ಚಾರ್ಮಾಡಿ: ವಾನರಗಳ ಹಸಿವು ನೀಗಿಸಿದ ಶಾಸಕರು
Team Udayavani, Apr 19, 2020, 5:03 AM IST
ಬೆಳ್ತಂಗಡಿ: ಲಾಕ್ಡೌನ್ ಹಿನ್ನೆಲೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಆಹಾರಕ್ಕಾಗಿ ಪ್ರಯಾಣಿಕರನ್ನು ಅವಲಂಬಿಸಿದ ವಾನರಗಳು ಕೊರಗುತ್ತಿರುವುನ್ನು ಮನಗಂಡು ಶಾಸಕ ಹರೀಶ್ ಪೂಂಜ ಶನಿವಾರ ಆಹಾರ ಪೂರೈಸಿದರು.
ಶನಿವಾರ ಶಾಸಕರು ಎರಡು ಟ್ರೇ ಕಿತ್ತಳೆ, 2 ಟ್ರೇ ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಒದಗಿಸಿದರು. ಲಾಕ್ಡೌನ್ ಮುಗಿಯುವವರೆಗೆ ಅವುಗಳಿಗೆ ನಿತ್ಯ ಬೆಳಗ್ಗೆ ಆಹಾರ ಪೂರೈಸಲು ಸ್ಥಳೀಯ ಯುವಕರಿನ್ನು ನಿಯೋಜಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿ ಸಿದರು. ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.