ನಾಶಿಕ್ ರೈತರಿಗೆ ಬಂಪರ್ ಈರುಳ್ಳಿ:ಸಾಗಾಟಕ್ಕೆ ಹೆಚ್ಚುವರಿ ಸರಕು ರೈಲು
Team Udayavani, Feb 20, 2017, 11:39 AM IST
ಮುಂಬಯಿ: ಈರುಳ್ಳಿ ಬೆಳೆಯುವ ನಾಶಿಕ್ ರೈತರಿಗೆ ಈ ಬಾರಿ ಬಂಪರ್ ಬೆಳೆ ಕೈಗೆ ಬಂದಿದೆ. ಇದನ್ನು ತ್ವರಿತವಾಗಿ ಮಾರುಕಟ್ಟೆಗಳಿಗೆ ಸಾಗಿಸುವ ಮೂಲಕ ರೈತರಿಗೆ ನೆರವಾಗಲು ಭಾರತೀಯ ರೈಲ್ವೆ ಅತ್ಯಂತ ಸಕಾಲಿಕ ಕ್ರಮತೆಗೆದುಕೊಂಡಿದ್ದು ಆ ನಿಟ್ಟಿನಲ್ಲಿ ಹೆಚ್ಚುವರಿ ಸರಕು ಸಾಗಣೆ ರೈಲನ್ನು ಇಂದು ಸೇವೆಗೆ ಇಳಿಸಿದೆ.
ನಾಶಿಕ್ನಲ್ಲಿ ರೈತರಿಗೆ ಒಲಿದಿರುವ ಬಂಪರ್ ಈರುಳ್ಳಿ ಬೆಳೆಯನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸೆಂಟರ್ ರೈಲ್ವೇ ಈಗಾಗಲೇ ಮರು ಸರಕು ಸಾಗಣೆ ರೈಲುಗಳನ್ನು ಸೇವೆಗೆ ಒದಗಿಸಿದ್ದು ಇದೀಗ ಇನ್ನೂ ಒಂದು ಹೆಚ್ಚುವರಿ ರೈಲನ್ನು ಒದಗಿಸುವ ಇನ್ನೂ ಶೇ.30ರಷ್ಟು ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ಸಾಗಿಸುವುದು ಸುಲಭವಾಗಿದೆ.
ದೇಶದಲ್ಲಿ ಬೆಳೆಯಲಾಗುವ ಈರುಳ್ಳಿಯ ಶೇ.30ರಷ್ಟು ಪ್ರಮಾಣವನ್ನು ನಾಶಿಕ್ನಲ್ಲೇ ಬೆಳೆಯಲಾಗುತ್ತದೆ. ಆದರೆ ಈರುಳ್ಳಿಯ ಬೆಲೆ ಈಚಿನ ದಿನಗಳಲ್ಲಿ ಬಂಪರ್ ಬೆಳೆಯಿಂದಾಗಿ ಗಮನಾರ್ಹವಾಗಿ ಕುಸಿದಿದೆ. ಆದರೂ ತ್ವರಿತ ಹಾಗೂ ಸಕಾಲಿಕ ಸಾಗಾಟ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸೆಂಟ್ರಲ್ ರೈಲ್ವೇ ನಾಶಿಕ್ ರೈತರಿಗೆ ನೆರವಾಗಿದೆ.
ಅಂದ ಹಾಗೆ ಭಾರತೀಯ ರೈಲ್ವೆ ಈ ವರ್ಷ ಕಳೆದ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚು ಸರಕನ್ನು ಸಾಗಿಸುತ್ತಿದೆ. ಸೌತ್ ಸೆಂಟ್ರಲ್ ರೈಲ್ವೆ ಮೂಲಕ ನಾಲ್ಕನೇ ಹೆಚ್ಚುವರಿ ಸರಕು ಸಾಗಣೆ ರೈಲನ್ನು (ಸೆಂಟ್ರಲ್ ರೈಲ್ವೇ ಈಗಾಗಲೇ ಮೂರನ್ನು ಒದಗಿಸಿದೆ) ಒದಗಿಸುವ ಇನ್ನೂ ಶೇ.30ರಷ್ಟು ಹೆಚ್ಚು ಈರುಳ್ಳಿಯನ್ನು ಸಾಗಿಸಲು ಸಾಧ್ಯವಾಗುವಂತೆ ಕೇಂದ್ರ ರೈಲ್ವೇ ಸಚಿವರು ನೀಡಿರುವ ಆದೇಶದ ಪ್ರಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ನರೇಂದ್ರ ಪಾಟೀಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ