ಚೀಟಿ ಎತ್ತಿ ರಾಜ್ಯಸಭೆ ಚುನಾವಣೆ ಫಲಿತಾಂಶ: ಹೈಕೋರ್ಟ್ಗೆ ಸಿಂಘವಿ ಮೊರೆ
Team Udayavani, Apr 7, 2024, 1:33 AM IST
ಶಿಮ್ಲಾ: ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆ ಯಲ್ಲಿ ಪರಾಭವಗೊಂಡ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘವಿ, ತಮ್ಮ ಸೋಲಿನ ವಿರುದ್ಧ ಹಿಮಾ ಚಲ ಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನಿ ನಲ್ಲಿ ಅಸ್ತಿತ್ವದಲ್ಲೇ ಇರದ ನಿಯಮದ ಮೂಲಕ ನನ್ನನ್ನು ಸೋಲಿಸಲಾಗಿದೆ ಎಂದು ಸಿಂಘವಿ ದೂರಿದ್ದಾರೆ.
ಚೀಟಿ ಎತ್ತುವ ಮೂಲಕ ಪರಾಭವಗೊಂಡ ಅಭ್ಯರ್ಥಿಯನ್ನು ನಿರ್ಧರಿಸುವ ಚುನಾವಣ ಅಧಿಕಾರಿಯ ನಡೆ ನ್ಯಾಯ ಬದ್ಧವಾಗಿಲ್ಲ. ಸ್ಪರ್ಧೆಯಲ್ಲಿ ಉಭಯ ಸ್ಪರ್ಧಿಗಳು ಸಮಾನ ಮತಗಳನ್ನು ಪಡೆದಾಗ, ಸಂಪ್ರದಾಯದಂತೆ ಚೀಟಿ ಎತ್ತಿದ ವ್ಯಕ್ತಿಯನ್ನು ವಿಜೇತನನ್ನಾಗಿ ನಿರ್ಧರಿಸಲಾಗುತ್ತದೆ ಎಂದಿದ್ದಾರೆ.