ಲಾಕರ್‌ ಮಾತ್ರ ನಮ್ಮದು ಹೊಣೆಗಾರಿಕೆ ನಮ್ಮದಲ್ಲ


Team Udayavani, Jun 26, 2017, 3:45 AM IST

locker.jpg

ನವದೆಹಲಿ: ಮನೆಯಲ್ಲಿ ಕಳ್ಳರ ಕಾಟ ಎಂದು ಬ್ಯಾಂಕುಗಳ ಲಾಕರ್‌ನಲ್ಲಿ ಇಡುವ ಚಿನ್ನ ಅಮೂಲ್ಯ ದಾಖಲೆಗಳಿಗೆ ಗ್ಯಾರಂಟಿ ಇಲ್ಲವೇ? ಹೌದು, ಇಂಥ ಪ್ರಶ್ನೆ ಉದ್ಭವಿಸಿರುವುದು ಆರ್‌ಬಿಐ ನೀಡಿರುವ ಮಾಹಿತಿಯಿಂದ. ಏಕೆಂದರೆ, ಯಾವುದೇ ಬ್ಯಾಂಕಿನ ಶಾಖೆಯಲ್ಲಿ ದರೋಡೆ ಯಾಗಿ ಲಾಕರ್‌ನಲ್ಲಿ ಇಟ್ಟಿರುವ ಎಲ್ಲ ವಸ್ತುಗಳು ಕಳೆದುಹೋದರೆ ಇದಕ್ಕೆ ಬ್ಯಾಂಕ್‌ ಹೊಣೆಯಲ್ಲ. ಇದಕ್ಕೆ ಯಾವುದೇ ಪರಿಹಾರ ಕೂಡ ಸಿಗಲ್ಲ ಎಂದು ಆರ್‌ಬಿಐ ಹೇಳಿದೆ.

ಆರ್‌ಟಿಐ ಅಡಿ ಸಲ್ಲಿಸಲಾಗಿದ್ದ ಅರ್ಜಿ  ಯೊಂದಕ್ಕೆ ಉತ್ತರಿಸಿರುವ ದೇಶದ ಪರಮೋತ್ಛ ಬ್ಯಾಂಕ್‌, ಅಕ್ಷರಶಃ ಗ್ರಾಹಕರಿಗೆ ಆಘಾತ ನೀಡಿದೆ. ಈ ಉತ್ತರದಿಂದ ಬೇಸರಗೊಂಡಿರುವ ಅರ್ಜಿದಾರ ವಕೀಲ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬಾಡಿಗೆದಾರ-ಮಾಲೀಕ ಸಂಬಂಧ: ಕುಶ್‌ ಕಾಲಾÅ ಎಂಬ ವಕೀಲರು ಲಾಕರ್‌ಗಳ ಬಗ್ಗೆ ಮಾಹಿತಿ ಕೋರಿ ಆರ್‌ಬಿಐ ಮತ್ತು ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿದ್ದರು. ಲಾಕರ್‌ ವಿಚಾರದಲ್ಲಿ ಮಾತ್ರ ಖಾತೆದಾರರ ಜತೆ ಮನೆಯನ್ನು ಬಾಡಿಗೆಗೆ
ಕೊಡುವ ಮಾಲೀಕ ಮತ್ತು ಬಾಡಿಗೆದಾರರ ನಡುವೆ ಯಾವ ಸಂಬಂಧ ಇರುತ್ತದೆಯೋ ಅದನ್ನೇ ಅನುಸರಿಸಲಾಗುತ್ತದೆ ಎಂದು ಅವು ಹೇಳಿವೆ. ಹೀಗಾಗಿ, ಲಾಕರ್‌ ಹೊಂದಿದವರೇ ಅದರಲ್ಲಿರುವ ಅಮೂಲ್ಯ ವಸ್ತುಗಳಿಗೆ
ಹೊಣೆಗಾರರಾಗಬೇಕಾಗುತ್ತದೆ.

ಒಕ್ಕೂಟದ ಆರೋಪ: ಲಾಕರ್‌ಗಳ ಬಗ್ಗೆ ಬ್ಯಾಂಕ್‌ಗಳು ನೀಡಿರುವ ವಿವರಣೆ ನೀಡಿದ್ದಕ್ಕೆ ಆಕ್ಷೇಪ ಮಾಡಿರುವ ಅವರು ಬ್ಯಾಂಕ್‌ಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುವ ಗುಂಪುಗಳ ಕೂಟಗಳಾಗಿವೆ ಎಂದು ದೂರಿದ್ದಾರೆ. ಅವುಗಳು ತಮ್ಮ ಸೇವೆಯನ್ನು ಉತ್ತಮಪಡಿಸುವುದಕ್ಕೆ ಹಿಂದೇಟು ಹಾಕುತ್ತಿವೆ ಎಂದಿದ್ದಾರೆ. ಈ ಬಗ್ಗೆ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ದೂರು ನೀಡಿರುವ ಅವರು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

ಮನೆಯಲ್ಲೇ ಇಡಬಹುದಲ್ಲವೇ?: ಖಾತೆದಾರರೇ ಹೊಣೆ ವಹಿಸಿಕೊಳ್ಳುವುದಾದರೆ ಅಮೂಲ್ಯ ವಸ್ತುಗಳಿಗೆ ವಿಮೆ ಮಾಡಿಸಿ ಮನೆಯಲ್ಲಿಯೇ ಇರಿಸಿಕೊಳ್ಳಲು ಅವಕಾಶ ಉಂಟು. ವಾರ್ಷಿಕವಾಗಿ ನಿಗದಿಪಡಿಸಿರುವ ಶುಲ್ಕ ನೀಡಿ ಲಾಕರ್‌ನಲ್ಲಿ ವಸ್ತುಗಳನ್ನು ಇರಿಸಿಕೊಳ್ಳುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ್ದಾರೆ. 

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಪ್ರಕಾರ
1. ಮನೆ ಮಾಲೀಕ, ಬಾಡಿಗೆದಾರ ಎಂಬ ಬ್ಯಾಂಕ್‌ಗಳ ವಾದಕ್ಕೆ ತಿರಸ್ಕಾರ. ಏಕೆಂದರೆ ಅದು ಗ್ರಾಹಕರ ವಿರುದ್ಧವಾಗಿರುವುದರಿಂದ ಒಪ್ಪಲು ಸಾಧ್ಯವಿಲ್ಲ.
2. ಲಾಕರ್‌ ದರೋಡೆಯಾಗಿದೆ ಎಂಬುದನ್ನು ಖಾತೆದಾರ ಅಥವಾ ಗ್ರಾಹಕ ಸಾಬೀತುಪಡಿಸಬೇಕು.
3. ಬ್ಯಾಂಕ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಷ್ಟ ಉಂಟಾಗಿದೆ ಎಂದು ಸಾಬೀತುಪಡಿಸಿದರೆ ನಷ್ಟ ಹೊಂದಿದ
ವಸ್ತುವಿನ ವಿರುದ್ಧ ಪರಿಹಾರ ಪಡೆಯಬಹುದು.
4. ಪರಿಹಾರದ ಮೊತ್ತ ಅಲ್ಪವಾದರೆ ಗ್ರಾಹಕರು ವೇದಿಕೆಗೆ ಮನವಿ ಮಾಡಿಕೊಳ್ಳಲು ಅವಕಾಶ ಉಂಟು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.