Bahrain ತೃತೀಯ ವಾರ್ಷಿಕೋತ್ಸವ, ಪಟ್ಲ ಸಂಭ್ರಮ-2023

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಬಹ್ರೈನ್‌ ಸೌದಿ ಘಟಕ

Team Udayavani, Nov 25, 2023, 7:44 PM IST

Bahrain ತೃತೀಯ ವಾರ್ಷಿಕೋತ್ಸವ, ಪಟ್ಲ ಸಂಭ್ರಮ-2023Bahrain ತೃತೀಯ ವಾರ್ಷಿಕೋತ್ಸವ, ಪಟ್ಲ ಸಂಭ್ರಮ-2023

ಬಹ್ರೈನ್‌: ಯಕ್ಷಧ್ರುವ ಪಟ್ಲ ಫೌಂಡೇಶನ್‌ (ರಿ.) ಮಂಗಳೂರು, ಇದರ ಬಹ್ರೈನ್‌ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ “ಪಟ್ಲ ಸಂಭ್ರಮ – 2023′ ಅನ್ನು ಇಲ್ಲಿನ ಕನ್ನಡ ಸಂಘದ ಸಭಾಂಗಣದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.

ಈ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕತಾರ್‌ ಘಟಕದ ಗೌರವಾಧ್ಯಕ್ಷರಾದ ಡಾ| ಮೂಡಂಬೈಲು ರವಿ ಶೆಟ್ಟಿ, ಅಭ್ಯಾಗತರಾಗಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಪಾಲ್ಗೊಂಡಿದ್ದರು.

ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಯ್ನಾಡಿಂದ ಆಗಮಿಸಿದ್ದ ಪೂಂಜರ ಶಿಷ್ಯ ದೀವಿತ್‌ ಕೋಟ್ಯಾನ್‌ರವರು ಪೂಂಜರಿಗೆ ನುಡಿನಮನ ಸಲ್ಲಿಸಿದರು. ಈ ವೇಳೆ ಶೋಭಾ ಪುರುಷೋತ್ತಮ ಪೂಂಜರನ್ನು ಶಾಲು, ಸ್ಮರಣಿಕೆ, ಹಣ್ಣುಹಂಪಲು, ಸಮ್ಮಾನ ಪತ್ರದ ಮೂಲಕ ಗೌರವಿಸಲಾಯಿತು.

ಮುಖ್ಯ ಅತಿಥಿ ಡಾ| ಮೂಡಂಬೈಲು ರವಿ ಶೆಟ್ಟಿಯವರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಲಾಯಿತು. ಅನಂತರ ಮಾತನಾಡಿದ ಡಾ| ರವಿ ಶೆಟ್ಟಿಯವರು ಅಶಕ್ತ ಕಲಾವಿದರಿಗೆ ವಿವಿಧ ಯೋಜನೆಗಳ ಸೇವಾಸಹಾಯನ್ನು ದೇಶವಿದೇಶಗಳ ಕಲಾಭಿಮಾನಿಗಳ ಸಹಕಾರದಿಂದ ನೀಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನನ್ನು ಅಭಿನಂದಿಸಿದರು.

ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್‌ ಶೆಟ್ಟಿಯವರು ಕೀರ್ತಿಶೇಷ ಬೊಟ್ಟಿಕೆರೆ ಫೌಂಡೇಶನ್‌ನ ವಿವಿಧ ಯೋಜನೆಗಳು, ಯಕ್ಷಶಿಕ್ಷಣ ಅಭಿಯಾನದ ಬಗ್ಗೆ ಉಲ್ಲೇಖೀಸಿದರು. ಬಹ್ರೈನ್‌ ಸೌದಿ ಘಟಕದ ಗೌರವಾಧ್ಯಕ್ಷರಾದ ಸುಭಾಶ್ಚಂದ್ರ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಧ್ಯೇಯೋದ್ದೇಶಗಳು ಸಾಕಾರವಾಗುವಂತೆ ಶುಭಹಾರೈಸಿದರು.

ವೇದಿಕೆಯಲ್ಲಿ ಕನ್ನಡ ಸಂಘ ಬಹ್ರೈನ್‌ ಅಧ್ಯಕ್ಷರಾದ ಅಮರನಾಥ್‌ ರೈ, ಬಂಟ್ಸ್‌ ಕತಾರ್‌ನ ಅಧ್ಯಕ್ಷ ನವೀನ್‌ ಶೆಟ್ಟಿ ಇರುವೈಲ್‌, ಘಟಕದ ಗೌರವ ಗೋಪಾಲ್‌ ಶೆಟ್ಟಿ, ಕಲಾಪೋಷಕ ರವಿ ಕರ್ಕೇರ, ಸೌದಿ ಅರೇಬಿಯ, ಉಪಾಧ್ಯಕ್ಷ ನರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಪಟ್ಲ ಸಂಭ್ರಮದ ಕಲಾಪೋಷಕರನ್ನು ಗೌರವ ಸ್ಮರಣಿಕೆಯ ಮೂಲಕ ಅಭಿನಂದಿಸಲಾಯಿತು. ಸಾಂಪ್ರದಾಯಿಕ ವಿಶೇಷ ರಂಗಸ್ಥಳ ದಿ| ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಂಗಮಂಟಪದಲ್ಲಿ ಪುರುಷೋತ್ತಮ ಪೂಂಜ ವಿರಚಿತ “ಮಾನಿಷಾದ’ ಯಕ್ಷಗಾನ ಪ್ರದರ್ಶನವನ್ನು ಬಹ್ರೈನ್‌ ಹಾಗೂ ಸೌದಿಯ ಯಕ್ಷಗಾನ ಕಲಾವಿದರು ಮತ್ತು ಅತಿಥಿ ಕಲಾವಿರ ಸಮಾಗಮದಲ್ಲಿ ನೂರಾರು ಕಲಾಪ್ರೇಕ್ಷಕರು ವೀಕ್ಷಿಸಿದರು. ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಅವರ ನಿರ್ದೇಶನದಲ್ಲಿ ಸ್ಥಳೀಯ ಕಲಾವಿದರು, ತಾಯ್ನಾಡಿಂದ ಆಗಮಿಸಿದ್ದ ತೆಂಕು- ಬಡಗುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಶಶಿಕಾಂತ್‌ ಶೆಟ್ಟಿ ಕಾರ್ಕಳ ಅವರು ಸ್ವೆ„ರಿಣಿ ಹಾಗೂ ಸೀತೆಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಯುವ ಹಿಮ್ಮೇಳವಾದಕ ರೋಹಿತ್‌ ಉಚ್ಚಿಲ್‌ ಅವರು ತಮ್ಮ ಚೆಂಡೆ -ಮದ್ದಳೆಯ ಕೈಚಳಕದಿಂದ ಮಿಂಚಿದರು.

ದುಬೈಯ ಹಿರಿಯ ಯಕ್ಷಗಾನ ಕಲಾವಿದ, ನಾಟ್ಯಗುರು ಶೇಖರ್‌ ಶೆಟ್ಟಿಗಾರ್‌ ಕಿನ್ನಿಗೋಳಿಯವರು ಶ್ರೀರಾಮನ ಪಾತ್ರದಲ್ಲಿ ಹೃದಯಂಗಮವಾಗಿ ಅಭಿನಯಿಸಿದರು. ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಸಿರಿಕಂಠದ ಭಾಗವತಿಕೆ, ಯುವ ಭಾಗವತ ರೋಶನ್‌ ಎಸ್‌.ಕೋಟ್ಯಾನ್‌ ಅವರ ಸುಶ್ರಾವ್ಯ ಭಾಗವತಿಕೆಯೊಂದಿಗೆ ಸ್ಥಳೀಯ ಹಿಮ್ಮೇಳ ಕಲಾವಿದರಾದ ಧನಂಜಯ ಕಿನ್ನಿಗೋಳಿ, ಗಣೇಶ್‌ ಕಟೀಲು, ಅಕ್ಷಿತ್‌ ಸುವರ್ಣ ಪಾಲ್ಗೊಂಡಿದ್ದರು.

ಹಿರಿಯ ಕಲಾವಿದ ಮೋಹನ್‌ ಎಡನೀರು ನಿರ್ವಹಣೆ ಸಹಕಾರ ನೀಡಿದ್ದರು. ಘಟಕದ ಪ್ರಧಾನ ಸಂಚಾಲಕ ರಾಮಪ್ರಸಾದ್‌ ಅಮ್ಮೆನಡ್ಕ ವೇಷಭೂಷಣ ಹಾಗೂ ಸಮಗ್ರ ನಿರ್ವಹಣೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಬಹ್ರೈನ್‌ ಸೌದಿ ಘಟಕದ ರಾಜೇಶ್‌ ಬಿ. ಶೆಟ್ಟಿಯವರು ಪ್ರಾಸ್ತಾವಿಕ ನುಡಿಯನ್ನಾಡಿದರು. ಕಮಲಾಕ್ಷ ಅಮೀನ್‌ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನರೇಂದ್ರ ಶೆಟ್ಟಿ ವಂದನಾರ್ಪಣೆಗೈದರು.

 

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.