ಅತಿಥಿ ಶಿಕ್ಷಕನ ಮೇಲೆ ಹಲ್ಲೆ : ಫೆ. 9 ರಂದು ರಬಕವಿ ಬನಹಟ್ಟಿ ಬಂದ್ಗೆ ಕರೆ
Team Udayavani, Feb 8, 2022, 8:04 PM IST
ರಬಕವಿ-ಬನಹಟ್ಟಿ: ಮಂಗಳವಾರದಂದು ಅತಿಥಿ ಶಿಕ್ಷಕ ಮಂಜುನಾಥ ನಾಯಕ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ರಬಕವಿ ಬನಹಟ್ಟಿ ವಿವಿಧ ಹಿಂದೂ ಸಂಘಟನೆಗಳು ಮತ್ತು ವಿವಿಧ ಸಮಾಜದ ಮುಖಂಡರು ಇದೇ 9 ರಂದು ಅವಳಿ ನಗರಗಳ ಸ್ವಯಃ ಘೋಷಿತ ಬಂದ್ಗೆ ಕರೆ ನೀಡಿದ್ದಾರೆ ಎಂದು ನಗರಸಭಾ ಸದಸ್ಯ ಸಂಜಯ ತೆಗ್ಗಿ ಪತ್ರಿಕೆಗೆ ದೂರವಾಣಿಯ ಮೂಲಕ ತಿಳಿಸಿದರು.
ಅದೇ ರೀತಿಯಾಗಿ ಶಿಕ್ಷನ ಮೇಲೆ ನಡೆದ ಮಾರಾಣಾಂತಿಕ ಹಲ್ಲೆಯನ್ನು ಖಂಡಿಸಿ ಈ ಬಂದ್ಗೆ ಕರೆ ನೀಡಿಲಾಗಿದ್ದು, ಬಂದ್ ನಿಮಿತ್ತವಾಗಿ ಬನಹಟ್ಟಿಯ ವೈಭವ ಚಲನಚಿತ್ರ ಮಂದಿರದಿಂದ ತಹಶೀಲ್ದಾರ್ ಕಾರ್ಯಾಲಯಕ್ಕೆ ಮೌನ ಮೆರವಣಿಗೆ ನಡೆಸಿ ಮವನಿಯನ್ನು ಸಲ್ಲಿಸಲಾಗುವುದು ಎಂದು ಸಂಜಯ ತೆಗ್ಗಿ ತಿಳಿಸಿದರು.
ಇದನ್ನೂ ಓದಿ : ಕೆಂಪುಕಲ್ಲು ಗಣಿಗಾರಿಕೆಯಿಂದಾಗಿ ಮಲೆನಾಡಿನಲ್ಲಿ ಆತಂಕ: ಅನಂತ ಹೆಗಡೆ ಅಶೀಸರ