Kundapura ಸ್ಕೂಟರ್ ಢಿಕ್ಕಿ ; ಸೈಕಲ್ ಸವಾರ ಸಾವು
Team Udayavani, Feb 2, 2024, 11:24 PM IST
ಕುಂದಾಪುರ: ಶಿವಮೊಗ್ಗ – ಕುಂದಾಪುರ ರಾಜ್ಯ ಹೆದ್ದಾರಿಯ ಬಸೂÅರು ಮೂರು ಕೈ ಬಳಿ ಸೈಕಲ್ ಅನ್ನು ದೂಡಿಕೊಂಡು ಹೋಗುತ್ತಿದ್ದ ಬೊಬ್ಬರ್ಯನಕಟ್ಟೆ ಬಳಿಯ ನಿವಾಸಿ ಶ್ರೀಧರ್ (65) ಅವರಿಗೆ ಸ್ಕೂಟರ್ ಢಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಫೆ. 1ರಂದು ರಾತ್ರಿ 11.25 ರ ಸುಮಾರಿಗೆ ಸಂಭವಿಸಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಶ್ರೀಧರ್ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಸ್ಕೂಟರ್ ಸವಾರ ಸಂದೇಶ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.