Suntikoppa; ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ; ದಂಪತಿ ಪಾರು
Team Udayavani, Jun 25, 2023, 12:13 AM IST
ಸುಂಟಿಕೊಪ್ಪ: ಹಾಡಹಗಲು ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದೆ. ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮತ್ತಿಕಾಡುವಿನ ಕಾಫಿ ಬೆಳೆಗಾರರಾದ ಕೋರನ ಟಿಪ್ಪು ಅವರು ಕಾರಿನಲ್ಲಿ ಪತ್ನಿಯೊಂದಿಗೆ ಸುಂಟಿಕೊಪ್ಪದಿಂದ ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಕುಟ್ಟೇಟಿ ತೋಟದ ಲೈನ್ ಮನೆಯ ಸಮೀಪ ಕಾಡಾನೆ ಅಡ್ಡಗಟ್ಟಿತು. ಅಪಾಯವನ್ನರಿತ ದಂಪತಿ ಕಾರಿನಿಂದ ಇಳಿದು ಓಡಿ ಹೋಗಿ ಜೀವ ಉಳಿಸಿಕೊಡರು. ಆನೆಯು ದಂತದಿಂದ ಕಾರಿನ ಮುಂಭಾಗಕ್ಕೆ ದಂತದಿಂದ ಗುದ್ದಿ ಹಾನಿಗೊಳಿಸಿ ಅಲ್ಲಿಂದ ತೆರಳಿತು. ಕಾರು ಜಖಂಗೊಂಡಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ.
ಮತ್ತಿಕಾಡು ವ್ಯಾಪ್ತಿಯ ತೋಟಗಳಲ್ಲಿ ಶನಿವಾರ ಬೆಳಗ್ಗಿನಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆ ನಡೆಯುತ್ತಿದ್ದು ಇದರಿಂದ ಕೋಪಕ್ಕೀಡಾಗಿ ಓಡಿ ಬಂದ ಸಲಗ ಎದುರು ಸಿಕ್ಕಿದ ಕಾರಿನ ಮೇಲೆ ದಾಳಿ ನಡೆಸಿದೆ.
ಲಾರಿ-ಬೈಕ್ ಢಿಕ್ಕಿ: ಬೈಕ್ ಸವಾರ ಸಾವು
ಕುಶಾಲನಗರ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಉಂಟಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಕುಶಾಲನಗರ ಸಮೀಪ ಕೈಗಾರಿಕಾ ಬಡಾವಣೆ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಬೈಕ್ ಸವಾರ ಗಂಗಾಧರ ಮೃತಪಟ್ಟವರು.ತನ್ನ ಮನೆಗೆ ತೆರಳುವ ಸಂದರ್ಭ ಕೈಗಾರಿಕಾ ಬಡಾವಣೆಗೆ ಬರುತ್ತಿದ್ದ ಲಾರಿಯ ಟಯರ್ಗೆ ಸಿಲುಕಿ ಅನಂತರ ಲಾರಿ ದೇಹದ ಮೇಲೆ ಹರಿದ ಕಾರಣ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದವು.
ಮೃತ ಗಂಗಾಧರ ಮೂಲತ ಅರಸೀಕೆರೆ ನಿವಾಸಿಯಾಗಿದ್ದು, ಕುಶಾಲನಗರದಲ್ಲಿ ವಿದ್ಯುತ್ ಕಂಬಗಳನ್ನು ನೆಡುವ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ