ದುಬಾರಿ ಕಾರು ಶೋಕಿ: 3 ಕೋಟಿಗಾಗಿ ಕಿಡ್ನ್ಯಾಪ್‌ ಕಥೆ ಕಟ್ಟಿದ ಯುವಕ!

ಚಿಂದಿ ಆಯುವ ವ್ಯಕ್ತಿಯಿಂದ ಮನೆಗೆ ಫೋನು ; 3 ಕೋಟಿ ಬೇಡಿಕೆ : ಏನಿದು ಕಥೆ?

Team Udayavani, Apr 3, 2019, 11:15 AM IST

Kidnap-Symbolic-Image-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used

ಗುರ್ಗಾಂವ್‌ : 19 ವರ್ಷದ ಈ ಯುವಕನಿಗೆ ಹೈ ಎಂಡ್‌ ಕಾರುಗಳ ಶೋಕಿ. ಕೇವಲ ಶೋಕಿ ಇದ್ದರೆ ಪರ್ವಾಗಿಲ್ಲ ಆದ್ರೆ ಈತನಿಗೆ ಆ ಹೈ ಎಂಡ್‌ ಕಾರುಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ. ಆದರೆ ಅದಕ್ಕಾಗಿ ಆತ ಕಂಡುಕೊಂಡಿದ್ದು ಮಾತ್ರ ಕಿಡ್ನ್ಯಾಪ್‌ ಎಂಬ ಶಾರ್ಟ್‌ ಕಟ್‌ ದಾರಿಯನ್ನು. ಹಾಗಂತ ಆತ ಯಾರೋ ಶ್ರೀಮಂತರ ಮನೆ ಹುಡುಗರನ್ನು ಕಿಡ್ನ್ಯಾಪ್‌ ಮಾಡುವ ಪ್ಲ್ರಾನ್‌ ಮಾಡಲಿಲ್ಲ ಬದಲಿಗೆ ತನ್ನನ್ನೇ ತಾನು ಕಿಡ್ನ್ಯಾಪ್‌ ಮಾಡಿಕೊಂಡ ಈ ಭೂಪ. ಹೈ ಎಂಡ್‌ ಕಾರುಗಳ ಕ್ರೇಝನ್ನು ತಲೆಗೆ ಹತ್ತಿಸಿಕೊಂಡಿದ್ದ ಸಂದೀಪ್‌ ಕುಮಾರ್‌ ಎಂಬ 19 ವರ್ಷದ ಯುವಕ ಮಾರ್ಚ್‌ 29ರಂದು ಮನೆಯಿಂದ ಕ್ರಿಕೆಟ್‌ ಅಕಾಡೆಮಿಗೆಂದು ಹೋದವನು ‘ಕಾಣೆ’ಯಾಗಿದ್ದ. ಇತ್ತ ಮಗ ಕಾಣಿಸದೇ ಇದ್ದಾಗ ಕಂಗಾಲಾದ ಮನೆಯವರು ಗುರ್ಗಾಂವ್‌ ಪೊಲೀಸರಿಗೆ ಮಿಸ್ಸಿಂಗ್‌ ಕಂಪ್ಲೇಂಟ್‌ ಕೊಡುತ್ತಾರೆ. ದೂರು ಸ್ವೀಕರಿಸಿ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಸಂದೀಪನ ಸ್ವಯಂ ಮಿಸ್ಸಿಂಗ್‌ ಹುನ್ನಾರದ ಹಿಂಟ್‌ ಸಿಗುತ್ತದೆ.

ಈ ಪುಣ್ಯಾತ್ಮ ಮಾರ್ಚ್‌ 29ರಂದು ತಪ್ಪಿಸಿಕೊಂಡವನು ಚಿಂದಿ ಆಯುವ ವ್ಯಕ್ತಿಯೊಬ್ಬನಿಗೆ 500 ರೂಪಾಯಿಗಳನ್ನು ನೀಡಿ ತನ್ನ ಸಹೋದರನಿಗೆ ಕರೆ ಮಾಡಿಸಿ ‘ಕಿಡ್ನ್ಯಾಪ್‌’ ಆಗಿರುವ ಮಾಹಿತಿಯನ್ನು ನೀಡುತ್ತಾನೆ ಮಾತ್ರವಲ್ಲದೆ ತನ್ನ ಬಿಡುಗಡೆಗೆ 3 ಕೋಟಿ ರೂಪಾಯಿಗಳ ಬೇಡಿಕೆಯನ್ನು ಆತನ ಮೂಲಕ ನೀಡುತ್ತಾನೆ. ಮತ್ತೆ ಕೆಲವು ದಿನಗಳವರೆಗೆ ಸಮೀಪದ ಊರಲ್ಲಿ ತಲೆಮರೆಸಿಕೊಂಡಿರುತ್ತಾನೆ. ಮಾತ್ರವಲ್ಲದೇ ತನ್ನ ಈ ಕಿಡ್ನ್ಯಾಪ್‌ ನಾಟಕವನ್ನು ಸಾಚಾ ಎಂದು ನಂಬಿಸಲು ಸಂದೀಪ್‌ ತನ್ನ ಬೈಕನ್ನು ದೇವಸ್ಥಾನದ ಹತ್ತಿರ ಅನಾಥವಾಗಿ ಬಿಟ್ಟುಹೋಗಿರುತ್ತಾನೆ. ಮತ್ತೆ ಕೆಲವು ದಿನಗಳ ಬಳಿಕ ಗುರ್ಗಾಂವ್‌ ಗೆ ವಾಪಾಸಾದ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ಪೊಲೀಸರ ಕಣ್ಣಿಗೆ ಬಿದ್ದ ಈತನನ್ನು ಅವರು ಸ್ಥಳೀಯ ಪೊಲೀಸರ ವಶಕ್ಕೊಪ್ಪಿಸುತ್ತಾರೆ. ಬಳಿಕ ಪೊಲೀಸರು ಸಂದೀಪನ ಮನೆಯವರಿಗೆ ಆತನನ್ನು ಹಸ್ತಾಂತರಿಸುವಲ್ಲಿಗೆ ಈ 3 ಕೋಟಿಯ ಕಿಡ್ನ್ಯಾಪ್‌ ಪ್ರಹಸನ ಕೊನೆಗೊಳ್ಳುತ್ತದೆ.

ಇನ್ನು ಪ್ರಾರಂಭದಲ್ಲಿ ಪೊಲೀಸರಿಗೂ ಇದೊಂದು ಕಟ್ಟುಕಥೆ ಎಂದು ಗೊತ್ತಾಗಿರುವುದಿಲ್ಲ. ಸಂದೀಪ್‌ ಪತ್ತೆಯಾದ ಬಳಿಕ ಆತನನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ಕಟ್ಟುಕಥೆಗಳನ್ನು ಹೇಳಿ ಪೊಲೀಸರನ್ನು ನಂಬಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಆತ ಹೇಳುವ ವಿಷಯಕ್ಕೂ ಅಲ್ಲಿನ ಘಟನೆಗಳಿಗೂ ತಾಳೆಯಾಗದೇ ಇದ್ದಾಗ ಪೊಲೀಸರಿಗೆ ಅನುಮಾನ ಕಾಡಲಾರಂಭಿಸುತ್ತದೆ. ಪೊಲೀಸರ ಗದರುವಿಕೆಗೆ ಬೆಚ್ಚಿದ ಯುವಕ ಬಳಿಕ ತಪ್ಪೊಪ್ಪಿಕೊಂಡು ನಿಜಾಂಶವನ್ನು ಬಾಯಿಬಿಡುತ್ತಾನೆ. ‘ತನಗೆ ಕಾರುಗಳ ಶೋಕಿ ಇದ್ದು, ಒಳ್ಳೆಯ ಹೈ ಎಂಡ್‌ ಕಾರನ್ನು ಖರೀದಿಸಬೇಕೆಂಬ ಆಸೆಯಿಂದ ತನ್ನ ಕುಟುಂಬದವರಿಂದ 3 ಕೋಟಿ ಹಣ ಪೀಕಲು ಈ ಕಿಡ್ನ್ಯಾಪ್‌ ನಾಟಕ ಮಾಡಿದೆ’ ಎಂದು ತಪ್ಪೊಪ್ಪಿಕೊಳ್ಳುತ್ತಾನೆ ಸಂದೀಪ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.