Lord Ram: ನನ್ನ ಆಡಳಿತಕ್ಕೆ ಶ್ರೀರಾಮನೇ ಪ್ರೇರಣೆ: ಪ್ರಧಾನಿ ಮೋದಿ
ನನ್ನ 3ನೇ ಅವಧಿಯಲ್ಲಿ ಭಾರತ 3ನೇ ಅತೀದೊಡ್ಡ ಆರ್ಥಿಕತೆ ಆಗಲಿದೆ
Team Udayavani, Jan 20, 2024, 12:29 AM IST
ಸೋಲಾಪುರ/ಚೆನ್ನೈ: “ಪ್ರಭು ಶ್ರೀರಾಮನ ಆಡಳಿತದ ತತ್ವವನ್ನೇ ನಾನು ಅಳವಡಿಸಿಕೊಂಡಿದ್ದೇನೆ. ನಮ್ಮದು ಪ್ರಾಮಾಣಿಕ ಆಡಳಿತವಾಗಿದೆ. ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿಯು ಈಡೇರುವ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದ ಸೋಲಾಪುರದಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ 8 ಅಮೃತ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಾಣಗೊಂಡ 90 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
“ನಮ್ಮ ಸರಕಾರದ ಮೂರನೇ ಅವಧಿಯ ಆಡಳಿತದಲ್ಲಿ ನಾನು ಭಾರತವನ್ನು ಜಗತ್ತಿನ ಟಾಪ್ 3ನೇ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸುತ್ತೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯವಿದೆ. ಇದು ಮೋದಿಯ ಗ್ಯಾರಂಟಿಯಾಗಿದೆ’ ಎಂದೂ ಹೇಳುವ ಮೂಲಕ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೇರುವುದು ಖಚಿತ ಎಂಬ ಸಂದೇಶ ಸಾರಿದ್ದಾರೆ.
ಆವಾಸ್ಯೋಜನೆಯಡಿ ನಿರ್ಮಾಣವಾದ ಮನೆಗಳ ಬಗ್ಗೆ ಮಾತನಾಡುವ ವೇಳೆ ಭಾವುಕರಾದ ಮೋದಿ, ನಾನು ಯುವಕನಾಗಿದ್ದಾಗ ಇಂತಹ ಮನೆಯಲ್ಲಿ ವಾಸಿಸುವಂಥ ಅವಕಾಶ ಸಿಗಬೇಕೆಂದು ಕಾಯುತ್ತಿದ್ದೆ ಎಂದರು.
ತಮಿಳುನಾಡಿನಲ್ಲಿ ಮೋದಿ ರೋಡ್ಶೋ: ಶುಕ್ರವಾರ ಮಹಾರಾಷ್ಟ್ರ, ಕರ್ನಾಟಕ ಪ್ರವಾಸ ಮುಗಿಸಿ ತಮಿಳುನಾಡಿಗೆ ತೆರಳಿದ ಪ್ರಧಾನಿ ಮೋದಿ, ಚೆನ್ನೈಯಲ್ಲಿ ಖೇಲೋ ಇಂಡಿಯೂ ಯೂತ್ ಗೇಮ್ಸ್ ಉದ್ಘಾಟನೆಗೂ ಮುನ್ನ 4 ಕಿ.ಮೀ. ರೋಡ್ ಶೋ ನಡೆಸಿದರು.
ಇದೇ ವೇಳೆ ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ 250 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೇ ದೂರದರ್ಶನ ಪ್ರಾದೇಶಿಕ ಭಾಷೆಯ ಚಾನಲ್ “ಡಿಡಿ ಪೊಡಿಗೈ’ನ ಪರಿಷ್ಕೃತ ಆವೃತ್ತಿಯಾದ “ಡಿಡಿ ತಮಿಳ್’ಗೆ ಚಾಲನೆ ನೀಡಿದರು.
ಇಂದು 3 ದೇಗುಲಗಳಿಗೆ ಭೇಟಿ
ಸೋಮವಾರದ ಪ್ರಾಣ ಪ್ರತಿಷ್ಠೆಗೂ ಮುನ್ನ ಪ್ರಧಾನಿ ಮೋದಿ, ತಮಿಳುನಾಡಿನ ಮೂರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಶನಿವಾರ ಮತ್ತು ರವಿವಾರ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇಗುಲ, ಶ್ರೀ ಅರುಳ್ಮಿಗು ರಾಮನಾಥಸ್ವಾಮಿ ದೇಗುಲ ಮತ್ತು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಕಂಬ ರಾಮಾಯಣದ ಸ್ತೋತ್ರಗಳನ್ನೂ ಅವರು ಆಲಿಸಲಿದ್ದಾರೆ. ಧನುಷ್ಕೋಡಿಯಲ್ಲಿ ರಾಮಸೇತುವಿದೆ ಎಂದು ಹೇಳಲಾದ ಅರಿಚಲ್ ಮುನೈಗೂ ಭೇಟಿ ನೀಡಲಿದ್ದಾರೆ. ಕಳೆದೊಂದು ವಾರದಿಂದ ಮೋದಿಯವರು ರಾಮಾಯಣದೊಂದಿಗೆ ಒಂದಿಲ್ಲೊಂದು ರೀತಿ ಸಂಬಂಧ ಹೊಂದಿರುವ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು