![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
Election: ಮೋದಿ 3.0 ಸರಕಾರಕ್ಕೆ ಈಗಲೇ ಅಜೆಂಡಾ! ಸಚಿವರಿಗೆ ಗೆಲುವಿನ ಮಂತ್ರ ಬೋಧಿಸಿದ ಮೋದಿ
Team Udayavani, Mar 4, 2024, 8:51 AM IST
![Election: ಮೋದಿ 3.0 ಸರಕಾರಕ್ಕೆ ಈಗಲೇ ಅಜೆಂಡಾ! ಸಚಿವರಿಗೆ ಗೆಲುವಿನ ಮಂತ್ರ ಬೋಧಿಸಿದ ಮೋದಿ](https://www.udayavani.com/wp-content/uploads/2024/03/modi-7-620x381.jpg)
ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಬಹುದಾದ “ಅಭಿವೃದ್ಧಿ ಕಾರ್ಯ ಕ್ರಮಗಳ ಕ್ರಿಯಾ ಯೋಜನೆ’ ಹಾಗೂ “ವಿಕಸಿತ ಭಾರತ - 2047′ ಪ್ರಗತಿಯ ಮಂತ್ರದ ಕುರಿತು ವಿವರವಾದ ಮಾಹಿತಿ ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ನಡೆದ 2ನೇ ಅವಧಿಯ ಕೊನೆಯ ಮಂತ್ರಿ ಪರಿಷತ್ ಸಭೆಯಲ್ಲಿ ಹಂಚಿ ಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಈ ಸಭೆ 8 ಗಂಟೆಗಳ ಕಾಲ ನಡೆಯಿತು.
ಜತೆಗೆ ಚುನಾವಣೆ ವೇಳೆ ಅಭ್ಯರ್ಥಿಗಳು ಯಾವ ರೀತಿ ನಡವಳಿಕೆ ಪ್ರದರ್ಶಿಸ ಬೇಕು ಎಂಬ ಕುರಿತು ಪ್ರಧಾನಿ ಮೋದಿ ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಮೇಯಲ್ಲಿ ಸರಕಾರ ರಚನೆಯಾದ ಬಳಿಕ ತತ್ಕ್ಷಣವೇ ಕೈಗೊಳ್ಳಲಾಗುವ 100 ದಿನಗಳ ಅಜೆಂಡಾದ ಕುರಿತು ಸವಿಸ್ತಾರ ಮಾಹಿತಿಯನ್ನು ಸಭೆಯಲ್ಲಿ ಒದಗಿಸಲಾಯಿತು ಎಂದು ಸರಕಾರದ ಮೂಲಗಳು ತಿಳಿಸಿವೆ.
ವಿಕಸಿತ ಭಾರತದ ನೀಲನಕ್ಷೆ
“ವಿಕಸಿತ ಭಾರತ’ದ ನೀಲ ನಕ್ಷೆಯನ್ನು ತಯಾರಿಸಲು ಎರಡು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಇಡೀ ಸರಕಾರವು, ಎಲ್ಲ ಸಚಿವಾಲಯಗಳು ಇದರಲ್ಲಿ ಪಾಲ್ಗೊಂಡಿವೆ. ರಾಜ್ಯ ಸರಕಾರಗಳು, ತಜ್ಞರು, ಕೈಗಾರಿಕ, ನಾಗರಿಕ ಮತ್ತು ವೈಜ್ಞಾನಿಕ ಸಂಘ ಸಂಸ್ಥೆಗಳ ಜತೆಗಿನ ಚರ್ಚೆಗಳ ಪರಿಣಾಮವೇ ಅಭಿವೃದ್ಧಿ ಭಾರತಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಗುರುತಿಸಲಾಗಿದೆ. “”ಈ ಕ್ರಿಯಾಯೋಜನೆಗಾಗಿ 2,700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು, ಸೆಮಿನಾರ್ಗಳನ್ನು ವಿವಿಧ ಹಂತಗಳಲ್ಲಿ ನಡೆಸಲಾಗಿದೆ. 20 ಲಕ್ಷಕ್ಕೂ ಅಧಿಕ ಯುವ ಜನರಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರ ದೂರದೃಷ್ಟಿ
ವಿಕಸಿತ ಭಾರತ ನೀಲ ನಕ್ಷೆಯೂ ಸಂಪೂರ್ಣ ವಾಗಿ ರಾಷ್ಟ್ರ ದೂರದೃಷ್ಟಿ, ಆಕಾಂಕ್ಷೆಗಳು, ಗುರಿಗಳು ಮತ್ತು ಕ್ರಿಯಾ ಯೋಜನೆಗಳನ್ನು ಒಳಗೊಂಡಿದೆ. ಆರ್ಥಿಕ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳು, ಸಹನೀಯ ಬದುಕು, ಸುಗಮ ವ್ಯಾಪಾರ, ಮೂಲ ಸೌಕರ್ಯ, ಸಮಾಜ ಕಲ್ಯಾಣದ ಗುರಿಗಳನ್ನು ಇದರಲ್ಲಿ ಕಾಣ ಬಹುದು ಎಂದು ಮೂಲಗಳು ತಿಳಿಸಿವೆ.
ಮೋದಿ ಹೇಳಿದ್ದೇನು?
– ವಿವಿಧ ಹಂತಗಳಲ್ಲಿ 2,700 ಸಭೆಗಳು, ಕಾರ್ಯಾಗಾರಗಳು
– 20 ಲಕ್ಷ ಅಧಿಕ ಯುವಜನರು ನೀಡಿದ ಸಲಹೆಗಳು ಸ್ವೀಕಾರ
– ವಯಸ್ಸಾಗುತ್ತಿರುವ ಜನಸಂಖ್ಯೆ ಮತ್ತು ಸವಾಲಗಳು ಬಗ್ಗೆ ಚರ್ಚೆ
– ಆರ್ಥಿಕಾಭಿವೃದ್ಧಿ, ಸಹನೀಯ ಬದುಕು, ಸುಗಮ ವ್ಯಾಪಾರ,
– ಜನ ಕಲ್ಯಾಣದ ಗುರಿ
ಇದನ್ನೂ ಓದಿ: ಚಾಲಕ ಮೊಬೈಲ್ನಲ್ಲಿ ಕ್ರಿಕಟ್ ವೀಕ್ಷಿಸಿದ್ದೇ ರೈಲು ಅಪಘಾತಕ್ಕೆ ಕಾರಣ: ಅಶ್ವಿನಿ ವೈಷ್ಣವ್
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.