Shivamogga; ಪಾಲಿಟಿಕ್ಸ್ ಮೈಂಡ್ ಗೇಮ್ ಅಲ್ಲ,ಹಾರ್ಟ್ ಗೇಮ್: ಶಿವರಾಜ್ ಕುಮಾರ್
Team Udayavani, Mar 24, 2024, 6:16 PM IST
ಶಿವಮೊಗ್ಗ:ಚುನಾವಣೆ ಪ್ರಚಾರಕ್ಕೆ ಬಂದಾಗ ಪಾಸಿಟಿವ್ ಶೈನ್ ಇತ್ತು. ಕಳೆದ ಬಾರಿಗೂ ಈ ಬಾರಿಗೂ ಬದಲಾವಣೆ ಇದೆ. ಬದಲಾವಣೆ ಬೇಕು ಎಂದು ಜನ ಬಯಸಿದ್ದಾರೆ ಎಂದು ನನಗೆ ಅನಿಸಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರದ ವೇಳೆ ನೂರಾರು ಪ್ರಶ್ನೆ ಬರುತ್ತವೆ. ಆದರೆ ಈಗ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರಿಗೆ ಮಾತನಾಡಿ ಅರ್ಥ ಮಾಡಿಸೋದು ಬೇಡ. ಅದು ಜನರಿಗೇ ಅರ್ಥ ಆಗಬೇಕು ಅಷ್ಟೆ. ಮೊದಲು ನಂಬಿಕೆ ಮುಖ್ಯ. ನಮಗೆ ಎಷ್ಟು ನಂಬಿಕೆ ಇದೆಯೋ ಅದು ಜನರಿಗೂ ಇರಬೇಕು. ಬೇರೆ ರೀತಿ ಮಾತನಾಡುವ ಮನುಷ್ಯ ನಾನಲ್ಲ. ನಮ್ ಫ್ಯಾಮಿಲಿ ಆ ರೀತಿ ಅಲ್ಲ. ಹೃದಯದಲ್ಲಿ ಏನು ಬರುತ್ತದೆ ಅದನ್ನು ಬಾಯಲ್ಲಿ ನುಡಿಯುತ್ತೇದೆ. ನಾವು ಹೃದಯದಿಂದ ಮಾತನಾಡೋರು. ಯಾವ ಪಾಲಿಟಿಕ್ಸ್ ಡಿಫ್ರೆಂಟ್ ಅಲ್ಲ. ಪಾಲಿಟಿಕ್ಸ್ ಇಸ್ ನಾಟ್ ಎ ಮೈಂಡ್ ಗೇಮ್. ಇಟ್ಸ್ ಎ ಹಾರ್ಟ್ ಗೇಮ್. ರಾಜಕೀಯಕ್ಕೆ ಹೃದಯ ಬೇಕು. ಹೃದಯವಂತಿಕೆ ಬೇಕು. ನಾವು ಜನರಿಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗೀತಾ ಜತೆ ಮಾತಾನಾಡಿದ್ದೇನೆ.
ಜನರ ಸಮಸ್ಯೆ ಈಗ ಗೊತ್ತಾಗುತ್ತಿದೆ. ನಟನೆ ಮಾಡೋರಿಗೆ ರಾಜಕೀಯ ಗೊತ್ತಿಲ್ಲ ಎಂದೇನಿಲ್ಲ. 40 ವರ್ಷದಿಂದ ಮತ ಹಾಕುತ್ತಿದ್ದೇನೆ. ರಾಜಕೀಯ ಗೊತ್ತಿದೆ. ಅದಕ್ಕಾಗಿ ರಾಜಕೀಯಕ್ಕೆ ಬರಬೇಕು ಎಂದೇನಿಲ್ಲ. ಗೀತಾ ಬಂದಿದ್ದಾರೆ. ಅವರಿಗೆ ನನ್ನ ಸಪೋರ್ಟ್ ಅಷ್ಟೆ. ಒಳ್ಳೆಯ ರೀತಿಯಲ್ಲಿ ರಾಜಕೀಯ ಇರಲಿ ಎಂದು ಸಹಕಾರ ಮಾಡಿದ್ದೀನಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ