ತುರ್ತುಸಾಲದ ಆ್ಯಪ್ ಗಳು, ಎನ್ಬಿಎಫ್ ಸಿಗಳ ವಿರುದ್ಧ ಆರ್ಬಿಐಗೆ 8000 ದೂರು!
Team Udayavani, Jul 19, 2022, 9:14 PM IST
ನವದೆಹಲಿ: ಇತ್ತೀಚೆಗೆ ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಹಣ ನೀಡುವ ಆ್ಯಪ್ಗ್ಳು ಸಾಕಷ್ಟು ಹುಟ್ಟಿಕೊಂಡಿವೆ. ಹಾಗೆಯೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ ಸಿ) ಪಾಲೂ ಇದರಲ್ಲಿ ಜೋರಾಗಿದೆ. ಇಂತಹ ಆ್ಯಪ್ ಗಳು ಹಣ ಮರುವಸೂಲಿ ಮಾಡಲು ಕಠಿಣ ದಾರಿ ಹಿಡಿಯುತ್ತಿವೆ. ಇದರ ವಿರುದ್ಧ ಆರ್ಬಿಐಗೆ 7,813ಕ್ಕೂ ಅಧಿಕ ದೂರುಗಳು ತಲುಪಿವೆ!
ಈ ಪೈಕಿ ಗರಿಷ್ಠ ದೂರುಗಳು ಕ್ರಮವಾಗಿ ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ, ಪ.ಬಂಗಾಳ, ತಮಿಳುನಾಡು, ಗುಜರಾತ್ನಿಂದ ಕೇಳಿಬಂದಿವೆ. ಆರ್ಬಿಐ ಇದನ್ನು ಬಗೆಹರಿಸಲು ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿ, ಇದರ ವಿವಿಧ ಮುಖಗಳನ್ನು ಪರಿಶೀಲಿಸಲು ತಿಳಿಸಿದೆ.
ಆರ್ಬಿಐ ನಿಯಂತ್ರಿತ ಬ್ಯಾಂಕ್ಗಳು, ಕಾನೂನು ವ್ಯಾಪ್ತಿಯಿಂದ ಹೊರಗಿರುವ ಆ್ಯಪ್ ಗಳನ್ನು ಪರಿಶೀಲಿಸಲು ತಿಳಿಸಿದೆ. ಕಾನೂನು ವ್ಯಾಪ್ತಿಯಲ್ಲಿಲ್ಲದ ಆ್ಯಪ್ ಗಳು, ಎನ್ಬಿಎಫ್ ಸಿಗಳ ಪ್ರತಿನಿಧಿಗಳು ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುವುದು, ಅವಾಚ್ಯ ಶಬ್ದ ಬಳಸುವುದನ್ನು ಮಾಡುತ್ತಿದ್ದಾರೆ. ಸಾಲ ತೆಗೆದುಕೊಳ್ಳುವಾಗ ಇದನ್ನೆಲ್ಲ ಚಿಂತಿಸದ ಗ್ರಾಹಕರು ಈಗ ಚಿಂತೆಗೊಳಗಾಗಿ ದೂರು ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್