ಹೈದರಾಬಾದ್‌ಗೆ ಒಲಿದೀತೇ ವಾಂಖೇಡೆ?


Team Udayavani, May 2, 2019, 9:43 AM IST

kane

ಮುಂಬಯಿ: ಗುರುವಾರದ ಐಪಿಎಲ್‌ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್‌-ಸನ್‌ರೈಸರ್ ಹೈದರಾಬಾದ್‌ “ವಾಂಖೇಡೆ’ ಅಂಗಳ ದಲ್ಲಿ ಸೆಣಸಲಿವೆ. ಎರಡೂ ತಂಡಗಳ ಪಾಲಿಗೆ ಇದು ಮಹತ್ವದ ಪಂದ್ಯ.

14 ಅಂಕಗಳೊಂದಿಗೆ 3ನೇ ಸ್ಥಾನ ದಲ್ಲಿರುವ ಮುಂಬೈ ಈ ಪಂದ್ಯ ಗೆದ್ದರೆ ತನ್ನ ಪ್ಲೇ ಆಫ್ ಪ್ರವೇಶವನ್ನು ಅಧಿಕೃತಗೊಳಿಸಲಿದೆ. ತವರಿನ ಪಂದ್ಯ ವಾದ್ದರಿಂದ ರೋಹಿತ್‌ ಪಡೆ ಇದರಲ್ಲಿ ಯಶಸ್ಸು ಕಂಡೀತು ಎಂಬುದೊಂದು ಲೆಕ್ಕಾಚಾರ. ಇನ್ನೊಂದೆಡೆ 12 ಅಂಕ ಹೊಂದಿರುವ ಹೈದರಾಬಾದ್‌ 4ನೇ ಸ್ಥಾನದಲ್ಲಿದೆ. ಮೇಲೇರಬೇಕಾದರೆ ಈ ಪಂದ್ಯವನ್ನು ಗೆಲ್ಲಬೇಕಾದುದು ಅನಿವಾರ್ಯ.
ಮುಂಬೈ ಎದುರಿನ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಅಲ್ಜಾರಿ ಜೋಸೆಫ್ ದಾಳಿಗೆ ತತ್ತರಿಸಿದ ಹೈದರಾಬಾದ್‌ ತವರಿನಲ್ಲೇ 40 ರನ್‌ಗಳ ಸೋಲುಂಡಿತ್ತು. ಈ ಹೀನಾಯ ಸೋಲಿಗೆ ಹೈದರಾಬಾದ್‌ ಸೇಡು ತೀರಿಸಿಕೊಂಡೀತೇ ಎಂಬುದೊಂದು ಕುತೂಹಲ. ಅಂದು ಸನ್‌ರೈಸರ್ಗೆ ಬಿಸಿ ಮುಟ್ಟಿಸಿದ ಜೋಸೆಫ್ ಈಗಿಲ್ಲ ವಾದರೂ ಮುಂಬೈ ಬೌಲಿಂಗ್‌ ಬಲವೇನೂ ಕುಂಟಿತವಾಗಿಲ್ಲ.

ಮುಂಬೈ ಸಮತೋಲಿತ ತಂಡ
ಮುಂಬೈ ಇಂಡಿಯನ್ಸ್‌ ಅತ್ಯಂತ ಸಮತೋಲಿತ ತಂಡ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡದ ದೊಡ್ಡ ಆಸ್ತಿ. ಯಾವುದೇ ಪರಿಸ್ಥಿತಿಯಲ್ಲಿಯೂ ಸಿಡಿಯಬಲ್ಲ ಪಾಂಡ್ಯ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಕಳೆದ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ತಂಡತೀವ್ರ ಹಿನ್ನಡೆಯಲ್ಲಿದ್ದರೂ ಪಾಂಡ್ಯ 17 ಎಸೆತಗಳಿಂದ 50 ರನ್‌ ಸಿಡಿಸಿ ಈ ಬಾರಿಯ ವೇಗದ ಫಿಫ್ಟಿ ದಾಖಲಿಸಿದ್ದನ್ನು ಮರೆಯುವಂತಿಲ್ಲ.

ಆರಂಭಿಕರಾದ ರೋಹಿತ್‌ ಶರ್ಮ, ಡಿ ಕಾಕ್‌ ಮಿಂಚಿದರೆ ಮುಂಬೈ ಮೇಲುಗೈ ಸಾಧಿಸುವುದು ಖಚಿತ. ತಂಡದ ಬೌಲಿಂಗ್‌ ಕೂಡ ಘಾತಕವಾಗಿದೆ. ಅನುಭವಿ ಲಿಸಿತ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ, ಪಾಂಡ್ಯ ಬ್ರದರ್, ರಾಹುಲ್‌ ಚಹರ್‌ ಉತ್ತಮ ಲಯದಲ್ಲಿದ್ದಾರೆ.

ಕಾಡಲಿದೆ ವಾರ್ನರ್‌ ಕೊರತೆ
ಈ ಐಪಿಎಲ್‌ನ ಬ್ಯಾಟಿಂಗ್‌ ಹೀರೋ, ಎಡಗೈ ಆರಂಭ ಕಾರ ಡೇವಿಡ್‌ ವಾರ್ನರ್‌ ಹೊರ ಹೋಗಿರುವುದು ಹೈದರಾಬಾದ್‌ಗೆ ಎದು ರಾಗಿರುವ ದೊಡ್ಡ ಆಘಾತ. 12 ಪಂದ್ಯಗಳಲ್ಲಿ 692 ರನ್‌ ರಾಶಿ ಹಾಕಿದ ವಾರ್ನರ್‌ ಮುಂದಿನ ಏಕದಿನ ವಿಶ್ವಕಪ್‌ ತಯಾರಿಗಾಗಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. ಜಾನಿ ಬೇರ್‌ಸ್ಟೊ ಇಲ್ಲದೇ ಬಡವಾಗಿರುವ ಸನ್‌ರೈಸರ್ಗೆ ಈಗ ವಾರ್ನರ್‌  ಕೂಡ ಇಲ್ಲದಿರುವುದು ಭಾರೀ ಹೊಡೆತ. ಈ ವರೆಗೆ ಹೈದರಾಬಾದ್‌ಗೆ ವಾರ್ನರ್‌- ಬೇರ್‌ಸ್ಟೊ ಜೋಡಿಯ ಬ್ಯಾಟಿಂಗ್‌ ಪರಾಕ್ರಮವೇ ಆಧಾರವಾಗಿತ್ತು. ತಂಡದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ನಂಬಿಕೆ ಇಡುವ ಹಾಗಿಲ್ಲ. ಆದರೆ ಕನ್ನಡಿಗ ಮನೀಷ್‌ ಪಾಂಡೆ ಫಾರ್ಮ್ಗೆ ಮರಳಿರುವುದು ಸಮಾಧಾನದ ಸಂಗತಿ. ಬೌಲಿಂಗ್‌ನಲ್ಲಿ ಹೈದರಾಬಾದ್‌ ಬಲಿಷ್ಠ ವಾಗಿದೆ. ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಸಂದೀಪ್‌ ಶರ್ಮ, ಭುವನೇಶ್ವರ್‌ ಕುಮಾರ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಕ್ಲಿಕ್‌ ಆದರೆ ಮೇಲುಗೈ ನಿರೀಕ್ಷಿಸಲಡ್ಡಿಯಿಲ್ಲ.

ಗಾಯಾಳು ಚಕ್ರವರ್ತಿ ಪಂಜಾಬ್‌ನಿಂದ ಹೊರಕ್ಕೆ
ಗಾಯದಿಂದ ಚೇತರಿಸಿಕೊಳ್ಳದ ಪಂಜಾಬ್‌ ತಂಡದ ಲೆಗ್‌ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ತಮಿಳುನಾಡಿನವರಾದ ವರುಣ್‌ ಚಕ್ರವರ್ತಿ ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ್ದು ಒಂದು ಪಂದ್ಯ ಮಾತ್ರ. ಕೆಕೆಆರ್‌ ಎದುರಿನ ಈ ಪಂದ್ಯದಲ್ಲಿ 35 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದರು. ಚೆನ್ನೈ ಎದುರಿನ ಪಂದ್ಯಕ್ಕಾಗಿ ತೆರಳಿದ ವೇಳೆ ವರುಣ್‌ ಕೈಬೆರಳಿನ ನೋವಿಗೆ ಸಿಲುಕಿದರು. ಇದು ಇನ್ನೂ ವಾಸಿಯಾಗದ ಕಾರಣ ಅವರನ್ನು ತಂಡದಿಂದ ಹೊರಗಿರಿಸಲು ನಿರ್ಧರಿಸಲಾಯಿತು.

ಸದ್ಯ 12 ಪಂದ್ಯಗಳಿಂದ 10 ಅಂಕ ಸಂಪಾದಿಸಿರುವ ಪಂಜಾಬ್‌ 7ನೇ ಸ್ಥಾನದಲ್ಲಿದೆ. ವರುಣ್‌ ಚಕ್ರವರ್ತಿ ಬದಲು ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಂಭವ ಕಡಿಮೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.