ಕೇರಳದಲ್ಲಿ ಜಡಿಮಳೆ; 1 ಬಲಿ; ಮೂರು ಡ್ಯಾಮ್ಗಳ ಶಟರ್ ಓಪನ್
Team Udayavani, Jul 31, 2018, 12:37 PM IST
ತಿರುವನಂಪುರ : ಕೇರಳದ ವಿವಿಧ ಭಾಗಗಳಲ್ಲಿ ಜಡಿಮಳೆಯಾಗುತ್ತಿದ್ದು ಇಂದು 74 ವರ್ಷ ಪ್ರಾಯದ ವ್ಯಕ್ತಿಯೋರ್ವರು ವಿದ್ಯುದಾಘಾತಕ್ಕೆ ಬಲಿಯಾಗಿದ್ದಾರೆ.
ಈ ನಡುವೆ ಕೇರಳದ ಮೂರು ಅಣೆಕಟ್ಟುಗಳ ಶಟರ್ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಡ್ಯಾಮ್ಗಳೆಂದರೆ ತಿರುವನಂಪುರಂ ನೆಯ್ನಾರ್, ಅರುವಿಕ್ಕರ ಮತ್ತು ಪೆಪ್ಪಾರ. ಈ ಡ್ಯಾಮಗಳಲ್ಲಿನ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣಕ್ಕೆ ಶಟರ್ ತೆರೆಯಲಾಗಿದೆ ಎಂದು ರಾಜ್ಯದ ಪ್ರಕೋಪ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.