ಉಡುಪಿ: ಪತ್ನಿಗೆ ಏಕಾಏಕಿ ತ್ರಿವಳಿ ತಲಾಖ್ ಕೊಟ್ಟು, 2ನೇ ಮದುವೆಯಾದ ಪ್ರಕರಣ; ದೂರು ದಾಖಲು..!
Team Udayavani, Mar 5, 2022, 7:50 AM IST
ಉಡುಪಿ: ಸುಮಾರು 15 ವರ್ಷ ಸಂಸಾರ ನಡೆಸಿ ಮೊದಲನೇ ಹೆಂಡತಿಗೆ ಏಕಾಏಕಿ ತ್ರಿಬಲ್ (ತ್ರಿವಳಿ) ತಲಾಖ್ ಕೊಟ್ಟು, ಎರಡನೇ ಮದುವೆಯಾದ ಘಟನೆ ನಡೆದಿದೆ.
ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಅಂಬಾಗಿಲಿನ ನಿವಾಸಿ ಉಸ್ಮಾನ್ ಅವರ ಪುತ್ರಿ ಶೆಹನಾಝ್ ಅವರ ವಿವಾಹವು 2006ರಲ್ಲಿ ತೆಂಕ ಎರ್ಮಾಳಿನ ಮಯ್ಯದ್ದಿ ಅವರ ಪುತ್ರ ಮೊಹಮ್ಮದ್ ಯುಸೂಫ್ನೊಂದಿಗೆ ನಡೆದಿತ್ತು. ಅವರಿಗೆ ಗಂಡು ಮಗುವಿದೆ. ಅನಂತರ ಆರೋಪಿ ಯುಸೂಫ್ ಆಗಾಗ್ಗೆ ಪತ್ನಿಗೆ ಹಣ ತೆಗೆದುಕೊಂಡು ಬಾ, ಇಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ. ಅನಂತರ ಶಹನಾಝ್ ತನ್ನ ತಂದೆ ಮನೆಯಲ್ಲೇ ವಾಸವಾಗಿದ್ದರು.
ಈ ವರ್ಷ ಆರೋಪಿ ಯುಸೂಫ್, ಶಹನಾಝ್ನ ತಂದೆಯವರಲ್ಲಿ, ನಿಮ್ಮ ಮಗಳಿಗೆ ತ್ರಿಬಲ್ ತಲಾಖ್ ನೀಡುತ್ತಿದ್ದೇನೆ. ನಾನು ಕೃಷ್ಣಾಪುರದ ಝೀನತ್ನೊಂದಿಗೆ ಮದುವೆ ಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತ್ರಿಬಲ್ ತಲಾಕ್ ಮೂಲಕ ಮೋಸ ಆಗಿದ್ದು, ಇದಕ್ಕೆ ಆರೋಪಿ ಮೊ| ಯುಸೂಫ್ ಮತ್ತು ಅವನ 2ನೇ ಮದುವೆಗೆ ಸಹಕರಿಸಿದ ಅಲ್ತಾಫ್, ಸಿರಾಜ್, ಆಯಿಷಾ, ನಫೀಸಾ, ಹಸನ್ ಮತ್ತು ಝೀನತ್ ವಿರುದ್ಧ ಶಹನಾಝ್ ಅವರು ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಡಾನೆ ದಾಳಿಗೆ ವ್ಯಕ್ತಿ ಬಲಿ
Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ
Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ
Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ