ಸ್ವಾತಂತ್ರ್ಯ ಸಂಭ್ರಮ: ದೂರ ಉಳಿದ ಕ್ರೀಡಾಳುಗಳು
Team Udayavani, Aug 16, 2018, 6:00 AM IST
ಜಕಾರ್ತಾ: ಏಶ್ಯಾಡ್ಗಾಗಿ 9 ಗಂಟೆಗಳ ಸುದೀರ್ಘ ವಿಮಾನ ಪ್ರಯಾಣದ ಬಳಿಕ ಜಕಾರ್ತಾ ತಲುಪಿದ ಭಾರತದ ಕ್ರೀಡಾಪಟುಗಳು ಬುಧವಾರದ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಿಂದ ದೂರ ಉಳಿದರು. ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಹ್ಯಾಂಡ್ಬಾಲ್ ತಂಡಗಳ ಸದಸ್ಯರು ಮತ್ತು ಅಧಿಕಾರಿಗಳಷ್ಟೇ ಉಪಸ್ಥಿತರಿದ್ದರು. ಉಳಿದವರೆಲ್ಲ ತಮ್ಮ ಕೊಠಡಿಯಲ್ಲೇ ಉಳಿದು ವಿಶ್ರಾಂತಿ ಪಡೆದರು.
ಭಾರತದ ಹಾಕಿ ತಂಡಗಳೆರಡೂ ಮಂಗಳವಾರ ತಡರಾತ್ರಿ ಜಕಾರ್ತಾ ತಲುಪಿದ್ದವು. ಹೀಗಾಗಿ ತಂಡಗಳ ಸದಸ್ಯರೆಲ್ಲ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು. ಆದರೆ ಇದೇ ಸಂದರ್ಭ ದಲ್ಲಿ 30 ಸೆಕೆಂಡ್ಗಳ ವೀಡಿಯೋವೊಂದರಲ್ಲಿ ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್ ಅವರು ಭಾರತದ ಹಾಕಿ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಏಶ್ಯನ್ ಗೇಮ್ಸ್ನಲ್ಲಿ ಅಭಿ ಮಾನಿಗಳ ಬೆಂಬಲ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ
Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್ ರಾಯಲ್ಸ್ ಸವಾಲು
CSK; ಬಸ್ ಕಂಡಕ್ಟರ್ಗಳಿಗೆ ಚೆನ್ನೈ ಕಿಂಗ್ಸ್ನಿಂದ 8 ಸಾವಿರ ಅಗತ್ಯ ಗಿಫ್ಟ್ !
Central government ಒಪ್ಪಿದರೆ ಪಾಕ್ಗೆ ಭಾರತ ಕ್ರಿಕೆಟ್ ತಂಡ: ರಾಜೀವ್ ಶುಕ್ಲ
T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್ ಗೆಲುವು: 4-0 ಮುನ್ನಡೆ