ಗೂಡುದೀಪ ಉರುಳಿ 4 ಮನೆಗೆ ಬೆಂಕಿ; 15 ಮಂದಿಗೆ ಗಾಯ
Team Udayavani, Oct 30, 2017, 4:41 PM IST
ತಾಮ್ಲೂಕ್, ಪಶ್ಚಿಮ ಬಂಗಾಲ : ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಗೂಡುದೀಪ ಉರುಳಿಬಿದ್ದು ನಾಲ್ಕು ಕಚ್ಚಾ ಮನೆಗಳಿಗೆ ಬೆಂಕಿ ತಗುಲಿ ಕನಿಷ್ಠ ಹದಿನೈದು ಮಂದಿ ಸುಟ್ಟ ಗಾಯಗಳಿಗೆ ಗುರಿಯಾದ ಘಟನೆ ವರದಿಯಾಗಿದೆ.
ನಿನ್ನೆ ಭಾನುವಾರ ರಾತ್ರಿ ಜಗಧಾತ್ರಿ ಪೂಜೆಯ ಸಂದರ್ಭದಲ್ಲಿ ಜನರು ಗೂಡು ದೀಪಗಳನ್ನು ಬೆಳಗಿಸುತ್ತಾ ಪಟಾಕಿಗಳನ್ನೂ ಸುಡುತ್ತಿದ್ದರು.
ಈ ನಡುವೆ ಒಂದು ಗೂಡುದೀಪ ಮನೆಯೊಂದರ ಮೇಲೆ ಉರುಳಿ ಬಿದ್ದು ಬಳಿಕ ಅದು ಇತರ ಮೂರು ಮನೆಗಳಿಗೂ ಹಬ್ಬಿತು.
ಗಾಯಾಳುಗಳಲ್ಲಿ ಇಬ್ಬರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ಇವರ ಸ್ಥಿತಿ ಗಂಭೀರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.