ಕೃಷ್ಣಾ ಬಿ-ಸ್ಕೀಮ್ ರಾಷ್ಟ್ರೀಯ ಯೋಜನೆಯಾಗುವ ಎಲ್ಲಾ ಸಾಧ್ಯತೆಯಿದೆ : ಪ್ರಭಾಕರ ಚಿಣಿ
Team Udayavani, Jan 30, 2022, 4:46 PM IST
ಕುಷ್ಟಗಿ : ಕೃಷ್ಣಾ ಬಿ-ಸ್ಕೀಮ್ ಯೋಜನೆ ರಾಷ್ಟ್ರೀಯ ಯೋಜನೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕರ ಚಿಣಿ ಹೇಳಿದರು.
ಭಾನುವಾರ, ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕಾರ ಚಿಣಿ ಅವರ ಅಭಿಮಾನಿ ಬಳಗದಿಂದ 2022ರ ಪಾಕೇಟ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಭಾಗದ ಕೃಷ್ಣಾ ಬಿಸ್ಕೀಂ ಯೋಜನೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಹಾಗೂ ಬಜೆಟ್ ನಲ್ಲಿ ಘೋಷಣೆಯೂ ಆಗಿದೆ. ತುಂಗಾಭದ್ರ ಮೇಲ್ದಂಡೆ ಯೋಜನೆ ಈಗಾಗಲೇ ರಾಷ್ಟ್ರೀಕರಣವಾಗಿದೆ. ಹಿಂದುಳಿದ ಈ ಭಾಗದಲ್ಲಿ ಐ.ಎ.ಎಸ್ ಚಿಂತನೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಆಗಿದೆ ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಐ.ಎ.ಎಸ್ ಹಾಗೂ ಕೆ.ಎ.ಎಸ್.ಗೆ ಕೋಚಿಂಗ್ ಗೆ ಧಾರವಾಡ, ಬೆಂಗಳೂರಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ ಹೀಗಾಗಿ ಇಲ್ಲೊಂದು ಐ.ಎ.ಎಸ್., ಕೆ.ಎ.ಎಸ್ ಕೋಚಿಂಗ್ ಅನುಷ್ಟಾನಗೊಳಿಸುವ ಚಿಂತನೆ ಇದೆ ಎಂದರು.
ಚಳಗೇರಾ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರದ ಪ್ರಧಾನ ಇಂಜಿನೀಯರ್ ಆಗಿ ನಿವೃತ್ತರಾಗಿರುವ ಪ್ರಭಾಕಾರ ಚಿಣಿ ಅವರಿಗೆ ಸಾಕಷ್ಟು ಅನುಭವವಿದ್ದು ಅವರ ರಚನಾತ್ಮಕ ಕಾರ್ಯಗಳ ಕನಸು ಸಾಕಾರಗೊಳ್ಳಲು ನಿವೃತ್ತ ಜೀವನದಲ್ಲಿನಿರ್ವಹಿಸುವ ಸಾದ್ಯತೆಗಳಿವೆ ಎಂದರು.
ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಕೃಷ್ಣಾ ಬಿ-ಸ್ಕಿಮ್ ಯೋಜನೆ ಬರೀ ಮಾತಾಗಿದ್ದು, ಈ ಯೋಜನೆ ರಾಷ್ತ್ರೀಯ ಯೋಜನೆಯಾದರೆ ಕೃಷ್ಣಾ ಕಣಿವೆಯ ಯೋಜನೆಗಳು ಸಂಪೂರ್ಣವಾಗಲು ಸಾದ್ಯವಿದೆ. ರಾಜಕೀಯ ಎಲ್ಲರೂ ಮಾಡುತ್ತಾರೆ ರಾಜಕೀಯದಲ್ಲಿ ಏನಾದರೂ ಸೇವೆ ಕುಷ್ಟಗಿ ತಾಲೂಕಿಗೆ ಆಗಬೇಕಿದ್ದು ಆ ನಿಟ್ಟಿನಲ್ಲಿ ನಿವೃತ್ತ ಪ್ರಧಾನ ಇಂಜಿನೀರ್ ಅವರಿಂದಾಗಬೇಕಿರುವುದು ಸ್ಥಳೀಯ ಅಭಿಮಾನಿಗಳ ಆಶಾಭಾವನೆಯಾಗಿದೆ ಎಂದರು.
ಚಂದಪ್ಪ ತಳವಾರ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಅರ್.ಡಿ.ಸಿ.ಸಿ. ಉಪಾಧ್ಯಕ್ಷ ಶಿವಶಂಕರಗೌಡ ಕಡೂರು, ಹೊಳೆಯಪ್ಪ ಕುರಿ, ಯಲ್ಲಪ್ಪ ಗದ್ದಿ, ಪರಶುರಾಮ ನಾಗರಾಳ, ಪ್ರಭುಶಂಕರಗೌಡ ಮಾಲಿಪಾಟೀಲ, ಮೈಲಾರಪ್ಪ ಮಂತ್ರಿ ಮತ್ತೀತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ