ತೋಟಗಳಿಗೆ ನುಗ್ಗಿದ ಕಾಡಾನೆ ಹಿಂಡು : ರೈತರ ಗದ್ದೆ, ತೋಟಗಳಿಗೆ ಹಾನಿ
Team Udayavani, Jan 12, 2022, 4:04 PM IST
ಮುಂಡಗೋಡ : ತಾಲೂಕಿನ ಕಾತೂರ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ಗದ್ದೆ, ತೋಟಗಳಲ್ಲಿ ದಾಳಿ ಮಾಡಿ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡುತ್ತಿದೆ.
ಮಳಗಿ, ಕಾತೂರ, ನಾಗನೂರ, ಕುರ್ಲಿ, ರಾಮಾಪುರ ವ್ಯಾಪ್ತಯಲ್ಲಿ ಕಾಡಾನೆಗಳು ನಾಶ ಮಾಡುತ್ತೇವೆ. ಮಳಗಿ ಗ್ರಾಮದ ಹುಬ್ಬಳ್ಳಿ ಶಿರಶಿ ರಸ್ತೆಯ ಪಕ್ಕದಲ್ಲಿನ ಬಸವ್ವಾ ಮಾಹದೇವಪ್ಪ ಹುಲ್ಲುರ ಎಂಬುವರ ಗದ್ದೆಗೆ ಮಂಗಳವಾರ ಮುಂಜಾನೆ ದಾಳಿ ಮಾಡಿ 20 ಅಡಕೆ ಸಸಿ, ಬಿದರು 10, ತೆಂಗಿನ ಮರ 2, ಹುಲ್ಲಿನ ಬಣವಿ ಸೇರಿದಂತೆ, ಭತ್ತದ ಬೆಳೆಯನ್ನು ಹಾನಿಮಾಡಿದೆ. ರಮೇಶ ಬಸಪ್ಪ ಸಾಲಗೇರ ಎಂಬ ರೈತರಿಗೆ ಸೇರಿದ ಗದ್ದೆಯಲ್ಲಿ 25 ಅಡಕೆ ಸಸಿಗಳನ್ನು ಹಾಗೂ 25 ಮೂಟೆಯ ಚೀಲದ ಭತ್ತವನ್ನು ಹಾನಿ ಮಾಡಿ ಹುಲ್ಲಿನ ಬಣವಿಯನ್ನು ನಾಶ ಮಾಡಿವೆ.
ಕಳೆದ ಒಂದು ತಿಂಗಳಿಂದ ಕಾತೂರು ವಲಯದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರೈತರ ಗದ್ದೆಗಳಲಿ ನಿರಂತರವಾಗಿ ದಾಳಿ ಮಾಡುತ್ತಾ ಗದ್ದೆಯಲ್ಲಿನ ಭತ್ತದ ಬೆಳೆ, ಕಬ್ಬಿನ ಬೆಳೆ, ಅಡಿಕೆ ತೋಟ, ಬಾಳೆ ತೋಟ ಭತ್ತದ ಕಾಳಿನ ಬಣವಿ ಹೀಗೆ ಬೆಳೆಗಳನ್ನು ಸಾಕಾಗುವಷ್ಟು ತಿಂದು ತುಳಿದು ಹಾನಿ ಮಾಡಿ ಬೇರೆ ಬೇರೆ ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಇನ್ನೂ ಸರ್ಕಾರ
ಹಾನಿ ಮಾಡಿದ ಅರ್ಧದಷ್ಟು ಪರಿಹಾರ ನೀಡುವುದಿಲ್ಲ ಪರಿಹಾರಕ್ಕೆ ಅರ್ಜಿಗಳನ್ನು ಹಾಕುವುದು ಬೇಡ ಎಂದು ಹಲವು ರೈತರು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೆ. ಇನ್ನು ಕೆಲವು ರೈತರು ಬೆಳೆ ಹಾನಿಯಾದ ಉಪವಲಯ ಅರಣ್ಯ ಅಧಿಕಾರಿಗಳ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಉತ್ತರಪ್ರದೇಶ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಆಘಾತ; ಸಚಿವ ದಾರಾ ಸಿಂಗ್ ರಾಜೀನಾಮೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್