Desi Swara: ಹಚ್ಚ ಹಸುರ ಸೀರೆಯನ್ನುಟ್ಟಂತೆ ಕಾಣುವ “ಸಿಯಾಟಲ್‌’ 

ಕನ್ನಡ ಭಾರತಿ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಪಾಠ

Team Udayavani, Feb 17, 2024, 11:30 AM IST

Desi Swara: ಹಚ್ಚ ಹಸುರ ಸೀರೆಯನ್ನುಟ್ಟಂತೆ ಕಾಣುವ “ಸಿಯಾಟಲ್‌’ 

ವಾಷಿಂಗ್ಟನ್‌:ಅನಿವಾಸಿ ಭಾರತೀಯರ ಕೊಡುಗೆಯಿಂದ ಸಿಯಾಟಲ್‌ ನಗರ ಜಗತøಸಿದ್ಧವಾಗಿದೆ. ಸುಸಂಸ್ಕೃತರೂ, ಸುಶೀಲರೂ ಆದ ಭಾರತೀಯರು ಇಲ್ಲಿ ನುರಿತ ಅಭಿಯಂತರರೂ, ವೈದ್ಯರೂ, ತಂತ್ರಜ್ಞರೂ ಆಗಿ¨ªಾರೆ. ನಮ್ಮ ನಗರ ಪ್ರಾಂತ ಕೇವಲ ಆಧುನಿಕತೆ, ತಂತ್ರಜ್ಞಾನಕ್ಕಷ್ಟೇ ಅಲ್ಲದೆ ನೈಸರ್ಗಿಕ ಸಂಪತ್ತಿನ ತವರು ಎಂದರೆ ಉತ್ಪ್ರೇಕ್ಷೆಯಲ್ಲ. ಬಹಳಷ್ಟು ಅನಿವಾಸಿ ಭಾರತೀಯರು ಕಲೆ, ಭಾಷೆ ಮತ್ತು ಜನಪದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ನೋಡುಗರಿಗೆ ಇದು ನಿವಾಸಿಗರ ವೃತ್ತಿಯೋ ! ಪ್ರವೃತ್ತಿಯೋ! ಎಂದು ನಿಬ್ಬೆರಗಾಗುವಂತೆ ಮಾಡುವುದು ಸತ್ಯ.

ಸಿಯಾಟಲ್‌ ಪಟ್ಟಣ ಅಮೇರಿಕಾದ ವಾಯುವ್ಯ ಭಾಗದಲ್ಲಿದೆ. ಮಲೆನಾಡಿನಂತೆ ಯಾವಾಗಲೂ ಹಚ್ಚ ಹಸುರಿನ ಸೀರೆಯುಟ್ಟಂತೆ ಕಾಣುತ್ತದೆ. ಮೈ ಝಮ್ಮೆನಿಸುವ ಸೋನೆ ಮಳೆ, ಶುದ್ಧ ಗಾಳಿ, ಕಾವೇರಿಯಷ್ಟೇ ತಿಳಿ – ತುಂಗೆಯಷ್ಟೇ ಸಿಹಿ ನಮ್ಮೂರಿನ ಹೊಳೆ ನೀರು. ಊರಿನ ಸುತ್ತ ಸರೋವರಗಳು, ಅಣತಿ ದೂರದಲ್ಲಿಯೇ ಸಮುದ್ರ, ಮಂಜು ಕವಿದ ಬೆಟ್ಟಗಳು, ಇಂದೋ ನಾಳೆಯೋ ಹೊರಚಿಮ್ಮಲು ಸಿದ್ಧವಾಗಿರುವ ಜ್ವಾಲಾಮುಖೀ ಪರ್ವತಗಳು, ಚಾರಣಿಗರಿಗೆ ಸವಾಲೊಡ್ಡುವ ಶಿಖರಗಳು, ಬಿಳಿ ಮೋಡದಿಂದ ಹೊರ ಚಾಚಿರುವ ಮಂಜು ಪರ್ವತಗಳು, ಹಾಲಿಂದ ಅಭಿಷೇಕವಾದ ಶಿವಲಿಂಗವೇ, ಶುಭೋದಯದ ಎಳೆ ಬಿಸಿಲಲ್ಲಿ ದರ್ಶನವಾದರೆ ಇದೇನು ಓಂ ಪರ್ವತವೇ, ಇದುವೇ ಶಿವಾಲಯ ಎಂದು ಉದ್ಘರಿಸುವಂತೆ ಮಾಡುತ್ತದೆ ಆಸ್ತಿಕರನ್ನು. ಅಬ್ಬಬ್ಬಾ! ಎಷ್ಟು ಸುಂದರ ನಮ್ಮೂರು.

ಆಷಾಢ, ಶ್ರಾವಣ ಮಾಸಗಳು ಇಲ್ಲಿನ ಬೇಸಗೆ. ಹಾಗಂದ ಮಾತ್ರಕ್ಕೆ ಸುಡು ಬಿಸಿಲಿಲ್ಲ. ಸೂರ್ಯಾಸ್ತವಾಯಿತು, ಕತ್ತಲಾಗಲಿ ಮಲಗೋಣವೆಂದು ಕಾದರೆ ಜಾಗರಣೆಯೇ ಗತಿ. ಚಳಿಗಾಲದಲ್ಲಿ ಕತ್ತಲು ಹೆಚ್ಚು. ಆದರೆ ಅದರಿಂದ ಬೇಜಾರಾಗುವಷ್ಟು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಸ್ವಲ್ಪ ಹೆಚ್ಚು ವಿಶ್ರಮಿಸೋಣವೆಂದರೆ ಪಶು – ಪಕ್ಷಿಗಳು ಬಡಿದೆಬ್ಬಿಸುತ್ತವೆ. ಇಲ್ಲಿ ಕಾಶ್ಮೀರದ ಮಂಜು – ಪರ್ವತ ಶ್ರೇಣಿ, ಮಲೆನಾಡು – ತುಳುನಾಡಿನ ಸೊಬಗು ಕಾಣಸಿಗುತ್ತದೆ. ಇದು ಎಂಥಾ ಮನಸ್ಸಿಗೂ ಮುದಕೊಡುತ್ತದೆ; ಧ್ಯಾನಾಸಕ್ತವಾಗಿಸುತ್ತದೆ. ಇಷ್ಟು ಸಾಕಲ್ಲವೇ ಕಲಾರಸಿಕರನ್ನು ಆಕರ್ಷಿಸಲು ! ಸಿಯಾಟಲ್‌ ನಗರದ ಪರಿಧಿಯಲ್ಲಿ ಕನ್ನಡ ಮತ್ತು ಅನ್ಯ ದೇಶೀಯ ಭಾಷೆಯ ಹಲವಾರು ಸಂಘ ಸಂಸ್ಥೆಗಳಿವೆ, ಧಾರ್ಮಿಕ ಪೂಜಾ ಕೇಂದ್ರಗಳಿವೆ. ಇವು ಸಮಾಜದ ಸಾಮರಸ್ಯ, ಸಹಬಾಳ್ವೆ, ರಸಮಯ ಜೀವನಕ್ಕೆ ಜೀವ ತುಂಬುತ್ತಿವೆ.

ಇವುಗಳ ಒಡನಾಟದಿಂದ ನಾವು ಅನಿವಾಸಿಯರು ಎಂದೆನಿಸುವುದಿಲ್ಲ. ಹೊರನಾಡಿನಲ್ಲಿ ನಾವು ನಮ್ಮವರು ಎಂದಾಗ ಮೊದಲಿಗೆ ಭಾರತೀಯರಾಗಿ ತದನಂತರ ನಮ್ಮ ಮಾತೃ ಭಾಷಿಗರಾಗಿ ಗುರುತಿಸಿಕೊಳ್ಳುತ್ತೇವೆ, ಸಂಭ್ರಮಿಸುತ್ತೇವೆ. ಇಲ್ಲಿ ಇತರೆ ಭಾಷಿಕರಂತೆ ನಮ್ಮ ಕರುನಾಡ ಸಜ್ಜನರಿಂದಲೂ ಸಹ ಕೆಲವು ಸಂಘ ಸಂಸ್ಥೆಗಳು ಕಾರ್ಯ ನಿರತವಾಗಿ ಕನ್ನಡಾಂಬೆಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ.

ಕನ್ನಡ ಭಾರತಿ ಕೆಲವು ಸಂಸ್ಥೆಗಳಲ್ಲೊಂದು. ಸಂಸ್ಥೆಯ ಎಲ್ಲ ಪದಾಧಿಕಾರಿಗಳೂ ಕಲಾ ಪೋಷಕರೇ, ಕಲಾರಾಧಕರೇ. ಇವರಿಗೆ ನಮ್ಮ ಜನಪದ ಸಾಹಿತ್ಯ, ಶಾಸ್ತ್ರೀಯ ಕಲೆಯ ಬಗ್ಗೆ ಹೊಂದಿರುವ ಅದಮ್ಯ ಗೌರವ, ಪ್ರೀತಿ ಆದರಗಳು ಪ್ರಾತಃಸ್ಮರಣೀಯ.

ಕನ್ನಡ ಭಾರತಿ ವರ್ಷವಿಡೀ ವಾರಾಂತ್ಯಕ್ಕೆ ಭಾಷೆ ಮತ್ತು ಶಾಸ್ತ್ರೀಯ ಕಲೆಯ (ನೃತ್ಯ, ನಾಟಕ, ಸಂಗೀತ) ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಕನ್ನಡಿಗರಿಗೆ, ವಿಶೇಷವಾಗಿ ಇಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಇದರ ಪ್ರಯೋಜನ ವರ್ಣನಾತೀತ. ಸಂಸ್ಥೆಯ ಪದಾಧಿಕಾರಿಗಳ ನಿಸ್ವಾರ್ಥ ಸೇವೆಗೆ ಹಲವಾರು ಗಣ್ಯರು ಕೈ ಜೋಡಿಸಿದ್ದಾರೆ. ಗಣ್ಯರು ನೃತ್ಯ, ಕಲೆ ಹಾಗೂ ಭಾಷೆಯನ್ನು ಆಸಕ್ತರಿಗೆ ಅಭ್ಯಯಿಸುತ್ತಿದ್ದಾರೆ. ಇಲ್ಲಿ ಮಕ್ಕಳಂತೆಯೇ ಪೋಷಕರ ಕೊಡುಗೆಯೂ ಅಪಾರ. ಬಿಡುವಿಲ್ಲದ ಜೀವನದ ಮಧ್ಯೆಯೂ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಪ್ರೀತಿ – ಒಲವು ಗಮನೀಯವಾದದು.

ಶಾಲೆ ಅಂದಕೂಡಲೆ 15 – 20 ಮಕ್ಕಳು, ಶಾಲಾ ಕೊಠಡಿ ಮತ್ತು ಶಿಕ್ಷಕ ಎಂದು ಭಾವಿಸುತ್ತೇವೆ. ಕನ್ನಡ ಭಾರತಿ ಶಾಲೆಯ ವಿಶೇಷವೆಂದರೆ ಎಲ್ಲ ತರಗತಿಗಳು ಆನ್‌ಲೈನ್‌ ಕಲಿಕೆ ಅಂದರೆ ಮನೆಯಿಂದಲೇ ಗಣಕ ಯಂತ್ರ – ತಂತ್ರಜ್ಞಾನದ ಸಹಾಯದಿಂದ ಸಂಪನ್ನಗೊಳ್ಳುತ್ತದೆ. ಶಿಕ್ಷಕರಿಗೆ ಹೆಚ್ಚು ಅಂದರೆ 6 ಶಿಕ್ಷಾರ್ಥಿಗಳು. ಅಧ್ಯಯನಕ್ಕೆ ಬೇಕಾದ ಎÇÉಾ ಸಾಮಗ್ರಿಗಳನ್ನು ಕನ್ನಡ ಭಾರತಿ ಸಂಘವೇ ಒದಗಿಸಿಕೊಡುತ್ತದೆ

ಶಿಕ್ಷಾರ್ಥಿಗಳಿಂದ ಶುಲ್ಕವನ್ನು ಭರಿಸುವುದಿಲ್ಲ. ಅಂದರೆ ಸ್ವಯಂಸೇವಕರೇ ಪಾವತಿಸುತ್ತಾರೆ. ಇದು ಶ್ಲಾಘನೀಯವಲ್ಲದೆ ಮತ್ತೇನು? ಆಧುನಿಕತೆಯ ಪ್ರಗತಿ ಬಹಳ ವೇಗವಾಗಿ ಸಾಗುತ್ತಿದೆ. ಅದರಲ್ಲಿ ನಮ್ಮನ್ನು ಒಂದಾಗಿಸಿ ಸಾಗುವುದು ಕಷ್ಟಸಾಧ್ಯ. ಇದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಕಹಿ ಸತ್ಯ. ಹೀಗಿರುವಾಗ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುತ್ತಿರುವುದು ಅದ್ಭುತವೂ ಪ್ರಶಂಸನೀಯವೂ ಹೌದು. ಕನ್ನಡ ಕಲಿಕೆಗೆ ಬೇಕಾದ ಸಾಮಗ್ರಿಯನ್ನು ಕನ್ನಡ ಅಕಾಡೆಮಿ (https://www.kannadaacademy.com/home) ಒದಗಿಸಿಕೊಟ್ಟಿದೆ. ಅನಿವಾಸಿ ಕನ್ನಡ ಕಂದಮ್ಮಗಳಿಗೆ ಕಲಿಕೆ ಅಪ್ಯಾಯಮಾನವಾಗಿರಲೆಂದು 8 ಭಾಗ ಮಾಡಲಾಗಿದೆ – ಸ್ವರ ಬಲ್ಲ – 1/2, ಅಕ್ಷರ ಬಲ್ಲ 1/2, ಪದ ಬಲ್ಲ 1/2, ಮತ್ತು ಜಾಣ 1/2. ಎಲ್ಲ ಶಿಕ್ಷಾರ್ಥಿಗಳು ಸ್ವರ ಬಲ್ಲ 1 ರಿಂದ ಕಲಿಕೆಯನ್ನು ಆರಂಭಿಸಿ ಜಾಣ 2 ಕ್ಕೆ ಮುಕ್ತಾಯ ಆಗುತ್ತದೆ. ವರುಷಕ್ಕೆ ಒಂದು ಭಾಗವನ್ನು ಕಲಿಸಲಾಗುತ್ತದೆ. ಮಕ್ಕಳಿಗೆ ಸರಳ ಸಂಭಾಷಣೆ ಮತ್ತು ಸಾಹಿತ್ಯ ಜ್ಞಾನ ಉಣಿಸುವುದು ಮೂಲ ಉದ್ದೇಶ.

ಕನ್ನಡ ಭಾರತಿ ಸಂಸ್ಥೆಯ ಮತ್ತೊಂದು ವಿಶೇಷವೆಂದರೆ ಕರಾವಳಿ ಕಲೆಯ ನಂಟು. ತುಳು, ಕೊಂಕಣ ಸಂಸ್ಕೃತಿಯ ಕೃಷಿ, ಕಡಲತೀರ ಯಕ್ಷಕಲೆಯನ್ನೂ ಹೇಳಿಕೊಡುತ್ತಾರೆ. ಕೆಲವು ಬಾರಿ ಕಲಾವಿದರನ್ನು ಆಹ್ವಾನಿಸಿ ಯಕ್ಷಗಾನವನ್ನು ಪ್ರಾಯೋಜಿಸಿದ್ದಾರೆ. ಕಲಾವಿದರ ಕಲೆಯನ್ನು ಆರಾಧಿಸಿ ಗೌರವಿಸಿದ್ದಾರೆ. ಹಲವಾರು ಕಲಾರಸಿಕರು ಯಕ್ಷಕಲೆಯನ್ನು ಆನ್‌ಲೈನ್‌ ಮೂಲಕ ನುರಿತ ಕಲಾವಿದರಿಂದ ಕಲಿಯುತ್ತಿದ್ದಾರೆ. ಬರುವ ಸಂವತ್ಸರಗಳಲ್ಲಿ ಇಲ್ಲಿನ ಮಕ್ಕಳೇ ಯಕ್ಷಗಾನ ಪ್ರದರ್ಶನ ನೀಡುವುದರಲ್ಲಿ ಸಂಶಯವಿಲ್ಲ, ಕನ್ನಡ ಭಾರತಿ ಸಂಘದ ಈ ನಿಸ್ವಾರ್ಥ ಸಮಾಜ ಸೇವೆ ನಿರಂತರವಾಗಿ ಸಾಗುತ್ತಿರಲಿ; ಸಾಮರಸ್ಯ, ಸಹಬಾಳ್ವೆಗೆ ಪೂರಕವಾಗಿರಲಿ ಆರೋಗ್ಯವಂತ, ವೈಭವೋಪೇತ ಸಮಾಜಕ್ಕೆ ಕನ್ನಡ ಭಾರತಿ ಸಂಘದ ಸೇವೆ ಎಂದೆಂದೂ ಗ್ರಾಹ್ಯವಾಗಿರಲಿ.

*ಲವಕುಮಾರ ಬಸವಾಪಟ್ಟಣ, ಸಿಯಾಟಲ್‌, ವಾಷಿಂಗ್ಟನ್‌

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.