NIA ದಾಳಿ: ಶಂಕಿತ ಉಗ್ರನ ಸೆರೆ-ಕರ್ನಾಟಕಕ್ಕೂ ಇದೆ ಈತನ ನಂಟು
Team Udayavani, Sep 7, 2023, 12:01 AM IST
ಕೊಚ್ಚಿ: ಕೇರಳದಲ್ಲಿ ಉಗ್ರ ಸಂಘಟನೆ ಐಸಿಸ್ ಜತೆಗೆ ಗುರುತಿಸಿಕೊಂಡಿದೆ ಎಂದು ಹೇಳಲಾಗಿರುವ ಸಂಘಟನೆಯ ನಾಯಕ ಎಂದು ಹೇಳಿಕೊಂಡಿದ್ದ ವ್ಯಕ್ತಿ ಯನ್ನು ಚೆನ್ನೈಯಲ್ಲಿ ಎನ್ಐಎ ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು ತೃಶೂರ್ಮೂಲದ ಸಯ್ಯದ್ ನಬೀಲ್ ಅಹ್ಮದ್ ಎಂದು ಗುರುತಿಸಲಾಗಿದೆ.
ಆತನನ್ನು ಕೊಚ್ಚಿಗೆ ಗುರುವಾರ ಕರೆತಂದು ಕೇರಳದಲ್ಲಿ ಆತ ನಡೆಸಿದ್ದ ಉಗ್ರ ಸಂಬಂಧಿ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಆತನನ್ನು ಕೋರ್ಟ್ಗೆ ಹಾಜರುಪಡಿಸಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳು ಇವೆ. ಜುಲೈ ನಲ್ಲಿ ಕೇರಳದಲ್ಲಿ ಉಗ್ರ ಸಂಘಟನೆ ಐಸಿಸ್ ಜತೆಗೆ ಗುರುತಿಸಿಕೊಂಡಿದ್ದ ಹೊಸ ಗುಂಪು ಪತ್ತೆಯಾಗಿದ್ದ ಬಗ್ಗೆ ಕೇಸು ದಾಖಲಿಸಲಾಗಿತ್ತು. ಇದಾದ ಬಳಿಕ ಸತ್ಯಮಂಗಲಂ ಕಾಡಿನಲ್ಲಿ ಅಶ್ರಫ್ ಎಂಬಾತನನ್ನು ಬಂಧಿಸಲಾ ಗಿತ್ತು. ಈತ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವಿತಿದ್ದ ಎಂದು ಹೇಳಲಾಗಿದೆ.