ಪ್ರೇಮ್‌ ಈಗ ಲವ್‌ ಲೀಡರ್‌


Team Udayavani, Apr 9, 2018, 11:26 AM IST

Prem-(1).jpg

ನೆನಪಿರಲಿ ಪ್ರೇಮ್‌ ಅಂದಾಗ, ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಹುಡುಗಿಯರ ದಂಡೇ ಇದೆ. ಅದರಲ್ಲೂ ಕಾಲೇಜ್‌ ಹುಡುಗಿಯರ ಪಾಲಿಗೆ ಪ್ರೇಮ್‌ ಪಕ್ಕಾ ಲವ್ವರ್‌ ಬಾಯ್‌. ಅದೆಲ್ಲವೂ ಸರಿ, ಈಗ ಅದೇ ನೆನಪಿರಲಿ ಪ್ರೇಮ್‌, ಅದೇಕೋ ಏನೋ, ಹುಡುಗಿಯರನ್ನ ತುಂಬಾ ಬೈದಿದ್ದಾರೆ! ಹೌದು, ಆದರೆ, ಯಾಕೆ ಅವರು ಹುಡುಗಿಯರನ್ನು ಬಾಯಿಗೆ ಬಂದಂತೆ ಬೈದಿದ್ದಾರೆ ಎಂಬುದಕ್ಕೆ “ದಳಪತಿ’ ನೋಡಬೇಕು. ಅವರ ಅಭಿನಯದ 22 ನೇ ಚಿತ್ರವಿದು. ಈ ವಾರ ತೆರೆಗೆ ಬರುತ್ತಿದೆ. “ದಳಪತಿ’ಯ ವಿಶೇಷ ಕುರಿತಂತೆ ಪ್ರೇಮ್‌ “ಉದಯವಾಣಿ’ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ.

* ಪ್ರೇಮ್‌ ದಳಪತಿಯಲ್ಲಿ ಸಂಪೂರ್ಣ ಬದಲಾಗಿದ್ದಾರಂತೆ?
ಹಾಗೇನೂ ಇಲ್ಲ. ಆದರೆ, ಎಂದಿನ ಚಿತ್ರಗಳಿಗಿಂತ ಕೊಂಚ ಹೊಸ ಬದಲಾವಣೆ ಇಲ್ಲಿದೆ. ಸಿನಿಮಾ ನೋಡಿದವರಿಗೆ ಪಕ್ಕಾ ಬದಲಾವಣೆ ಏನೆಂಬುದಂತೂ ಗೊತ್ತಾಗಲಿದೆ.

* ಆ ಬದಲಾವಣೆ ಏನೆಂದು ಹೇಳಬಹುದಾ?
ನಾನು ಇದುವರೆಗೆ ಹಲವು ಚಿತ್ರಗಳಲ್ಲಿ ಲವ್ವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದೆ. ಆದರೆ, ಇಲ್ಲಿ “ಲವ್‌ ಲೀಡರ್‌’ ಆಗಿ ಕಾಣಿಸಿಕೊಂಡಿದ್ದೇನೆ. ಅದೇ ಆ ಬದಲಾವಣೆಯ ವಿಶೇಷ. ಲವ್‌ ಲೀಡರ್‌ ಯಾಕಾಗುತ್ತಾನೆ ಎಂಬುದೇ ಚಿತ್ರದ ಹೈಲೆಟ್‌.

*ಹಾಗಾದರೆ ಲವ್‌ ಲೀಡರ್‌ ಇಲ್ಲಿ ಪ್ರೀತಿಗಾಗಿ ಹೊಡೆದಾಡುತ್ತಾನೆ ಅಂದಗಾಯ್ತು?
ಪ್ರೀತಿಸುವ ಪ್ರತಿಯೊಬ್ಬರಿಗೂ ಆ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅಲ್ಲೊಂದು ಭಯ ಇದ್ದೇ ಇರುತ್ತೆ. ಪ್ರೀತಿ ಮಾಡುವ ಶ್ರೀಮಂತನೇ ಇರಲಿ, ಬಡವನೇ ಇರಲಿ, ಆ ಪ್ರೀತಿಯನ್ನು ಪಡೆದುಕೊಳ್ಳಲು ಹರಸಾಹಸ ಪಡೆಯಲೇಬೇಕು. ಅಂಥವರಿಗೊಂದು ಸಂದೇಶ ಇಲ್ಲಿದೆ. ಅಂತಹ ಸಮಸ್ಯೆಯನ್ನು ಹೇಗೆ ದಾಟಿ ಹೊರಬರಬೇಕು ಎಂಬುದನ್ನು ಆ ಲವ್‌ಲೀಡರ್‌ ಇಲ್ಲಿ ವಿಶೇಷವಾಗಿ ಹೇಳಿದ್ದಾನೆ. ಅದೇ “ದಳಪತಿ’ಯ ಸ್ಪೆಷಲ್ಲು.

* ದಳಪತಿಯಲ್ಲಿ ಪ್ರೇಮ್‌ ಪಕ್ಕಾ ಆ್ಯಕ್ಷನ್‌ ಹೀರೋನಾ?
ಇಲ್ಲಿ ಓಹೋ ಎನ್ನುವಂತಹ ಆ್ಯಕ್ಷನ್‌ಗಳಿಲ್ಲ. ಬಾಂಬ್‌ ಸಿಡಿಯುವಂತಹ ಸನ್ನಿವೇಶಗಳಿಲ್ಲ. ಟಾಟಾ ಸುಮೋ ಎಗರುವುದೂ ಇಲ್ಲ. ಆದರೆ, ಕಮರ್ಷಿಯಲ್‌ ಲವ್‌ಸ್ಟೋರಿಯಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಮಾಸ್‌ ಮತ್ತು ಕ್ಲಾಸ್‌ ಅಂಶಗಳಿಗೇನೂ ಬರವಿಲ್ಲ. ಒಂದು ಕಂಪ್ಲೀಟ್‌ ಮಾಸ್‌ ಮತ್ತು ಕ್ಲಾಸ್‌ ಫೀಲ್‌ ಇರುವಂತಹ ಪಕ್ಕಾ ಲವ್‌ಸ್ಟೋರಿ ಚಿತ್ರವಿದು. ಪ್ರೀತಿಸೋರಿಗೆ, ಪ್ರೀತಿಸಬೇಕೆಂದಿರುವವರಿಗೆ ಸ್ಪೆಷಲ್‌ ಸಿನಿಮಾ ಅನ್ನಲ್ಲಡ್ಡಿಯಿಲ್ಲ.

* “ದಳಪತಿ’ ತುಂಬಾನೇ ತಡವಾಯಿತಲ್ವಾ?
ನಿಜ ಹೇಳಬೇಕೆಂದರೆ, “ದಳಪತಿ’ ವೇಳೆಯಲ್ಲಿ ನಾನು “ಚೌಕ’ದಲ್ಲಿದ್ದೆ. ನಿರ್ದೇಶಕ ಪ್ರಶಾಂತ್‌ರಾಜ್‌ “ಜೂಮ್‌’ ಮೂಡ್‌ನ‌ಲ್ಲಿದ್ದರು. ಅತ್ತ, ಕೃತಿ ಕರಬಂದ ಕೂಡ ತೆಲುಗು, ಹಿಂದಿ ಚಿತ್ರಗಳಲ್ಲಿ ಬಿಜಿಯಾಗಿದ್ದರು. ಎಲ್ಲರೂ ಆ ಜವಾಬ್ದಾರಿಗಳನ್ನು ಮುಗಿಸಿಕೊಂಡು ಬರಲೇಬೇಕಿತ್ತು. ಆ ಬಳಿಕ “ದಳಪತಿ’ ಶುರುವಾಯ್ತು. ಸ್ವಲ್ಪ ತಡವಾಗಿದೆ. ಆದರೂ ಲವ್‌ ಲೀಡರ್‌ನನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ.

* “ದಳಪತಿ’ಯಲ್ಲಿ ಪ್ರೇಮ್‌ ಪಾತ್ರವೇನು?
ಈಗಲೇ ಎಲ್ಲವನ್ನೂ ಹೇಳುವುದು ಕಷ್ಟ. ಅದನ್ನು ಸಿನಿಮಾದಲ್ಲೇ ನೋಡಬೇಕು. ಎರಡು ಶೇಡ್‌ ಪಾತ್ರವಿದೆ. ಮೊದಲು ಕ್ಲಾಸ್‌, ಆಮೇಲೆ ಮಾಸ್‌. ಹೊಸತರಹ ಫೀಲ್‌ ಕೊಡುವಂತಹ ಪಾತ್ರ ಸಿಕ್ಕಿದೆ. ನನ್ನ ಪ್ರಕಾರ, ನನ್ನ ಕೆರಿಯರ್‌ನಲ್ಲಿ “ದಳಪತಿ’ ವಿಶೇಷ ಕಥೆವುಳ್ಳ ಚಿತ್ರ.

* “ದಳಪತಿ’ ಬಗ್ಗೆ ಒನ್‌ಲೈನ್‌ ಹೇಳುವುದಾದರೆ?
ಪ್ರೀತಿಸುವವರಿಗೆ ಮತ್ತು ಸಂಬಂಧಗಳಿಗೆ ಯಾವುದೇ ಅಡ್ಡಿ ಆತಂಕ ಬಂದರೂ, “ದಳಪತಿ’ಯಾಗಿ ಅವೆಲ್ಲದರ ಸಮಸ್ಯೆ ಬಗೆಹರಿಸಲು ಸಿದ್ಧರಾಗಿರಬೇಕು ಎಂಬ ಕಥೆ ಇಲ್ಲಿದೆ. ಉಳಿದಂತೆ ಚಿತ್ರದಲ್ಲಿ ಚಿತ್ರಕಥೆ ಹೊಸದಾಗಿದೆ. ಚರಣ್‌ ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಹಾಡು ಇಲ್ಲಿದೆ. ಅದರಲ್ಲೂ, ನಾನು ಟೈಟಲ್‌ ಸಾಂಗ್‌ನಲ್ಲಿ ಹುಡುಗಿಯರನ್ನು ಬೈಯುವ ಹಾಡೊಂದನ್ನು ಹಾಡಿದ್ದೇನೆ. ಅದೊಂಥರಾ ಮಜವಿದೆ. ಹುಡುಗರಿಗೆ ಖಂಡಿತ ಇಷ್ಟವಾಗುತ್ತೆ ಅದು.
 
* ಮುಂದಿನ ಚಿತ್ರಗಳು?
“ಲೈಫ್ ಜೊತೆ ಒಂದು ಸೆಲ್ಫಿ’ ನನ್ನ 24 ನೇ ಚಿತ್ರ. ಈಗಾಗಲೇ ಅದು ಮಗಿದಿದ್ದು, ಇನ್ನಷ್ಟು ಹೊಸ ಚಿತ್ರಗಳ ಮಾತುಕತೆ ನಡೆದಿದೆ. ಕಥೆಗಳನ್ನು ಕೇಳುತ್ತಿದ್ದೇನೆ. “ದಳಪತಿ’ ಬಿಡುಗಡೆ ಬಳಿಕ ಹೊಸ ಪ್ರಾಜೆಕ್ಟ್ ಬಗ್ಗೆ ಗಮನ.  25 ನೇ ಚಿತ್ರ ಯಾವುದಾಗುತ್ತೋ ಗೊತ್ತಿಲ್ಲ. ಸದ್ಯದಲ್ಲೇ  ಅನೌನ್ಸ್‌ ಮಾಡ್ತೀನಿ.

ಟಾಪ್ ನ್ಯೂಸ್

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ!

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ್ ಹೆಗಡೆ!

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.