

Team Udayavani, May 29, 2024, 6:40 AM IST
ಹೊಸದಿಲ್ಲಿ: ಕಳೆದ 24 ವರ್ಷಗಳಲ್ಲಿ ನಿರಂತರವಾಗಿ ನಿಂದನೆಗಳನ್ನು ಎದುರಿಸುತ್ತಾ ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನನ್ನನ್ನು ಸಾವಿನ ವ್ಯಾಪಾರಿ, ಕ್ರಿಮಿ ಎಂದೆಲ್ಲ ಕರೆದರು. ನನ್ನ ಸಂಸತ್ ಸಹೋದ್ಯೋಗಿಗಳು ಈ ನಿಂದನೆಗಳನ್ನು ಲೆಕ್ಕ ಮಾಡಿ 101 ಬೈಗುಳಗಳು ಎಂದು ಹೇಳಿದರು.
ಎಲೆಕ್ಷನ್ ಇದ್ದರೂ, ಇಲ್ಲದಿದ್ದರೂ ವಿಪಕ್ಷಗಳ ನಾಯಕರು ನನ್ನನ್ನು ದೂಷಿಸುತ್ತಲೇ ಇರುತ್ತಾರೆ. ಬೈಗುಳಗಳನ್ನು ಕೇಳಿ ಕೇಳಿ ನಾನೀಗ “ಗಾಲಿ ಪ್ರೂಫ್’ (ಬೈಗುಳ ಅಭೇದ್ಯ) ಆಗಿಬಿಟ್ಟಿದ್ದೇನೆ. ನಿಂದನೆಗಳು ನನಗೆ ಅಭ್ಯಾಸವಾಗಿಬಿಟ್ಟಿದೆ, ನಾನು ಅದಕ್ಕೆ ಒಗ್ಗಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ “ವಿಪಕ್ಷಗಳು “ಮುಸ್ಲಿಂ ಮೀಸಲಾತಿ’ ಎಂಬ ಮೋಸದ ಜಾಲವನ್ನು ಬೀಸಿ, ದೇಶದ ಜನರನ್ನು ವಂಚಿಸುತ್ತಿವೆ. ನಾನು ಅದರ ಬಗ್ಗೆ ದೇಶವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ವಿಪಕ್ಷಗಳ ಇಂಥ ಆರೋಪವನ್ನು ನಾನು ತ್ಯಾಜ್ಯ(ಗಾಬೇìಜ್) ಎಂದು ಭಾವಿಸುತ್ತೇನೆ ಮತ್ತು ಅದನ್ನು ನಾನು ಗೊಬ್ಬರವಾಗಿ ಮಾರ್ಪಟು ಮಾಡಿ ಮರುಬಳಕೆ(ರೀಸೈಕಲ್) ಮಾಡುತ್ತೇನೆ ಎಂದರು.
Ad
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್ನ ಶವ ಪತ್ತೆ – ಫ್ಯಾನ್ಸ್ ಶಾಕ್
Optimistic: ಆಶಾವಾದಿಗಳಾಗೋಣ
You seem to have an Ad Blocker on.
To continue reading, please turn it off or whitelist Udayavani.