ಜೆಡಿಎಸ್ ಶಾಸಕನನ್ನೇ ಸೋಲಿಸಲು ಮುಂದಾದರೆ ಭವಾನಿ ರೇವಣ್ಣ?
Team Udayavani, Apr 19, 2018, 11:10 AM IST
ಮೈಸೂರು: ಚುನಾವಣೆಗೆ ಕೆಲ ದಿನಗಳಿರುವ ವೇಳೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಹೊಸ ಬಿರುಗಾಳಿ ಎದ್ದಿದ್ದು ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ಕೆ.ಆರ್.ಕ್ಷೇತ್ರದ ಶಾಸಕ ಸಾರಾ ಮಹೇಶ್ ಅವರನ್ನು ಸೋಲಿಸುವಂತೆ ಒಕ್ಕಲಿಗ ಮುಖಂಡರಿಗೆ ಕರೆ ನೀಡಿರುವ ವಿಡಿಯೋವೊಂದು ಬಹಿರಂಗವಾಗಿದೆ.
ಬಹಿರಂಗಗೊಂಡಿರುವ ವಿಡಿಯೋದಲ್ಲಿ ಮಾತನಾಡುತ್ತಿರುವ ಭವಾನಿ ಅವರು ಈಗ ಅಭ್ಯರ್ಥಿಯಾಗಿರುವ ಅಪ್ಪ ಮಗ ಇಷ್ಟು ದೌರ್ಜನ್ಯ ಮಾಡ್ತಾರೆ. ಇನ್ನು ಶಾಸಕ, ಮಂತ್ರಿಯಾದೆ ಸಾವಿರಾರು ಜನರನ್ನು ತುಳಿದು ಸಾಯಿಸ್ತಾರೆ ಎಂದಿದ್ದಾರೆ.
ಇಡೀ ತಾಲೂಕು ಕಾಪಾಡುವ ಜವಾಬ್ದಾರಿ ನನ್ನದು,ನೀವು ಓಪನ್ ಆಗಿ ಕೆಲ್ಸ ಮಾಡಿ. ನನ್ನ ಹೆಸರು ಹೇಳಿಕೊಂಡೆ ಮಾಡಿ ಎಂದಿದ್ದಾರೆ.
ಮೈಸೂರಿನ ಸಾಲಿಗ್ರಾಮದ ಒಕ್ಕಲಿಗರ ಮುಖಂಡರ ಸಭೆಯಲ್ಲಿ ಈ ಹೇಳಿಕೆ ನೀಡಿರುದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಒಕ್ಕಲಿಗ ಮುಖಂಡರು ‘ಅಕ್ಕಾ.. ದೇವೇಗೌಡರ ಮನೆಯಿಂದ ಕರಿನಾಯಿ ತಂದು ನಿಲ್ಸಿದ್ರೂ ಗೆಲ್ಲಿಸ್ತೀವಿ’ ಎಂದಿದ್ದಾರೆ.
ಜೆಡಿಎಸ್ ಶಾಸಕ ಸಾ.ರಾ .ಮಹೇಶ್ ಅವರ ಪುತ್ರ ಯುವಕನೊಬ್ಬನ ಹಲ್ಲೆ ಪ್ರಕರಣ ದಿಂದ ಸುದ್ದಿಯಾಗಿದ್ದರು. ಆ ಬಳಿಕ ಕೆ.ಆರ್.ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರು ಸ್ಪರ್ಧಿಸಲು ಮುಂದಾಗಿದ್ದರು.
ವಿಡಿಯೋವನ್ನು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಭವಾನಿಯವರ ಹಿಂಬದಿಯಲ್ಲಿ ನಿಂತು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು ಕೊನೆಯಲ್ಲಿ ಭವಾನಿ ಅವರು ಮೊಬೈಲ್ ಆಫ್ ಮಾಡಪ್ಪ ಎಂದಿರುವುದೂ ದಾಖಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾರಾ ಮಹೇಶ್ ‘ಇದು ನನ್ನ ಬಗ್ಗೆ ಹೇಳಿದ್ದಲ್ಲ. ವಿರೋಧಿ ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಹೇಳಿರುವುದು’ ಎಂದಿದ್ದಾರೆ.
ಈ ಬಗ್ಗೆಶಾಸಕ ಸಾರಾ ಮಹೇಶ್, ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ಕಾದುನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ