ವಸಾಯಿರೋಡ್ ಜಿಎಸ್ಬಿ ಶಾಂತಿಧಾಮ ಸೇವಾ ಸಮಿತಿ: ಮಹಾಶಿವರಾತ್ರಿ
Team Udayavani, Mar 7, 2019, 12:50 AM IST
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಮಾ. 4ರಂದು ಮಹಾಶಿವರಾತ್ರಿ ಉತ್ಸವವು ಅದ್ದೂರಿಯಾಗಿ ನಡೆಯಿತು.
ಪೂರ್ವಾಹ್ನ ಶಿವನ ಲಿಂಗಕ್ಕೆ ಭಸ್ಮಲೇಪನ, ಬಿಲ್ವಾರ್ಚನೆ, ಲಿಂಗಾಷ್ಟಕ, ಅಷ್ಟೋತ್ತರ, ವಿವಿಧ ಬಗೆಯ ಅಭಿಷೇಕ, ಸಮಿತಿಯ ವಿಶ್ವಸ್ತರಾದ ಅಭಿಜಿತ್ ನರಸಿಂಹ ಪ್ರಭು ಅವರ ಹಸ್ತದಿಂದ ಜರಗಿತು. ಸಂಜೆ ರುದ್ರಾಭಿಷೇಕ, ಪಂಚಾಮೃತ, ಹಾಲು, ಕಬ್ಬಿನ ರಸ, ಸೀಯಾಳ ಅಭಿಷೇಕ, ಬಿಲ್ವಾರ್ಚನೆ ಮತ್ತು ವಿವಿಧ ಪೂಜೆ ಸಮಿತಿಯ ವಿಶ್ವಸ್ತರಾದ ನರಸಿಂಹ ಅನಂತ ಪ್ರಭು ಅವರ ಹಸ್ತದಿಂದ ಜರಗಿತು.
ಸಮಿತಿಯ ವಿಶ್ವಸ್ತರಾದ ಲಕ್ಷ್ಮೀ ನರಸಿಂಹ ಪ್ರಭು ಅವರು ಶಿವನ ಅಷ್ಟೋತ್ತರ, ಮಹಾ ಮೃತ್ಯುಂಜಯ ಮಂತ್ರವನ್ನು ಸಾಮೂಹಿಕವಾಗಿ ಪಠಿಸಿ ಶಿವ
ರಾತ್ರಿಯ ಮಹಿಮೆಯ ಬಗ್ಗೆ ಭಕ್ತಾದಿಗಳಿಗೆ ವಿಸ್ತಾರವಾಗಿ ಹೇಳಿದರು. ಸಮಿತಿಯವರಿಂದ ಭಜನ ಕಾರ್ಯಕ್ರಮ ನಡೆಯಿತು.
ಮಂಡಳಿಯ ಸದಸ್ಯರು, ಶಿವನ ಭಜನೆಗಳನ್ನು ಹಾಡಿದರು. ತಬಲಾದಲ್ಲಿ ಅಭಿಜಿತ್ ಪ್ರಭು, ಪಖ್ವಾಜ್ನಲ್ಲಿ ಸನತ್ ಕುಮಾರ್ ಪ್ರಭು ಸಹಕರಿಸಿದರು. ಶಿವನ ಪ್ರತಿಮೆಗೆ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ಪ್ರಸಾದ ರೂಪದಲ್ಲಿ ಮಧ್ಯಾಹ್ನ ಮತ್ತು ಸಂಜೆ ಫಲಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು.
ಅಭಿಜಿತ್ ಪ್ರಭು ಅವರನೇತೃತ್ವದಲ್ಲಿ ಅಲಂಕರಿಸಿದ ಶಿವನ ಮಂಟಪ ನೆರೆದ ಭಕ್ತಾದಿಗಳನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಜಿಎಸ್ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ
CM ವಿರುದ್ಧ ನಕಲಿ ಪೋಸ್ಟ್: ವಿಕ್ರಮ್ ಹೆಗ್ಡೆ, ಗಿಳಿಯಾರ್ ಬಂಧನಕ್ಕೆ ತಾತ್ಕಾಲಿಕ ತಡೆ
Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್
CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು
ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ