ದ.ಕ., ಉಡುಪಿ: ವಿವಿಧೆಡೆ ಕೋರ್ಟ್‌ ಆದೇಶ ಪಾಲನೆಗೆ ಒಪ್ಪದೆ ವಿದ್ಯಾರ್ಥಿನಿಯರು ವಾಪಸ್‌


Team Udayavani, Feb 17, 2022, 7:15 AM IST

ದ.ಕ., ಉಡುಪಿ: ವಿವಿಧೆಡೆ ಕೋರ್ಟ್‌ ಆದೇಶ ಪಾಲನೆಗೆ ಒಪ್ಪದೆ ವಿದ್ಯಾರ್ಥಿನಿಯರು ವಾಪಸ್‌

ಪಡುಬಿದ್ರಿ: ಇಲ್ಲಿನ ಸರಕಾರಿ ಪಿ.ಯು. ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ನಾಲ್ವರನ್ನು ವಾಪಸು ಕಳುಹಿಸಲಾಗಿದೆ. 15 ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿರಲಿಲ್ಲ. ಪ್ರಾಂಶುಪಾಲರ ಸಮ್ಮುಖ ಮಂಗಳವಾರ ವಿದ್ಯಾರ್ಥಿ, ಪೋಷಕರ ಸಭೆ ನಡೆದು, ನ್ಯಾಯಾಲಯದ ಮಧ್ಯಾಂತರ ಆದೇಶದ ಕುರಿತು ವಿವರಿಸಲಾಗಿತ್ತು. ಬುಧವಾರ ಪೊಲೀಸ್‌ ಬೆಂಗಾವಲಿನಲ್ಲಿ ತರಗತಿಗಳು ಆರಂಭಗೊಂಡಿದ್ದವು. ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಲ್ಲಿ ಪ್ರಾಂಶುಪಾಲರು ಮಾಡಿದ ಮನವಿ ಫಲಿಸಲಿಲ್ಲ.

ಕಾಪು: 10 ವಿದ್ಯಾರ್ಥಿನಿಯರು ವಾಪಸ್‌
ಕಾಪು: ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲದ ಕಾರಣ ಕಾಪು ಸ.ಪ್ರ.ದ. ಕಾಲೇಜಿನ 10 ವಿದ್ಯಾರ್ಥಿನಿಯರು ಬುಧವಾರ ಮನೆಗೆ ಹಿಂದಿರುಗಿದರು.

ಇಲ್ಲಿ ಒಟ್ಟು 16 ಮುಸ್ಲಿಂ ವಿದ್ಯಾರ್ಥಿನಿ ಯರಿದ್ದು, ಬುಧವಾರ 13 ಮಂದಿ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಮುಂದಾಗಿದ್ದರು. ಆದರೆ ಅವಕಾಶ ನಿರಾಕರಿಸಲಾಯಿತು. ಮೂವರು ಎಂದಿ ನಂತೆ ಕಾಲೇಜು ಆವರಣದ ವರೆಗೆ ಹಿಜಾಬ್‌ ಧರಿಸಿ ಬಂದು, ಬಳಿಕ ಅದನ್ನು ತೆಗೆದಿರಿಸಿ ತರಗತಿಗೆ ಆಗಮಿಸಿದರು.

ಹಳೆಯಂಗಡಿ: ವಿದ್ಯಾರ್ಥಿಗಳ ಪಟ್ಟು
ಹಳೆಯಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತರಗತಿ ಆರಂಭಗೊಂಡಾಗ 15 ಮಂದಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಕಾಲೇಜು ಪ್ರಾಂಶುಪಾಲರು ನ್ಯಾಯಾ ಲಯದ ಆದೇಶದ ಬಗ್ಗೆ ಮನವರಿಕೆ ಮಾಡಿದರೂ ಪಟ್ಟು ಬಿಡದವರೊಂದಿಗೆ ಮೂಲ್ಕಿ ಪೊಲೀಸ್‌ ಠಾಣೆಯ ಎಎಸ್‌ಐ ಚಂದ್ರಶೇಖರ ಕೂಡ ಮಾತುಕತೆ ನಡೆಸಿದರು. ಆದರೆ ಮಾತುಕತೆ ಫಲ ಕಾರಿಯಾಗದೆ 15 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಮನೆಗೆ ತೆರಳಿದರು. ಮೂಲ್ಕಿ ಪೊಲೀಸರು ಕಾಲೇಜಿನಲ್ಲಿ ಭದ್ರತೆ ಒದಗಿಸಿದ್ದರು.

ಮನೆಗೆ ಮರಳಿದ ಓರ್ವ ವಿದ್ಯಾರ್ಥಿನಿ
ಬ್ರಹ್ಮಾವರ: ಬಾರಕೂರು ಸರಕಾರಿ ಕಾಲೇಜಿನ ಪ್ರಥಮ ಪದವಿಯ ಓರ್ವ ವಿದ್ಯಾರ್ಥಿನಿ ಹಿಜಾಬ್‌ ಧರಿಸಿ ಆಗಮಿ ಸಿದ್ದು, ಪ್ರಾಂಶುಪಾಲರು ಕೋರ್ಟ್‌ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಪರೀಕ್ಷೆ ತಯಾರಿಗಾಗಿ ಆಕೆ ಮನೆಗೆ ಮರಳಿರುವುದಾಗಿ ತಿಳಿದು ಬಂದಿದೆ.

ಮೂಡುಬಿದಿರೆ: 6 ಮಂದಿ ಮನೆಗೆ
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದ 6 ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಯಿತು. ಅವರು ಮನೆಗೆ ವಾಪಸಾದರು. ಇಲ್ಲಿನ 10 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಮಂದಿ ಹಿಜಾಬ್‌ ಧರಿಸಿ ಬಂದಿದ್ದರು.

ವಿಟ್ಲ: 11 ವಿದ್ಯಾರ್ಥಿನಿಯರು ವಾಪಸ್‌
ವಿಟ್ಲ: ಇಲ್ಲಿ ಸ.ಪ್ರ.ದ. ಕಾಲೇಜಿನಲ್ಲಿ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದು, ತರಗತಿಗೆ ಹಾಜರಾಗದೆ ಮನೆಗೆ ಹಿಂದಿರುಗಿದರು. ಮಹಿಳಾ ಕೋಣೆಯಲ್ಲಿ ಹಿಜಾಬ್‌ ಕಳಚಿ ತರಗತಿಗೆ ತೆರಳಿ ಎಂದು ಪ್ರಾಂಶುಪಾಲರು ವಿನಂತಿಸಿದ್ದರೂ ವಿದ್ಯಾರ್ಥಿಗಳು ಮನೆಗೆ ಮರಳಿದರು.

23 ವಿದ್ಯಾರ್ಥಿನಿಯರು ಹಿಂದಕ್ಕೆ
ಕಿನ್ನಿಗೋಳಿ: ಪಾಂಪೈ ಪದವಿ ಕಾಲೇಜಿ ನಲ್ಲಿ ಹಿಜಾಬ್‌ ಧರಿಸಿ ಬಂದ 23 ವಿದ್ಯಾರ್ಥಿನಿಯರಲ್ಲಿ ಪ್ರಾಂಶುಪಾಲರು ಕೋರ್ಟ್‌ ಆದೇಶ ಪಾಲಿಸುವಂತೆ ತಿಳಿಸಿದ್ದು, ಒಪ್ಪದ ಕಾರಣ ಮನೆಗೆ ವಾಪಾಸಾಗಿದ್ದಾರೆ.

ಸುಳ್ಯ: 7 ಮಂದಿ ವಾಪಸ್‌
ಸುಳ್ಯದ ನೆಹರೂ ಮೆಮೋರಿಯಲ್‌ ಪದವಿ ಕಾಲೇಜಿನಲ್ಲಿ 13 ವಿದ್ಯಾರ್ಥಿನಿ ಯರು ಹಿಜಬ್‌ ಧರಿಸಿ ಬಂದಿದ್ದರು. ಇದರಲ್ಲಿ ನಾಲ್ವರು ಹಿಜಬ್‌ ತೆಗೆದು ತರಗತಿಗೆ ಹಾಜರಾದರು. ಉಳಿದವರು ವಾಪಸಾಗಿದ್ದಾರೆ ಎಂದು ಎಸ್‌ಪಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.

ಮಂಗಳೂರು ಕಮಿಷನರೆಟ್‌
28 ಮಂದಿ ವಾಪಸ್‌
ಬುಧವಾರ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 6 ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದು, ಈ ಪೈಕಿ 2 ಕಾಲೇಜುಗಳ ಒಟ್ಟು 28 ವಿದ್ಯಾರ್ಥಿಗಳ ವಿನಾ ಉಳಿದವರು ಹಿಜಾಬ್‌ ತೆಗೆದು ತರಗತಿಗೆ ಹಾಜರಾಗಿದ್ದಾರೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

 

ಟಾಪ್ ನ್ಯೂಸ್

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.