿಂದ ಹೊಡೆಯಲು ಮುಂದಾದರು.
ಅವಕಾಶ ನೀಡದ್ದಕ್ಕೆ ಕೋಪ: ಮತ್ತೊಬ್ಬ ಧಾರ್ಮಿಕ ಮುಖಂಡ ಗೋವಿಂದಾ ನಂದ ಸರಸ್ವತಿ, ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಪೂರಕವಾಗಿ ಅವರ ಬೆಂಬಲಿಗರೂ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಗೊಂದಲ ಏರ್ಪಟ್ಟಿತು.
ಪೊಲೀಸರ ಪ್ರವೇಶ: ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು. ಹನುಮಾನ್ ಜನ್ಮಸ್ಥಳದ ಬಗ್ಗೆ ವಾದಿಸುತ್ತಿದ್ದ ಎರಡೂ ಗುಂಪುಗಳ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ವಿಷಯಾಂತರವಾಗಿರುವ ಹಿನ್ನೆಲೆ ಯಲ್ಲಿ ಕೆಲವು ಧಾರ್ಮಿಕ ಮುಖಂಡರು “ಹನುಮಂತನ ಜನ್ಮ ಸ್ಥಾನ’ದ ಬಗ್ಗೆ ತೀರ್ಮಾನಿಸುವ ಸಭೆ ಯನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದರು.
ಯಾರಿದ್ದರು?: ಸಭೆಯಲ್ಲಿ ಕೈಲಾಸ ಸ್ವಾಮಿ ಮಠದ ಸ್ವಾಮಿ ಸಂವಿಧಾನಂದ ಸರಸ್ವತಿ, ಪುರೋಹಿತ ಸಂಘದ ಅಧ್ಯಕ್ಷ ಸತೀಶ್ ಶುಕ್ಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ವಾಂಸರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ