Punjalkatte ಧೂಮಳಿಕೆ: ಅಕ್ರಮ ಜಾನುವಾರು ವಧೆ ಅಡ್ಡೆಗೆ ದಾಳಿ: ಆರೋಪಿಗಳು ಪರಾರಿ
Team Udayavani, Mar 4, 2024, 12:32 AM IST
ಪುಂಜಾಲಕಟ್ಟೆ: ಇಲ್ಲಿನ ಕಾವಳಮುಡೂರು ಗ್ರಾಮದ ಧೂಮಳಿಕೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಅಡ್ಡೆಗೆ ಪುಂಜಾಲಕಟ್ಟೆ ಪೋಲೀಸರು ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಮಾಂಸ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಗಳು ಪರಾರಿಯಾಗಿದ್ದಾರೆ.
ಆರೋಪಿಗಳಾದ ಇಲ್ಯಾಸ್ ಧೂಮಳಿಕೆ ಯಾನೆ ಕುಂಟ ಇಲ್ಯಾಸ್ ಮತ್ತು ಇಲ್ಯಾಸ್ ಬಂಗೇರಕೆರೆ ಅವರು ಇಲ್ಯಾಸ್ ಅವರ ನಿರ್ಮಾಣ ಹಂತದ ಮನೆಯಲ್ಲಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ ಪೊಲೀಸ್ ನಿರೀಕ್ಷಕ ಉದಯರವಿ ವೈ. ಎಂ. ಅವರು ಸಿಬಂದಿ ಜತೆ ದಾಳಿ ನಡೆಸಿದರು. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.