Hyderabad: ಅಯ್ಯಪ್ಪ ವಿದ್ಯಾರ್ಥಿಗೆ ಪ್ರವೇಶ ನಕಾರಕ್ಕೆ ಆಕ್ರೋಶ
Team Udayavani, Dec 2, 2023, 9:33 PM IST
ಹೈದರಾಬಾದ್: ತೆಲಂಗಾಣದ ಮೆಡ್ಚಲ್- ಮಲ್ಕಜ್ಗಿರಿಯ ಕೀಸಾರಾ ಎಂಬಲ್ಲಿರುವ ಖಾಸಗಿ ಶಾಲೆಯಲ್ಲಿ ಅಯ್ಯಪ್ಪ ವ್ರತಧಾರಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದರಿಂದಾಗಿ ಸ್ಥಳದಲ್ಲಿ ಕೊಂಚ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಈ ಸುದ್ದಿ ತಿಳಿದ ಕೂಡಲೇ ಸಮೀಪದ ರಾಂಪಲ್ಲಿ ಸೇರಿದಂತೆ ಹಲವು ಸ್ಥಳಗಳಿಂದ ಅಯ್ಯಪ್ಪ ಭಕ್ತರು ಶಾಲೆಯ ಆವರಣಕ್ಕೆ ಆಗಮಿಸಿ ಗದ್ದಲ ಎಬ್ಬಿಸಿದರು. ಒಂದು ಹಂತದಲ್ಲಿ ವಾಗ್ವಾದ ಕೈಮೀರಿ ಹೋಗಿ ಗುಂಪಿನಲ್ಲಿದ್ದ ಕೆಲವರು ಮುಖ್ಯ ಗೇಟ್ ಮತ್ತು ಇತರ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಶಾಲೆಯ ಆಡಳಿತ ಮಂಡಳಿ ಕ್ಷಮೆ ಯಾಚಿಸಬೇಕು ಎಂದು ಗುಂಪು ಒತ್ತಾಯಿಸಿತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ