ಹನುಮಂತನ ಜನ್ಮಸ್ಥಳದಲ್ಲಿ ಭೂಮಿಪೂಜೆ
ತಿರುಮಲದಲ್ಲಿ ಟಿಟಿಡಿ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Team Udayavani, Feb 17, 2022, 6:50 AM IST
ತಿರುಮಲ: ಹನುಮಾನ್ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ತಿರುಮಲದ ಆಕಾಶಗಂಗಾ ಪ್ರಾಂತ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜ ನೆಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಸಮಾರಂಭದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ನ (ಟಿಟಿಡಿ) ಮುಖ್ಯಸ್ಥ ವೈ.ವಿ. ಸುಬ್ಟಾ ರೆಡ್ಡಿ, ವಿಕಾಸಶ್ರೀ ಪೀಠನ ಸ್ವಾಮೀಜಿ ಸ್ವರೂಪಾನಂದೇಶ್ವರ ಸರಸ್ವತಿ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಸಮಾರಂಭದ ಅನಂತರ ಮಾತನಾಡಿದ ಸ್ವರೂಪಾನಂದೇಶ್ವರ ಸರಸ್ವತಿ, “”ಹನುಮಂತನ ಜನ್ಮಸ್ಥಳವೆಂದು ಗುರುತಿಸಲಾಗಿರುವ ಜಾಗವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಇದನ್ನೂ ಓದಿ:ತೆರಿಗೆ ವಂಚನೆ ಆರೋಪ; ಚೀನದ ಹುವಾಯ್ ಕಚೇರಿಗಳ ಮೇಲೆ ಐಟಿ ದಾಳಿ
ಆಂಧ್ರಪ್ರದೇಶವು ವೇದಗಳು ರಚನೆಗೊಂಡ ತಾಣ. ತಿರುಮಲದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲೇ ಹನುಮಂತ ಜನಿಸಿದನೆಂದು ವೇದ ವಿದ್ವಾಂಸರು ಹೇಳಿದ್ದಾರೆ.
ಸಂಶೋಧಕರ ಸಂಶೋಧನ ವರದಿಗಳಲ್ಲಿಯೂ ಇದು ಉಲ್ಲೇಖವಾಗುತ್ತವೆ” ಎಂದು ತಿಳಿಸಿದ್ದಾರೆ.