Automation effect: ಇನ್ಫೋಸಿಸ್ನಿಂದ 9,000 ಉದ್ಯೋಗಿಗಳ ‘ಬಿಡುಗಡೆ’
Team Udayavani, Jan 20, 2017, 12:19 PM IST
ಬೆಂಗಳೂರು : ದೇಶದ No.2 ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಕಳೆದ ಒಂದು ವರ್ಷದಲ್ಲಿ ಆಟೋಮೇಶನ್ (ಯಾಂತ್ರೀಕರಣ) ಪರಿಣಾಮವಾಗಿ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ 9,000 ಮಂದಿ ಉದ್ಯೋಗಿಗಳನ್ನು “ಬಿಡುಗಡೆ’ ಮಾಡಿರುವುದಾಗಿ ಕಂಪೆನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಕೃಷ್ಣಮೂರ್ತಿ ಶಂಕರ್ ತಿಳಿಸಿದ್ದಾರೆ.
ಆಟೋಮೇಶನ್ ಪರಿಣಾಮವಾಗಿ “ಬಿಡಗಡೆ’ಮಾಡಲಾಗಿರುವ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ ಈ ಉದ್ಯೋಗಿಗಳನ್ನು ಪ್ರಕೃತ ಹೆಚ್ಚು ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಲಾಗಿದೆ ಎಂದವರು ಹೇಳಿದರು.
‘ಆಟೋಮೇಶನ್ ಪರಿಣಾಮವಾಗಿ ನಾವು ಪ್ರತೀ ತ್ತೈಮಾಸಿಕದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಬಿಡುಗಡೆ ಮಾಡಿ ಅವರನ್ನು ವಿಶೇಷ ಕೋರ್ಸ್ಗಳಲ್ಲಿ ತೊಡಗಿಸಲು ಅವರಿಗೆ ತರಬೇತಿ ನೀಡುತ್ತಿದ್ದೇವೆ; ಇದರಿಂದಾಗಿ ಹೊಸ ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರಿಗೆ ಅನುಕೂಲವಾಗುತ್ತಿದೆ’ ಎಂದು ಶಂಕರ್ ಅವರು ವಿಶ್ವ ಆರ್ಥಿಕ ವೇದಿಕೆಯ ‘Global shapers’ ನ ಬೆಂಗಳೂರು ಘಟಕ ಸಂಘಟಿಸಿದ್ದ ಸಮಾವೇಶದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
2015ರಲ್ಲಿ ಫಿಲಿಪ್ಸ್ ಸೇರಿಕೊಂಡಿದ್ದ ಶಂಕರ್ ಅವರು, “ಮುಂಬರುವ ದಿನಗಳಲ್ಲಿ ಆಟೋಮೇಶನ್ ಪ್ರಕ್ರಿಯೆಯು ತೀವ್ರಗೊಳ್ಳಲಿದೆ; ಇದರ ಪರಿಣಾಮವಾಗಿ ಉದ್ಯೋಗಿಗಳ ನೇಮಕಾತಿ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿದೆ’ ಎಂದು ಹೇಳಿದರು.
“ಉದ್ಯೋಗಿಗಳ ನೇಮಕಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಪೂರ್ತಿಯಾಗಿ ಆಟೋಮೇಶನ್ನ ಪರಿಣಾಮವಲ್ಲ; ಬದಲು ವಿಶ್ವ ಆರ್ಥಿಕತೆಯಲ್ಲಿ ಆಗುತ್ತಿರುವ ಬದಲಾವಣೆ, ನಿಧಾನ ಗತಿ ಇತ್ಯಾದಿಗಳಿಂದಾಗಿ ಕಂಪೆನಿಯ ಆರ್ಥಿಕ ನಿರ್ವಹಣೆ ಚೆನ್ನಾಗಿ ಆಗುತ್ತಿಲ್ಲ’
‘ಈ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಇನ್ಫೋಸಿಸ್ 5,700 ಮಂದಿಯನ್ನು ನೇಮಿಸಿಕೊಂಡಿದೆ. ಆದರೆ ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 17,000 ಮಂದಿಯನ್ನು ನೇಮಿಸಿಕೊಂಡಿತ್ತು. ಕಳೆದ ಡಿಸೆಂಬರ್ ತ್ತೈಮಾಸಿಕದಲ್ಲಿ ಇನ್ಫೋಸಿಸ್ನ ಒಟ್ಟು ಉದ್ಯೋಗಿಗಳ ಸಂಖ್ಯೆ ವಸ್ತುತಃ ಕಡಿಮೆಯಾಗಿತ್ತು. ಭಾರತದ ನಂ.2 ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ಗೆ ಇದೊಂದು ವಿಲಕ್ಷಣಕಾರಿ ವಿದ್ಯಮಾನವಾಗಿದೆ; ಪ್ರಕೃತ ಇನ್ಫೋಸಿಸ್ ಉದ್ಯೋಗಿಗಳ ಒಟ್ಟು ಸಂಖ್ಯೆ 1,99.763 ಆಗಿದೆ’ ಎಂದು ಶಂಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ