Sulya: ಮನೆಯಲ್ಲಿ ಜಗಳ- ನದಿಗೆ ಹಾರಲು ಬಂದ ಮಹಿಳೆಗೆ ಪೊಲೀಸರಿಂದ ಬುದ್ಧಿವಾದ
Team Udayavani, Sep 15, 2023, 1:17 AM IST
ಸುಳ್ಯ: ಪತಿ ಮನೆಯಲ್ಲಿ ಜಗಳ ಮಾಡುತ್ತಾನೆಂಬ ಕಾರಣಕ್ಕೆ ಮಹಿಳೆಯೊಬ್ಬರು ಕೋಪಗೊಂಡು ನದಿಗೆ ಹಾರಲೆಂದು ಸುಳ್ಯ ಸಮೀಪದ ಕಾಂತಮಂಗಲ ಸೇತುವೆ ಬಳಿ ಬಂದು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಗೆ ಬುದ್ದಿವಾದ ಹೇಳಿದ ಘಟನೆ ಗುರುವಾರ ಸುಳ್ಯದಲ್ಲಿ ನಡೆದಿದೆ.
ದಂಪತಿ ನಡುವೆ ಜಗಳ
ಕಾಂತಮಂಗದ ಬಾಡಿಗೆ ಕೊಠಡಿಯಲ್ಲಿರುವ ಪತಿ-ಪತ್ನಿ ಮಧ್ಯೆ ಜಗಳವಾಗಿತ್ತು. ಪತಿಯ ಮೇಲೆ ಸಿಟ್ಟಾದ ಪತ್ನಿ ಕಾಂತಮಂಗಲದ ಪಯಸ್ವಿನಿ ನದಿ ಬದಿಗೆ ಬಂದು ಕುಳಿತು ಅಳುತ್ತಿದ್ದ ವೇಳೆ ಸ್ಥಳೀಯರು ಆ ಮಹಿಳೆಯನ್ನು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಸ್ಥಳೀಯರು ತತ್ಕ್ಷಣ ಪೋಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಗೆ ಬುದ್ಧಿವಾದ ಹೇಳಿ ಠಾಣೆಗೆ ಕರೆದೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್