Election; ಧರ್ಮ ಯುದ್ಧಕ್ಕೆ ಎಲ್ಲ ಸಮಾಜದವರ ಬೆಂಬಲ ಸಿಕ್ಕಿದೆ: ದಿಂಗಾಲೇಶ್ವರ ಸ್ವಾಮೀಜಿ
ಇವರಿಬ್ಬರು ನಮ್ಮ ಪರಮಶಿವನ ಬಂಧುಗಳಯ್ಯ...ಜೋಶಿಯವರಿಗೆ ಸೋಲಿನ ಭಯ ಕಾಡುತ್ತಿದೆ...
Team Udayavani, Apr 15, 2024, 6:45 PM IST
ಹುಬ್ಬಳ್ಳಿ: ಮನೆಗೆ ಹೋದರೂ ಮಾತನಾಡಿಸದಂತಹ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಇದೀಗ ಕರೆದು ಮಾತನಾಡಿಸುತ್ತಿದ್ದಾರೆ, ಎಲ್ಲ ಸಮಾಜಗಳೊಂದಿಗೆ ಸಭೆ ಮಾಡುತ್ತಿದ್ದಾರೆ ಎಂದರೆ ಅವರಿಗೆ ಸೋಲಿನ ಭಯ ಕಾಡಿದಂತೆ ಕಾಣುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರಂಭಿಸಿರುವ ಧರ್ಮ ಯುದ್ಧಕ್ಕೆ ಎಲ್ಲ ಸಮಾಜದವರು ಬೆಂಬಲ ನೀಡಿದ್ದಾರೆ.
ನನ್ನ ಪರ ಒಲವು ತೋರುವವರನ್ನು ಹೆದರಿಸಿ ಬೆದರಿಸುವ ಕೆಲಸ ನಡೆದಿದೆ. ಏ.18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು ಮಠಾಧೀಶರು ಭಾಗಿಯಾಗುವುದು ಬೇಡ ಎಂದಿದ್ದೇನೆ. ಒಂದು ಮಠದ ಸಮಸ್ಯೆಗಾಗಿ ನಾನು ಸ್ಪರ್ಧಿಸುತ್ತಿಲ್ಲ, ನಾಡಿನ ಹಿತಕ್ಕಾಗಿ ನಿಂತಿದ್ದೇವೆ. ನಮ್ಮ ಬೆಂಬಲಿಗರನ್ನು ಹೆದರಿಸುವ, ಬೆದರಿಸುವ ಕೆಲಸ ಮಾಡುತ್ತಿದ್ದಾರೆ, ಭಯವನ್ನುಂಟು ಮಾಡುತ್ತಿದ್ದಾರೆ, ಆದರೆ ಭಕ್ತರು ನಾವೆಲ್ಲರೂ ಒಳಗಿಂದಳೊಗೆ ಎಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಜನರ ಮನವೂಲಿಸುವ ಕೆಲಸ ಮಾಡಬೇಕೆ, ಹೊರತು, ಹೆದರಿಸಿ, ಬೆದರಿಸುವ ಕೆಲಸ ಮಾಡಬಾರದು ಎಂದರು.
ನಮ್ಮ ತೇಜೋವಧೆಗೆ ಯತ್ನಗಳನ್ನು ಮಾಡುತ್ತಿದ್ದು, ಅದನ್ನು ಮಾಡಿಸುತ್ತಿದ್ದಾರೆ, ಆಸೆ ಆಮಿಷಗಳನ್ನು ಹಾಕಿ ಸುತ್ತಾ ನಿಂದನೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನದಿಂದ ಇರಬೇಕು ಎಂದು ಅಕ್ಕಮಹಾದೇವಿ ಹೇಳಿದರೇ, ಬಸವಣ್ಣನವರು, ನಿಂದಿಸುವನು ಒಬ್ಬ, ಸ್ತುತಿಸುವವನೊಬ್ಬ ಇವರಿಬ್ಬರು ನಮ್ಮ ಪರಮಶಿವನ ಬಂಧುಗಳಯ್ಯ ಎಂದು ಹೇಳಿದ್ದಾರೆ. 900 ವರ್ಷಗಳ ಹಿಂದೆಯೇ ನಿಂದನೆ ಮಾಡುವವರಿ ದ್ದರು ಎಂದು ಎಲ್ಲ ಶರಣರು ಹೇಳಿದ್ದಾರೆ. ಶಿಶುನಾಳ ಶರೀಫರು ನಿಂದಕರ ಇರುಬೇಕು, ಊರೊಳಗೆ 10 ಹಂದಿಗಳಿಗೆ ಸಮಾನ, ಹಂದಿಗಳ ಇದ್ದರೆ ಊರು ಪಾಡು, ನಿಂದಕರಿದ್ದರೇ ನಾವೆಲ್ಲ ಸ್ವಚ್ಛವಾಗಿರುತ್ತೇವೆ ಎಂದಿದ್ದಾರೆ. ನಿಂದಕರಿದ್ದರೇ ನನ್ನಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ