ಉತ್ತೇಜನ ಮತ್ತು ಸುಧಾರಣೆಗಳ ವಿವೇಕಯುತ ಸಂಯೋಜನೆ
Team Udayavani, May 20, 2020, 12:45 PM IST
ಸಾಂದರ್ಭಿಕ ಚಿತ್ರ
ಕೇಂದ್ರ ಹಣಕಾಸು ಸಚಿವರು ಸತತವಾಗಿ 5 ದಿನಗಳ ಕಾಲ ಮಾಡಿದ ಪ್ರಕಟಣೆಗಳು ಉತ್ತೇಜನ ಮತ್ತು ಸುಧಾರಣೆಗಳ ವಿವೇಕಯುತ ಸಂಯೋಜನೆಯಾಗಿವೆ. ಕೋವಿಡ್ -19ರಿಂದ ಉಂಟಾಗಿರುವ ಬಿಕ್ಕಟ್ಟು, ವ್ಯಾಪಾರ ಮತ್ತು ಉದ್ಯಮಗಳಿಗೆ ಎದುರಾಗಿರುವ ಅಲ್ಪಾವಧಿಯ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಮಧ್ಯಮಾವಧಿಯ ಬೆಂಬಲ ಮತ್ತು ಮಹತ್ವದ ನೀತಿ ಸುಧಾರಣೆಗಳ ಸ್ಪಷ್ಟ ಚಿಂತನೆ ನಡೆಸಿ ಪ್ಯಾಕೇಜನ್ನು ಪ್ರಸ್ತುತಪಡಿಸಲಾಗಿದೆ. ಇದು ದಿಗ್ಬಂಧನ ನಂತರ ಆರ್ಥಿಕ ಸುಧಾರಣೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಅಲ್ಪಾವಧಿಯಲ್ಲಿ ತಕ್ಷಣಕ್ಕೆ ಸಮಸ್ಯೆ ಬಗೆಹರಿಸುವ ಸಂಬಂಧ ಪಿಎಂಜಿಕೆವೈ ಮೂಲಕ ನಗದು ಮತ್ತು ಆಹಾರ ನೆರವು ನೀಡುತ್ತಿರುವುದು, ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ ತೆರಿಗೆ ರಿಯಾಯಿತಿ, ಇಪಿಎಫ್ ಮೂಲಕ ಹೆಚ್ಚಿನ ಹಣ ಜನರ ಕೈಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ತೆರಿಗೆ ಸಲ್ಲಿಕೆಯ ಗಡುವಿನ ಸಡಿಲಿಕೆ,
ಹೊಸ ಚಟುವಟಿಕೆಗಳ ಸ್ಥಗಿತ ಮತ್ತು ಐಬಿಸಿ ನಡಾವಳಿ ಗಳಿಂದ ಕೋವಿಡ್-19 ಸಂಬಂಧಿತ ಸಾಲವನ್ನು ಹೊರಗಿಟ್ಟು ವ್ಯಕ್ತಿ ಮತ್ತು ಉದ್ಯಮಗಳಿಗೆ ತಕ್ಷಣದ ಪರಿಹಾರ ನೀಡಲಾಗಿದೆ.
ಕೃಷಿ ಸುಧಾರಣೆಗಾಗಿ ಹಳೆ ಕಾನೂನುಗಳಿಂದ ಈ ವಲಯವನ್ನು ವಿತ್ತ ಸಚಿವರು ಮುಕ್ತಗೊಳಿಸಿದ್ದಾರೆ. ಉತ್ತಮ ಬೆಲೆ ಪಡೆಯುವ ಪ್ರಕ್ರಿಯೆಗಾಗಿ, ಅಗತ್ಯ ಸರಕುಗಳ ಕಾಯ್ದೆಯ ತಿದ್ದುಪಡಿ ಈ ವಲಯದ ನಿರೀಕ್ಷೆಯಾಗಿತ್ತು. ಒಂದು ಲಕ್ಷ ಕೋಟಿ ರೂ.ಗಳ ಕೃಷಿ ನಿಧಿಯಿಂದಾಗಿ ಮೂಲ ಸೌಕರ್ಯ ಬಲಪಡಿಸುವುದಕ್ಕೆ, ಕೃಷಿ ಉತ್ಪಾದನೆ ಹೆಚ್ಚಳಕ್ಕೆ, ರೈತರಿಗೆ ಉತ್ತಮ ಬೆಲೆ ಸಿಗಲು ಕಾರಣವಾಗುತ್ತದೆ.
ಗಣಿಗಾರಿಕೆ ವಲಯ ಪ್ರಮುಖ ಹೂಡಿಕೆಗಳಿಂದ ವಂಚಿತವಾಗಿದೆ. ಈ ವಲಯದ ಉದಾರೀಕರಣಕ್ಕೆ ಸಿಐಐ ಮನವಿ ಮಾಡಿತ್ತು. ಈಗ ಕಲ್ಲಿದ್ದಲು, ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಜಾಗತಿಕ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸಬಹುದಾಗಿದೆ. ಕೈಗಾರಿಕಾ ಮೂಲಸೌಕರ್ಯಗಳ ಉನ್ನತೀಕರಣ, ರಾಜ್ಯಗಳಿಗೆ ನೀಡುವ ಶ್ರೇಯಾಂಕದಿಂದಾಗಿ ಹೂಡಿಕೆ ದಾರರಿಗೆ ಅನುಕೂಲವಾಗುತ್ತದೆ. ಇದರ ಜತೆಗೆ ಹೂಡಿಕೆದಾರರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳು ಸಿಗುವ ಮಾಹಿತಿವುಳ್ಳ ಕೈಪಿಡಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಕೈಗಾರಿಕಾ ಎಸ್ಟೇಟ್ ಮತ್ತು ಪಾರ್ಕ್ಗಳಲ್ಲಿ
ಭೂಮಿಯನ್ನು ಹೂಡಿಕೆ ಮಾಡಲು ಸಿದ್ಧ ಮಾಹಿತಿ ಯನ್ನು ಒದಗಿಸುವ ಪೋರ್ಟಲ್, ಅಂತಹ ಮಾರ್ಗದರ್ಶನಕ್ಕೆ ಬಹಳ ಉಪಯುಕ್ತವಾಗಿದೆ.
ದೀರ್ಘಕಾಲದ ಲಾಕ್ಡೌನ್ಗಳಿಂದಾಗಿ ಎಂಎಸ್ ಎಂಇಗಳು ಎದುರಿಸುತ್ತಿರುವ ಒತ್ತಡದ ದೃಷ್ಟಿಯಿಂದ, ಉತ್ತೇಜನಾ ಪ್ಯಾಕೇಜ್ ನೀಡಲಾಗಿದೆ. ತೊಂದರೆ
ಗೀಡಾದ ಈ ವಲಯಕ್ಕೆ ಸಹಾಯ ಮಾಡಲು ಹಲವಾರು ಕ್ರಮಗಳನ್ನು ಒಳಗೊಂಡಿರುವುದು ಸಂತೋಷ ತಂದಿದೆ. ಎಂಎಸ್ಎಂಇಗಳ ಪುನರ್ ವ್ಯಾಖ್ಯಾನದಲ್ಲಿ
ಪ್ರಸ್ತಾವಿತ ವಹಿವಾಟು ಮಿತಿಗಳನ್ನು ಮರುಪರಿಶೀಲಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ. ಏಕೆಂದರೆ ಈ ಮಿತಿಗಳು ತೀರಾ ಕಡಿಮೆ ಎಂದು ಪರಿಗಣಿಸಲಾಗಿದ್ದು, ಇದರಿಂದ ಈ ಘಟಕಗಳು ಬೆಳೆಯಲು ಪ್ರೊತ್ಸಾಹಿಸಿದಂತಾಗುವುದಿಲ್ಲ.
ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗುವ ವಲಸಿಗರು ಜೀವನೋಪಾಯ ಕಂಡುಕೊಳ್ಳಲು ಎಂನ ರೇಗಾದ ಹಂಚಿಕೆಯನ್ನು ಸಹ ಹೆಚ್ಚಿಸಲಾಗಿದೆ. ಇಡೀ
ಪ್ಯಾಕೇಜ್ ಜಾರಿಗೆ ಬರುತ್ತಿದ್ದಂತೆ ಕ್ರಮೇಣ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವನ್ನು ಉದ್ಯಮ ಹೊಂದಿದೆ. ವಲಸೆ ಕಾರ್ಮಿಕರಿಗೆ ಬಾಡಿಗೆ
ವಸತಿ ಯೋಜನೆಯ ಘೋಷಣೆಯು ದೀರ್ಘಾವಧಿ ಯಲ್ಲಿ ಅವರ ಸ್ಥಿತಿ ಸುಧಾರಣೆಯಲ್ಲಿ ಅರ್ಥಪೂರ್ಣ ಬದಲಾವಣೆಗೆ ಕಾರಣವಾಗ ಬಹುದು.
ಕೆಲವೊಮ್ಮೆ ಉದ್ಯಮವು ಅನೇಕ ರಚನಾತ್ಮಕ ಸುಧಾರಣೆಗಳನ್ನು ಬೇಡುತ್ತದೆ. ಅವುಗಳನ್ನು ಸಮಯಕ್ಕನುಗುಣವಾಗಿ ಕಾರ್ಯಗತಗೊಳಿಸಿದರೆ, ಆರ್ಥಿಕತೆಯ ಸ್ಪರ್ಧಾತ್ಮಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆರ್ಥಿಕತೆಯು ಚೇತರಿಸಿಕೊಂಡಾಗ ಅದು ಶಕ್ತಿಯುತವಾಗಿರುತ್ತದೆ ಮತ್ತು ಹೆಚ್ಚು
ಸ್ಪರ್ಧಾತ್ಮಕವಾಗಿರುತ್ತದೆ. ಇದಲ್ಲದೆ, 20 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ವೆಚ್ಚ ಮಾಡುವುದರಿಂದ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ
ಬೀರುತ್ತದೆ. 2020-21ನೇ ಹಣಕಾಸು ವರ್ಷದಲ್ಲಿ ಅಂದಾಜು ಕೊರತೆಯ ಪರಿಣಾಮದೊಂದಿಗೆ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗದಂತೆ ಇದನ್ನು
ಸಾಧಿಸುವಲ್ಲಿ ಯಶಸ್ವಿಯಾಗಿರುವ ಸರ್ಕಾರ ಮತ್ತು ಅದರ ನೀತಿ ನಿರೂಪಕರಿಗೆ ಇದರ ಶ್ರೇಯ ಸಲ್ಲಬೇಕು. ಇದು ಭವಿಷ್ಯದಲ್ಲಿ ಉದ್ಭವಿಸಬಹುದಾದ ಅನಿರೀಕ್ಷಿತ
ಕ್ರಮಗಳಿಗೆ ಹೆಚ್ಚುವರಿ ಅವಕಾಶವನ್ನು ನೀಡುತ್ತದೆ.
● ಚಂದ್ರಜಿತ್ ಬ್ಯಾನರ್ಜಿ, ಮಹಾನಿರ್ದೇಶಕರು, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್