ಲಂಕೆಯ ನೆರವಿಗೆ ಸದಾ ಸಿದ್ಧ : ಕೇಂದ್ರ ಸರಕಾರ
Team Udayavani, Apr 8, 2022, 5:30 AM IST
ಹೊಸದಿಲ್ಲಿ/ಕೊಲೊಂಬೋ: ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ಯಾವತ್ತೂ ನೆರವು ನೀಡಲು ಸಿದ್ಧರಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ, ನೆರೆಹೊರೆಯ ರಾಷ್ಟ್ರಗಳೇ ಮೊದಲು ಎಂಬ ಆದ್ಯತೆ ಎಂಬ ನಿಲುವಿನ ಅನ್ವಯ ಈಗಾಗಲೇ ತೈಲೋತ್ಪನ್ನ, ಅಗತ್ಯ ಆಹಾರ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದುವರೆಗೆ ದ್ವೀಪರಾಷ್ಟ್ರಕ್ಕೆ 2.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನೆರವು ನೀಡಲಾಗಿದೆ. ಅದರಲ್ಲಿ ವಿತ್ತೀಯ ನೆರವು, ಆಹಾರ, ಇಂಧನ ಅಗತ್ಯಗಳೂ ಸೇರಿವೆ ಎಂದಿದ್ದಾರೆ.
ಕಳೆದ ತಿಂಗಳ ಮಧ್ಯಭಾಗದಿಂದ ಇದುವರೆಗೆ 2.70 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಅಲ್ಲಿಗೆ ಪೂರೈಸಲಾಗಿದೆ ಎಂದಿದ್ದಾರೆ ಅರಿಂದಂ ಬಗಚಿ. ಎರಡೂ ದೇಶಗಳ ನಡುವೆ ಇತಿಹಾಸ ಕಾಲದಿಂದಲೂ ಸದೃಢ ಬಾಂಧವ್ಯ ಇದೆ ಎನ್ನುವುದನ್ನು ಮರೆಯಲಾಗದು ಎಂದಿದ್ದಾರೆ.
ವಿತ್ತ ಸಚಿವ ಸ್ಥಾನಕ್ಕೆ ಯಾರು?: ಇದೇ ವೇಳೆ, ವಿತ್ತ ಸಚಿವ ಸ್ಥಾನಕ್ಕೆ ನೇಮಕಗೊಂಡಿದ್ದ ಅಲಿ ಸಬ್ರೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದೇ ವೇಳೆ, ಹಾಲಿ ಬಿಕ್ಕಟ್ಟು ನಿರ್ವಹಿಸಲು ಲಂಕಾ ಸರಕಾರ ಸಮಿತಿ ನೇಮಕ ಮಾಡಿದೆ. ಮತ್ತೂಂದು ಬೆಳವಣಿಗೆಯಲ್ಲಿ ವಿಪಕ್ಷಗಳೂ ಕೂಡ ಹಾಲಿ ಸರಕಾರವನ್ನು ಪತನಗೊಳಿಸಲು ಬಯಸುವುದಿಲ್ಲ ಎಂದು ಹೇಳಿವೆ. ಈ ನಡುವೆ, ವೈದ್ಯರೂ ಮುಷ್ಕರಕ್ಕೆ ಇಳಿದಿರುವುದರಿಂದ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ