ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳ: ಜನಸಮ್ಮಾನಕ್ಕೆ ಕೋಣ ಧನ್ಯ!
Team Udayavani, Mar 14, 2022, 7:23 AM IST
ಕಟಪಾಡಿ: ಇತಿಹಾಸ ಪ್ರಸಿದ್ಧ ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳದ ಸಂದರ್ಭ ಸಾಧಕ ಕೋಣ ಕೊಳಚ್ಚಾರು ಕೊಂಡೆಟ್ಟು “ಚೆನ್ನ’ನನ್ನು ಸಮ್ಮಾನಿಸಲಾಯಿತು. ಆಗ ಚೆನ್ನ ಮಂಡಿಯೂರಿ ನಮಿಸಿ ಕೃತಜ್ಞತೆ ಸಲ್ಲಿಸಿದ.
ಡಾ| ಎ. ರವೀಂದ್ರನಾಥ ಶೆಟ್ಟಿ ಕಟಪಾಡಿ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟಪಾಡಿ ಬೀಡು ಯಜಮಾನ ಗೋವಿಂದದಾಸ್ ಶೆಟ್ಟಿ, ಕಟಪಾಡಿ ಬೀಡು ಅತುಲ್ ಬಲ್ಲಾಳ್, ಕಟಪಾಡಿ ಬೀಡು ಶ್ರೀನಿವಾಸ ಬಲ್ಲಾಳ್, ಸಮಾಜ ಸೇವಕ ರವಿ ಕಟಪಾಡಿ, ಕೋಣಗಳ ಯಜಮಾನ ಸುಂದರ ಕೆ. ಆಚಾರ್ಯ, ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕಟಪಾಡಿ ಬೀಡು ಸುಭಾಸ್ ಬಲ್ಲಾಳ್, ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮನೋಹರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮಟ್ಟಾರು ರತ್ನಾಕರ್ ಹೆಗ್ಡೆ, ಯಶ್ಪಾಲ್ ಎ.ಸುವರ್ಣ, ಎಸ್ಪಿ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.