18ನೇ ಶತಮಾನದ ಭಾರತೀಯ ದೇವಸಹಾಯಂಗೆ ಸಂತ ಪದವಿ
Team Udayavani, May 16, 2022, 6:50 AM IST
ಚೆನ್ನೈ: ತಮಿಳುನಾಡಿನಲ್ಲಿ 18ನೇ ಶತಮಾನದಲ್ಲಿ ಜಾತೀಯತೆ ವಿರೋಧಿಸಿ ಹೋರಾಡಿದ್ದ ದೇವಸಹಾಯಂ ಅವರನ್ನು ವ್ಯಾಟಿಕನ್ ದೇಶವು ಸಂತನೆಂದು ಘೋಷಿಸಿದೆ. ಪಾದ್ರಿಯ ಪದವಿ ಪಡೆಯದೇ ಸಂತ ಪದವಿ ಪಡೆದ ಸಾಮಾನ್ಯ ಕ್ರೈಸ್ತ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಅಂದಹಾಗೆ, ದೇವಸಹಾಯಂ ಅವರಿಗೆ ಸಂತ ಪದವಿ ನೀಡುವ ಪ್ರಸ್ತಾವನೆಗೆ ಪೋಪ್ ಅವರು ಕಳೆದ ನವೆಂಬರ್ನಲ್ಲೇ ಒಪ್ಪಿಗೆ ನೀಡಿದ್ದರು. ಈಗ ಅವರಿಗೆ ಸಂತ ಪದವಿ ಪ್ರದಾನ ಮಾಡಲಾಗಿದೆ.
ಯಾರಿವರು ದೇವಸಹಾಯಂ?
ತಿರುವಾಂಕೂರ್ ಸಾಮ್ರಾಜ್ಯವಿದ್ದ ಸಮಯದಲ್ಲಿ ಕನ್ಯಾಕುಮಾರಿಯಲ್ಲಿ ಹಿಂದೂ ಧರ್ಮದವರಾಗಿ ಜನಿಸಿದ್ದ ನೀಲಕಂದನ್ ಪಿಳೈ, 1745ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ “ದೇವಸಹಾಯಂ’ ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಆಗಿನ ಕಾಲಘಟ್ಟದಲ್ಲಿ ತಿರುವಾಂಕೂರ್ ಪ್ರಾಂತ್ಯದಲ್ಲಿದ್ದ ಜಾತಿವಾದವನ್ನು ಪ್ರಬಲವಾಗಿ ವಿರೋಧಿಸಿ ಹಲವು ಹೋರಾಟಗಳನ್ನು ನಡೆಸಿದ್ದರು. ಕಾಲಾನಂತರದಲ್ಲಿ ಅವರ ಹತ್ಯೆಯಾಗಿತ್ತು. 2012ರಲ್ಲಿ ದೇವಸಹಾಯಂ ಅವರನ್ನು “ಹುತಾತ್ಮ’ ಎಂದು ವ್ಯಾಟಿಕನ್ ದೇಶ ಗುರುತಿಸಿತ್ತು.
ಇತ್ತೀಚೆಗೆ, ತಮ್ಮ ಗರ್ಭದಲ್ಲಿದ್ದ ಮಗು ಸತ್ತಿದೆಯೆಂದು ವೈದ್ಯರು ಹೇಳಿದ ನಂತರ ದೇವಸಹಾಯಂ ಅವರನ್ನು ಕುರಿತು ಬೇಡಿಕೊಂಡಾಗ ಮಗು ಮತ್ತೆ ಉಸಿರಾಟ ಆರಂಭಿಸಿತು ಎಂದು ಗರ್ಭಿಣಿಯೊಬ್ಬರು ವ್ಯಾಟಿಕನ್ಗೆ ತಿಳಿಸಿದ್ದರು. ಆ ಹಿನ್ನೆಲೆ ದೇವಸಹಾಯಂ ಅವರಿಗೆ ಸಂತ ಪದವಿ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
Arvind Kejriwal ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು
MUST WATCH
ಹೊಸ ಸೇರ್ಪಡೆ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ