Davanagere ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


Team Udayavani, Oct 31, 2023, 8:01 PM IST

Davanagere ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ 2023ನೇ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಸಂಘ ಸಂಸ್ಥೆ ಗಳಿಗೆ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘಕ್ಕೆ ನೀಡಲಾಗಿದೆ.

ಬಂಜಾರ ಸಮುದಾಯದ ಪ್ರಪ್ರಥಮ ಇಂಜಿನಿಯರ್ ಕೆ. ರೂಪ್ಲಾನಾಯಕ್, ಹಕ್ಕಿಪಿಕ್ಕಿ ಜನಾಂಗದ ಅಭಿಜಾತೆ ಕಲಾವಿದೆ, ಜಾನಪದ ಹಾಡುಗಾರ್ತಿ ಶಿವಂಗಿ ಶಣ್ಮರಿ, ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ನೈಪುಣ್ಯತೆ ಸಾಽಸಿರುವ ಟಿ. ಶಿವಶಂಕರ್ ಪ್ರಸ್ತಕ್ತ ಸಾಲಿನ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವ ಮಹಾನ್ ಸಾಧಕರು.

ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ನಡೆಸುತ್ತಿರುವ ಡಾಣ ಸಿ.ಆರ್. ನಸೀರ್ ಅಹಮದ್ ಅವರ ಅಧ್ಯಕ್ಷತೆಯ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ.

ಕೆ. ರೂಪ್ಲಾನಾಯಕ್…
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕುಡುನೀರುಕಟ್ಟೆಯ ಕೆ. ರೂಪ್ಲಾನಾಯಕ್ ಬಂಜಾರ
(ಲಂಬಾಣಿ) ಸಮುದಾಯದ ಪ್ರಥಮ ಇಂಜಿನಿಯರ್. ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಕೆ. ರೂಪ್ಲಾನಾಯಕ್ ತೇರ್ಗಡೆಯೊಂದಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ನೇಮಕಾತಿಗೊಂಡವರು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಮುಖ್ಯಸ್ಥರಾಗಿದ್ದವರು. ಅತೀ ಮುಖ್ಯವಾಗಿ 1979 ರಲ್ಲಿ ನಿವೃತ್ತಿ ನಂತರ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕೆ. ರೂಪ್ಲಾನಾಯಕ್ ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನವನ್ನು ಸಂತಸೇವಾಲಾಲ್‌ರವರ ಜನ್ಮ ಸ್ಥಳ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಿರ್ಮಾಣದ ಪ್ರಮುಖ ಕಾರಣಕರ್ತರು. 35 ವರ್ಷಕ್ಕೂ ಹೆಚ್ಚು ಕಾಲ ಮನೆ ತೊರೆದು ಶಿವಮೊಗ್ಗದ ಹೋಟೆಲೊಂದರಲ್ಲಿದ್ದುಕೊಂಡು ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದವರು. ಕರ್ನಾಟಕ ಬಂಜಾರ ಸಂಘ ಕಟ್ಟಿ ಬೆಳೆಸಿದವರು. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ೧೦೫ ವರ್ಷದ ಕೆ. ರೂಪ್ಲಾನಾಯಕ್ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಂಗಿ ಶಣ್ಮರಿ(ಜಾನಪದ)
ಅತಿ ವಿಶಿಷ್ಟ ಬುಡಕಟ್ಟು ಸಂಸ್ಕೃತಿಯಾಗಿರುವ ಹಕ್ಕಿಪಿಕ್ಕಿ ಜನಾಂಗದ 95ವರ್ಷ ವಯೋಮಾನದ ಶಿವಂಗಿ ಶಣ್ಮರಿ

ಜಾನಪದ ಕ್ಷೇತ್ರದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಶಿವಂಗಿ ಶಣ್ಮರಿ ಚಿಕ್ಕ ವಯಸ್ಸಿನಿಂದಲೇ ಜಾನಪದ ಹಾಡುಗಳ ಹಾಡುತ್ತಿದ್ದವರು. ಪತಿ ಶಣ್ಮರಿ ಅವರೊ ಡನೆ ಜಾನಪದ ಹಾಡುಗಾರಿಕೆ ಕಲೆಯನ್ನು ಪಸರಿಸಿದವರು. ಹಕ್ಕಿಪಿಕ್ಕಿ ಜನಾಂಗದ ಮಾತೃಭಾಷೆ ವಾಘ್ರಿ ಬೋಲಿ… ಯಲ್ಲಿ ಅತ್ಯಂತ ನಿರರ್ಗಳವಾಗಿ ಜಾನಪದ ಹಾಡು, ಪುರಾಣ, ಪ್ರವಚನ ಹೇಳುವ ಶಿವಂಗಿ ಶಣ್ಮರಿ ಆಶುಕವಿಯೂ ಹೌದು. ತಮ್ಮ ಕಣ್ಣಿಗೆ ಬಿದ್ದುದ್ದು, ಮನಸ್ಸಿಗೆ ಬಂದ ಆಲೋಚನೆಯಂತೆ ಸ್ಥಳದಲ್ಲೇ ಹಾಡು ಕಟ್ಟಿ ಸುಶ್ರಾವ್ಯವಾಗಿ ಹಾಡುವುದನ್ನ ಸಿದ್ಧಿಸಿಕೊಂಡವರು. ಹಕ್ಕಿಪಿಕ್ಕಿ ಜನಾಂಗದ ಭಾಷೆ ಮಾತ್ರವಲ್ಲ ಕನ್ನಡದಲ್ಲೂ ಅತ್ಯಂತ ಸುಲಲಿತ ವಾಗಿ ಜಾನಪದ ಹಾಡುಗಳ ಹಾಡುವಂತಹ ಅಭಿಜಾತ ಕಲಾವಿದೆ ಶಿವಂಗಿ ಶಣ್ಮರಿ. 95ನೇ ವಯಸ್ಸಿನಲ್ಲೂ ಹಾಡುಗಳ ಹಾಡುವ ಶಿವಂಗಿ ಶಣ್ಮರಿ ಅವರ ನೋಡಿಯೇ ಮೊಮ್ಮಗಳು ಕುಮುದಾ ಅವರು ಸಹ ಜಾನಪದ ಹಾಡುಗಾತಿ ಯಾಗಿ ರೂಪುಗೊಂಡವರು. ಪ್ರಸ್ತುತ ತರೀಕೆರೆಯಲ್ಲಿ ಮೆಸ್ಕಾಂನಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಆಗಿ ಕೆಲಸ ಮಾಡುತ್ತಿರುವ ಕುಮುದಾ ಹಕ್ಕಿಪಿಕ್ಕಿ ಜನಾಂಗದ ಮೊಟ್ಟ ಮೊದಲ ಮಹಿಳಾ ಉದ್ಯೋಗಿ. ಶಿವಂಗಿ ಶಣ್ಮರಿ ನೂರಾರು ಹಾಡುಗಾರರಿಗೆ ಈ ಕ್ಷಣಕ್ಕೂ ಸ್ಪೂರ್ತಿ, ಪ್ರೇರಣೆ.

ಟಿ. ಶಿವಶಂಕರ್(ಶಿಲ್ಪಕಲೆ)
ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಂದೆಯಿಂದ ಕಲಿತಂತಹ ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ಅತ್ಯಂತ ನೈಪುಣ್ಯತೆಯ ಸಾಽಸಿರುವ ದಾವಣಗೆರೆಯ ಸರಸ್ವತಿ ನಗರದ ನಿವಾಸಿ, 60 ವರ್ಷದ ಟಿ. ಶಿವಶಂಕರ್ ಅವರು ಶಿಲ್ಪಕಲೆ ವಿಭಾಗದಲ್ಲಿ ೨೦೨೩ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತಂದೆ ಟಿ. ಯಲ್ಲಪ್ಪ ಅವರ ನೋಡಿಯೇ ದೇವಸ್ಥಾನಗಳ ರಾಜಗೋಪುರ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರು 40-45 ವರ್ಷಗಳಲ್ಲಿ ಅನೇಕ ದೇವಾಲಯಗಳಲ್ಲಿ ಅತ್ಯಂತ ಸುಂದರ, ಅತ್ಯಾಕರ್ಷಕ ಗೋಪುರಗಳ ನಿರ್ಮಾಣ ಮಾಡಿದ ಕೀರ್ತಿಗೆ ಪಾತ್ರರಾದವರು. ದಾವಣಗೆರೆಯ ಹಳೆ ಪಿಬಿ ರಸ್ತೆಯ ಶನೇಶ್ವರ ದೇವಸ್ಥಾನ, ನಿಟುವಳ್ಳಿಯ ಶ್ರೀ ಕರಿಯ ಮ್ಮ ದೇವಸ್ಥಾನ, ಭಗತ್‌ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ, ಕೈದಾಳೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಹದಡಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ, ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹೀಗೆ 400-450ಕ್ಕೂ ಹೆಚ್ಚು ದೇವಸ್ಥಾನಗಳ ಗೋಪುರ ನಿರ್ಮಾಣ ಮಾಡಿದವರು. ಗೋಪುರ ಮಾತ್ರವಲ್ಲ ಪ್ರತಿಮೆಗಳ ನಿರ್ಮಾಣದಲ್ಲೂ ಸಿದ್ಧಹಸ್ತರು. ಹಾವೇರಿ ಜಿಲ್ಲೆಯ ಹಳೆ ಮಾಗನೂರು ಗ್ರಾಮದಲ್ಲಿ 41 ಅಡಿ ಎತ್ತರದ ಆಂಜನೇಯಸ್ವಾಮಿ ಪ್ರತಿಮೆ, ಸಾತೇನಹಳ್ಳಿಯ ಶಾಂತೇಶ್ವರಿ ದೇವಾಲಯದಲ್ಲಿ 50 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಿದವರು. ಹೊಟ್ಟೆಪಾಡಿಗಾಗಿ ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಅಪ್ರತಿಮ ಸಾಧನೆ ಮಾಡು ತ್ತಿರುವ ಟಿ. ಶಿವಶಂಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಖುಷಿ ಆಗುತ್ತಿದೆ. ಪಟ್ಟಂತಹ ಕಷ್ಟಕ್ಕೆ ದೇವರು ಆಶೀರ್ವಾದ ರೂಪವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.