New Delhi; ದಾರಿ ವಿಚಾರಕ್ಕೆ ಜಗಳ; ಅಮೇಜಾನ್ ಮ್ಯಾನೇಜರ್ ಗೆ ಗುಂಡಿಕ್ಕಿದ್ದ ಇಬ್ಬರ ಬಂಧನ
Team Udayavani, Aug 31, 2023, 11:10 AM IST
ಹೊಸದಿಲ್ಲಿ: ಅಮೆಜಾನ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ಹರ್ಪ್ರೀತ್ ಗಿಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯಂತೆ, ಪ್ರಮುಖ ಆರೋಪಿಯನ್ನು ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ ಮತ್ತು ಮತ್ತೋರ್ವ ಆರೋಪಿಯನ್ನು ಬಿಲಾಲ್ ಗನಿ ಎಂದು ಹೆಸರಿಸಲಾಗಿದೆ. ಇಬ್ಬರೂ 18 ವರ್ಷ ಪ್ರಾಯದವರೆಂದು ಹೇಳಲಾಗಿದೆ.
ಇಂದು ಮುಂಜಾನೆ ಸುಮಾರು 2.00 ಗಂಟೆಗೆ ಸಿಗ್ನೇಚರ್ ಸೇತುವೆ ಬಳಿ ಬಿಲಾಲ್ ಗನಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮಂಗಳವಾರ ರಾತ್ರಿ 11.30ರ ಸುಮಾರಿಗೆ ಭಜನ್ ಪುರದ ಸುಭಾಷ್ ವಿಹಾರ್ ನಲ್ಲಿ ಹರ್ಪ್ರೀತ್ ಗಿಲ್ ಮತ್ತು ಅವರ ಸಂಬಂಧಿ ಗೋವಿಂದ್ ಸಿಂಗ್ (32) ಮೇಲೆ ಐವರು ಅಪರಿಚಿತರು ಗುಂಡು ಹಾರಿಸಿದ್ದರು.
ಇತರ ಮೂವರು ಸಹಚರರನ್ನು 23 ವರ್ಷದ ಸೊಹೈಲ್ ಅಲಿಯಾಸ್ ಬವರ್ಚಿ, 23 ವರ್ಷದ ಮೊಹಮ್ಮದ್ ಜುನೈದ್ ಅಲಿಯಾಸ್ ಬಿರಿಯಾನಿ ಮತ್ತು 19 ವರ್ಷದ ಅದ್ನಾನ್ ಅಲಿಯಾಸ್ ಡಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳೆಲ್ಲರೂ ಮಂಗಳವಾರ ರಾತ್ರಿ ಗನಿ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ನಂತರ, ಸುಮಾರು ರಾತ್ರಿ 10.30 ಕ್ಕೆ, ಅವರು ರೈಡ್ ಹೋಗಲು ನಿರ್ಧರಿಸಿದರು. ಈ ವೇಳೆ ಇಬ್ಬರು ಪಿಸ್ತೂಲ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಆರೋಪಿಗಳು ಎರಡು ಸ್ಕೂಟರ್ ಗಳಲ್ಲಿ ಸವಾರಿ ಮಾಡುತ್ತಿದ್ದರು ಮತ್ತು ಭಜನ್ಪುರ ಪ್ರದೇಶದ ಕಿರಿದಾದ ಬೈಲೇನ್ ಗಳೊಳಗೆ ತೆರಳಿದ್ದರು. ಈ ವೇಳೆ ಕಿರಿದಾದ ದಾರಿಯ ಸುಭಾಷ್ ವಿಹಾರ್ ನಲ್ಲಿ ಹರ್ಪ್ರೀತ್ ಗಿಲ್ ಮತ್ತು ಅವರ ಸಂಬಂಧಿ ಇನ್ನೊಂದು ಕಡೆಯಿಂದ ಬರುತ್ತಿದ್ದರು. ಅದು ಆರೋಪಿಗಳ ದಾರಿಯನ್ನು ತಡೆಯಿತು. ಐದು ಆರೋಪಿಗಳು ಅಮೆಜಾನ್ ಮ್ಯಾನೇಜರ್ ಮತ್ತು ಅವರ ಸಂಬಂದಿಯೊಂದಿಗೆ ಜಗಳವಾಡಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಮೊಹಮ್ಮದ್ ಸಮೀರ್ ಹರ್ಪ್ರೀತ್ ಗಿಲ್ ಮತ್ತು ಆತನ ಸಂಬಂಧಿ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹರ್ಪ್ರೀತ್ ಗಿಲ್ ನಿಧನರಾಗಿದ್ದಾರೆಂದು ಆಸ್ಪತ್ರೆಯಲ್ಲಿ ಘೋಷಿಸಲಾಯಿತು. ಅವರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
MUST WATCH
ಹೊಸ ಸೇರ್ಪಡೆ
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ